By : ಡಾ| ಗಜಾನನ ಶರ್ಮಾ

ಬಹುತೇಕ ನಮ್ಮ ಮನೆಗಳಲ್ಲಿ ಈ ಸಲದ ದೀಪಾವಳಿ ಅಂತಹ ಆನಂದದ ವಾತಾವರಣದಲ್ಲಿ ನಡೆಯುತ್ತಿಲ್ಲ.
ಪ್ರಾಯಶಃ ಹಲವರು ಕಾಟಾಚಾರಕ್ಕೆ ಹಬ್ಬ ಮಾಡಿದರೆ , ಇನ್ನು ಕೆಲವರು “ಅಯ್ಯೋ ಮಕ್ಕಳು ಮರಿ ಇದ್ದಾವಲ್ಲ ,ಬಿಡುವ ಹಾಗಿಲ್ಲವಲ್ಲ “ಎಂದು ಆಚರಿಸುತ್ತಿದ್ದಾರೆ.
ಬಹುತೇಕ ಮಂದಿ ಈ ಹಬ್ಬ ಯಾಕಾದರೂ ಬಂದಿದೆಯೋ ಎಂದು ಕೊಳ್ಳುತ್ತಿದ್ದಾರೆ !
ನಮಗೆ ಬೇಡವೆನ್ನಿಸಿದರೂ ಬಾಗಿಲಿಗೆ ಬಂದು ನಿಂತಿದೆ ದೊಡ್ಡ ಹಬ್ಬ !
ಮನಸ್ಸು ಮುದುಡಿದೆಯೆಂದು ಬೆಳಕು ಬೇಡವೆನ್ನಲಾದೀತೆ ? ಗುರುವೆಂಬ ತೇಜಕೇಂದ್ರದಿಂದ ಅರಿವಿನ ಹರಿವಾಗಿ ಹರಿದು ಬರುವುದು ಬೆಳಕಿನ ಹೊಳೆಯೇ .
ನಮ್ಮೊಳಿತನ್ನು ಬೇಡಿ ಪ್ರತಿಸಲದ ದೀಪಾವಳಿಯನ್ನು ಆಚರಿಸಿದ್ದೇವೆ. ಈ ಸಲದ ದೀಪಾವಳಿಯನ್ನು ಗುರುಗಳಿಗೆ ಒಳಿತಾಗಲೆಂಬ ಪ್ರಾರ್ಥನೆಯೊಂದಿಗೆ ಆಚರಿಸೋಣ.
ದೇವರೆದುರು ಕುಳಿತು ” ನಾವಿದ್ದೇವೆ ,ನಾವಿದ್ದೇವೆ ; ಗುರುಗಳ ಜೊತೆಗೆ ನಾವಿದ್ದೇವೆ .” ಎಂದು ಗುರುಗಳ ಜೊತೆ ಸದಾಕಾಲ ನಿಲ್ಲಲು ನಿರಂತರ ಚೈತನ್ಯ ಕೊಡು ಎಂದು ಭಗವಂತನನ್ನು ಪ್ರಾರ್ಥಿಸುತ್ತಾ ದೀಪ ಬೆಳಗೋಣ.ನಮ್ಮೆದೆಯ ಭಾವದೀಪ ಗುರು ಕರುಣಿಸುವ ಅರಿವಿನ ಹರಿವಿನಿಂದ ಬೆಳಗಲಿ.ಎಲ್ಲರ ಮನೆಗಳಲ್ಲಿ , ಎಲ್ಲರ ಮನಗಳಲ್ಲಿ ಆ ದಿವ್ಯ ಜ್ಯೋತಿ ಬೆಳಗಲಿ .ಸಾಮೂಹಿಕವಾಗಿ ಪ್ರಾರ್ಥಿಸೋಣ,

ಹೊತ್ತಿಸೆದೆಯ ಭಾವದೀಪ , ಕಿತ್ತು ಎಸೆಯಲೆಲ್ಲ ಪಾಪ
ಚಿತ್ತದಲ್ಲಿ ಚಿತ್ರಗೊಳಲಿ ಚಿನ್ಮಯ ಚಿದ್ರೂಪ
ಜಗದ ಜಾಡ್ಯವೆಲ್ಲ ತೊಲಗಿ ಜೀವದೊಳಗೆ ದಿವ್ಯ ಮೊಳಗಿ
ಪ್ರೀತಿಯೆಂಬ ಜ್ಯೋತಿ ಬೆಳಗಿ ಭೀತಿ ತೊಲಗಲಿ
……ಜ್ಯೋತಿ ಬೆಳಗಲಿ; ಭೀತಿ ತೊಲಗಲಿ

ಆ ಬೆಳಕು ಅವನೊಳಗನು ತೆರದು ತೋರಲಿ
ನಿನ್ನೊಳಗಿನ ನಿನ್ನನರೆದು ಶೂನ್ಯಗೊಳಿಸಲಿ
ಭರವಸೆಯು ಬಾಡದಿರಲಿ ನಂಬುಗೆಯು ಬೆಳೆಯಲಿ
ಕವಲೊಡೆಯದ ಹಾದಿಯಲ್ಲಿ ಅವನೆಡೆಗೇ ಒಯ್ಯಲಿ

ಬಂಧುಗಳೇ , ನಮ್ಮೆಲ್ಲರ ಭರವಸೆ ಬಾಡದೆ ನಂಬುಗೆ ಬೆಳೆಯುತ್ತಾ ಸಾಗಲಿ.ನಮ್ಮ ದಾರಿಗಳು ಕವಲೊಡೆಯದೇ ಗುರುವಿನ ಜೊತೆಜೊತೆಗೇ ಅವನತ್ತ , ಆ ರಾಮನೆಂಬ ಅಂತಿಮ ಸತ್ಯದತ್ತ ಹಾಯಲಿ.
ಎಲ್ಲರಿಗೂ ದೀಪಾವಳಿಯ ಶುಭ ಕಾಮನೆಗಳು ; ನಿಮಗಾಗಿ ಭಾವಪೂಜೆಯಲ್ಲಿ ಗುರುಗಳು ಬರೆಸಿ ಹಾಡಿಸಿದ ಜ್ಯೋತಿ ಬೆಳಗುವ ಹಾಡು. ಎಲ್ಲರ ಬಾಳಲ್ಲಿ ಪ್ರೀತಿಯೆಂಬ ಜ್ಯೋತಿ ಬೆಳಗಲಿ; ಪ್ರೇತವೆಂಬ ಭೀತಿ ತೊಲಗಲಿ.ಹರೇರಾಮ.

https://soundcloud.com/gajanana-sharma/bhaava-deepa

Facebook Comments Box