ಧರೆಗಿಳಿದನೆ ದೇವರು ದೊರೆಯಾಗಿ…! -ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು. ~~~~~~~~~~~~~~~~~~~~~~~ https://hareraama.in/?p=3657 || ಹರೇರಾಮ || ಋತುರಾಜ ವಸಂತನ ವಿಲಾಸ…! ಚಿಗುರು ಚೆಲುವಿನ ಚೈತ್ರಮಾಸ…! ಬೆಳದಿಂಗಳು ಬೆಳೆಯುವ ಶುಕ್ಲಪಕ್ಷ…! ಇಂದು ನವಮೀ…! ಅಂತಿಂಥಾ ನವಮಿಯಲ್ಲ…ಶ್ರೀರಾಮನವಮೀ…! ಸ್ವಯಂ ನಾರಾಯಣನೇ ನರನಾದ ದಿನ…! ದೊರೆಯ ರೂಪದಲ್ಲಿ ಧರೆಗಿಳಿದ ದೇವರು ಧರೆಯಿಂದ ಸ್ವರ್ಗಕ್ಕೆ ಸೇತುವೆ ಕಟ್ಟಲಾರಂಭಿಸಿದ ದಿನ…! ಪ್ರಭು ಬರುವುದು ಯುಗಕ್ಕೊಮ್ಮೆ…! ಈ ದಿನ… Continue Reading →
ಸಾಗರ, ಕರ್ನಾಟಕ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆದ ಗುರು-ಭಕ್ತ ಸಮಾವೇಶದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಶ್ರೀ ಗುರುಗಳ ಹಾಗೂ ಶ್ರೀಮಠದ ಅಭಿಮಾನಿಗಳು, ಗುರುಭಕ್ತರು ಹಾಗೂ ಹಿಂದೂ ಸಮಾಜದ ರಕ್ಷಕರು ಭಾಗವಹಿಸಿ ಇಂದಿನ ದಿನ ಶ್ರೀಮಠದ ಮೇಲೆ ನಡೆಯುತ್ತಿರುವ ಷಡ್ಯಂತ್ರದ ವಿರುದ್ಧ ಹೋರಾಡಿ ಸಮಾಜವನ್ನು ರಕ್ಷಿಸುವ ಸಂಕಲ್ಪವನ್ನು ಕೈಗೊಂಡರು.
ಯುವ ಚಿಂತಕ, ಭಾಷಣಕಾರ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ವಿದ್ಯುದಾವೇಶಪೂರಿತ ಭಾಷಣ ನೆರೆದ ಸಭೆಯನ್ನು ಉತ್ತೇಜಿಸಿತು.