( ಬುದ್ದಿ ಜೀವಿ ಗಳಲ್ಲಿ) ಒಂದು ಸಣ್ಣ ಮನವಿ:
ಕೆಲವು ನನ್ನ ಸ್ನೇಹಿತರು , ಕೆಲವು ಬರಹಗಾರರು, ಬುದ್ಧಿಜೀವಿಗಳು, ಕೆಲವು ಫೇಸ್ ಬುಕ್ ಸದಸ್ಯರು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಕುರಿತಾಗಿ ಅನಗತ್ಯ ವಾಗಿ ಅವರ ಘನತೆಗೆ ಕುಂದು ತರುವಂತಹ ಪೋಸ್ಟ್ ಗಳನ್ನು ಮಾಡುತ್ತಿದ್ದು ಅದಕ್ಕೆ ಉತ್ತರಿಸುವಂತೆ ಕೇಳುತ್ತಿದ್ದಾರೆ. ಒಬ್ಬೊಬ್ಬರಿಗೆ ಉತ್ತರ ಕೊಡುವುದರ ಬದಲಾಗಿ ನನ್ನ ಭಾವನೆ ಗಳನ್ನು ಈ ಚಿಕ್ಕ ಬರಹ ದ ಮೂಲಕ ಹಂಚಿ ಕೊಳ್ಳುತ್ತಿದ್ದು ತಾವು ಯಾರಾದರೂ ಫೇಸ್ಬುಕ್ ನಲ್ಲಿ ಶ್ರೀಗಳ ಘನತೆಗೆ ಕುಂದಾಗುವಂತಹ ಪೋಸ್ಟ್ ಗಳನ್ನು ಕಂಡಲ್ಲಿ ನನ್ನ ಈ ಪೋಸ್ಟ್ ನ್ನು ಅವರೊಂದಿಗೆ ಹಂಚಿ ಕೊಳ್ಳಬಹುದು.
ಈ ಕೆಳಗಿನ ಬರಹದ ಸಂಪೂರ್ಣ ಜವಾಬ್ದಾರಿ ನನ್ನದೇ!
ಹೆಚ್ಚು ಅಭಿಮಾನ ಮತ್ತು ಒಂಚೂರು ಅಹಂಕಾರ ದಿಂದ ನಾನು ಈ ಮಾತನ್ನು ಹೇಳ ಬಯಸುತ್ತೇನೆ – ಇಲ್ಲಿ ಶ್ರೀಗಳನ್ನು ಪೂಜಿಸುವ, ಆರಾಧಿಸುವ ಸಾವಿರ ಸಾವಿರ ಜನರಿಗೆ ಅಪೇಕ್ಷೆ ಇರುವುದು ಅವರ ಆಶೀರ್ವಾದ ಮಾತ್ರ . ಅಂದರೆ ನಮಗ್ಯಾರಿಗೂ ಕೂಡ ಯಾವುದೇ ಲೌಕಿಕ ಲಾಭದ ಅಸೆ ಇಲ್ಲ – ಮಠದ ಒಂದು ಪೈಸೆ ಹಣ, ಮಠದಿಂದ ಬರಬಹುದಾದ ಕೀರ್ತಿ ಪ್ರತಿಷ್ಠೆ ಇವ್ಯಾವೂ ನಮ್ಮ ಪಟ್ಟಿ ಯಲ್ಲಿ ಇಲ್ಲ – ಶ್ರೀ ರಾಮ ಮತ್ತು ಶ್ರೀ ಗುರುಗಳ ಆಶೀರ್ವಾದ ಮಾತ್ರ ನಮ್ಮ ನೀರೀಕ್ಷೆ – ಅದರಿಂದಾಗಿಯೇ ಅವರ ಲಕ್ಷಾಂತರ ಭಕ್ತರು ಸಮಾಜದಲ್ಲಿ ಅತ್ಯಂತ ಗೌರವ ಯುತವಾಗಿ ಬದುಕುತ್ತಿದ್ದು ಸರಿ ತಪ್ಪುಗಳ ವಿಶ್ಲೇಷಣೆಗಳನ್ನು ಸ್ವತಂತ್ರ ವಾಗಿ ಮಾಡಲು ಸಮರ್ಥರಿದ್ದೇವೆ ಎಂದು ಹೇಳಿಕೊಳ್ಳಲು ಅಭಿಮಾನ ವನ್ನೇ ಪಡಬೇಕು ಅಲ್ಲವೇ?
