ಪುಸ್ತಕದ ಕುರಿತಾಗಿ ದೀರ್ಘವಾಗಿ ಮಾತನಾಡಿದ ವಕೀಲರೂ ನ್ಯಾಯವಾದಿಗಳು ಆದ ಶ್ರೀ ಎಂ ಅರ್ ಸತ್ಯನಾರಾಯಣ ರವರು , ಪುಸ್ತಕವನ್ನು ಪ್ರಸನ್ನ ಅನುಭವಿಸಿ ಬರೆದಿದ್ದರಿಂದ ಭಾವ ಇದರಲ್ಲಿ ತುಂಬಿದೆ – ಇದು ಭಾವದಿಂದ ಕೂಡಿದೆಯಾದ್ದರಿಂದ ಭಾಷೆ ಕೂಡ ಅತ್ಯಂತ ಸರಳವಾಗಿದ್ದು ಓದಿಸಿಕೊಂಡು ಹೋಗುತ್ತದೆ – ಅಮೇರಿಕಾದಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಒಬ್ಬ ಸಾಮಾನ್ಯ ತರುಣ ಇಂತಹ ಒಂದು ಕ್ರತಿ ರಚಿಸಿದ್ದಾನೆ ಎಂದರೆ ಸಾಮಾನ್ಯ ಜನರಿಗೆ ಶ್ರೀಗಳ ಮೇಲೆ ಸಾಮಾನ್ಯ ಜನರಿಗೆ ಇರುವ ಪ್ರೀತಿ ಮತ್ತು ಅಭಿಮಾನ ಏನು ಎಂದು ಅರ್ಥವಾಗುತ್ತದೆ ಎಂದರು . ಅಲ್ಲದೆ ಇವತ್ತಿನ ಸಂಕೀರ್ಣ ಸಂದರ್ಭ ಮತ್ತು ಸಾಮಾನ್ಯ ಜನರನ್ನೂ ಆಕರ್ಷಿಸುವ ಕೃತಿ ಯಲ್ಲಿ ಪ್ರಸ್ತಾಪಿಸಿದ ಶ್ರೀಗಳ ಹಲವು ಗುಣಗಳ ಬಗೆಗೆ ಅತ್ಯಂತ ದೀರ್ಘವಾಗಿ ಮಾತನಾಡಿದರು