ಬೆಂಗಳೂರಿನ ಗಿರಿನಗರ ಶ್ರೀರಾಮಾಶ್ರಮದ ಪುಣ್ಯಪರಿಸರದಲ್ಲಿ ದಿನಾಂಕ 18/12/2015 ರಂದು ಬ್ರಹ್ಮ್ಯೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಂದ್ರ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಮಹೋತ್ಸವವು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ದಿವ್ಯಸಾನ್ನಿಧ್ಯದಲ್ಲಿ ಯಥೋಚಿತ ಧಾರ್ಮಿಕ ವಿಧಿವಿಧಾನಗಳೋಂದಿಗೆ ಸಂಪನ್ನವಾಗಲಿದೆ.
ಆರಾಧನಾ ಮಹೋತ್ಸವದ ಅಂಗವಾಗಿ, ತೀರ್ಥರಾಜ ಪೂಜೆ, ಪೂರ್ವಾಚಾರ್ಯರ ಸಂಸ್ಮರಣೆ, ಧರ್ಮಸಭೆ, ಶ್ರೀ ರಾಘವೇಂದ್ರ್ರಭಾರತೀ ಪಾಂಡಿತ್ಯಪುರಸ್ಕಾರ ಹಾಗೂ ಶ್ರೀಗಳವರ ಆಶೀರ್ವಚನ ಕಾರ್ಯಕ್ರಮಗಳು ನೆರವೇರಲಿದೆ. ಹಾಗೂ ಅಶೋಕೆ ಮೂಲಮಠ ಪುನರ್ನಿರ್ಮಾಣ ಸಮಿತಿಯವತಿಯಿಂದ ಶ್ರೀಗುರುಪರಂಪರಾಪೂಜೆ, ಮುಷ್ಟಿದ್ರವ್ಯ ಸಮರ್ಪಣೆ ಇತ್ಯಾದಿ ವಿಶೇಷ ಕಾರ್ಯಕ್ರಮಗಳು ಇದೇ ಸಂಧರ್ಭದಲ್ಲಿ ನೆಡೆಯಲಿದೆ.
Facebook Comments Box
Leave a Reply