ಧರೆಗಿಳಿದನೆ ದೇವರು ದೊರೆಯಾಗಿ…!
-ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು.
~~~~~~~~~~~~~~~~~~~~~~~
https://hareraama.in/?p=3657

|| ಹರೇರಾಮ ||

ಋತುರಾಜ ವಸಂತನ ವಿಲಾಸ…!
ಚಿಗುರು ಚೆಲುವಿನ ಚೈತ್ರಮಾಸ…!
ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…!
ಇಂದು ನವಮೀ…!
ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…!
ಸ್ವಯಂ ನಾರಾಯಣನೇ ನರನಾದ ದಿನ…!
ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…!

ಪ್ರಭು ಬರುವುದು ಯುಗಕ್ಕೊಮ್ಮೆ…!
ಈ ದಿನ ಬರುವುದು ವರುಷಕ್ಕೊಮ್ಮೆ…!

ನಿನ್ನೆ ಇರದ, ನಾಳೆ ಬರದ ಈ ದಿನವನ್ನು ಸಾರ್ಥಕಪಡಿಸೋಣ…
ಕಣ್ಮನಗಳನ್ನು ಕದಲದಂತೆ ಕರುಣಾಮೂರ್ತಿಯ ಶ್ರೀಚರಣದಲ್ಲಿರಿಸೋಣ…

ಶ್ರೀರಾಮನವಮಿ ಸಕಲರ ಬಾಳಲ್ಲಿ ಸಂತಸ ತುಂಬಲಿ..

|| ಹರೇರಾಮ ||

ಶ್ರೀರಾಮನವಮೀ…!

ಶ್ರೀರಾಮನವಮೀ…!

Facebook Comments Box