ಆದರೆ ಮೇಲೆ ಹೇಳಿದ ಎಲ್ಲ ಲೌಕಿಕ ಲಾಭಗಳನ್ನು ಮಠದಿಂದ ಪಡೆದುಕೊಂಡ ಒಂದೆರಡು ಪುಣ್ಯಾತ್ಮರು ನಮ್ಮ ಪ್ರೀತಿಯ ಶ್ರೀ ಸಂಸ್ಥಾನದ ಮೇಲೆ ಕ್ಷುದ್ರ ಆರೋಪಗಳನ್ನು ಹೊರಿಸಿದ್ದಾರೆ.
(ಇರಲಿ ಹೊನ್ನಾವರದ ಮ್ಯಾಜಿಸ್ಟ್ರೇಟ್ ಎದುರು ಕೊಟ್ಟ ದೂರಿನ ವಿಸ್ತ್ರತ ಕಾಪಿಯನ್ನು ನಾನೂ ನೋಡಿದ್ದೇನೆ – ಒಬ್ಬ ಮೂರನೆಯ ವ್ಯಕ್ತಿ ಆಗಿ ಅದನ್ನು ಅಭ್ಯಸಿಸುತ್ತಿದ್ದು ಅದರಲ್ಲಿ ಇರುವ ಅಂಶಗಳ ಮೇಲೆ ಸದ್ಯದಲ್ಲೇ ಬರೆಯುತ್ತೇನೆ). ಮೊದಲ ದೂರಿನ ಬಗೆಗೆ ನಾನು ವ್ಯಕ್ತ ಪಡಿಸಿದ ಅಭಿಪ್ರಾಯದಂತೆಯೇ (link) ಉಚ್ಚ ನ್ಯಾಯಾಲಯ ಅದನ್ನು ಗಂಭೀರ ವಾಗಿ ತೆಗೆದುಕೊಂಡಿಲ್ಲ!!
ಇಂತಹ ಒಂದು ಸಂದರ್ಭದಲ್ಲಿ , ಅದಾಗಲೇ ಹೇಳಿದಂತೆ ಸ್ವತಂತ್ರ ವಾಗಿ ಯೋಚಿಸಬಲ್ಲ ಲಕ್ಷ ಲಕ್ಷ ಜನ ಶ್ರೀಗಳ ಮೇಲೆ ಇರುವ ಆ ದೂರಿನಲ್ಲಿ ಪ್ರಾಮಾಣಿಕತೆ ಇಲ್ಲ ಎಂಬುದು ಮೇಲ್ನೋಟಕ್ಕೆ ಗೊತ್ತಾಗುವ ಸಂಗತಿ – ಎಂದು ಅಭಿಪ್ರಾಯ ಪಡುತ್ತಿದ್ದರೂ ಶ್ರೀಗಳನ್ನು ಗೊತ್ತಿರದವರು ಮಾತ್ರ ಶ್ರೀಗಳ ಘನತೆಗೆ ತಕ್ಕದಲ್ಲದಂತೆ ಮಾತನಾಡುವ ಘಟನೆಗಳಾಗುತ್ತಿವೆ.
ಅದೂ ಸರಿ . ತಮಗೆ ಈ ವಿಷಯದ ಬಗೆಗೆ ಮಾತನಾಡಲೇ ಬೇಕು ಎಂದು ಇದ್ದಲ್ಲಿ ಅಲ್ಲಿ ಹೋಗಿ ಒಮ್ಮೆ ಅವರನ್ನು ಬೇಟಿ ಮಾಡಿ .
ಅದೂ ಸಾದ್ಯ ವಿಲ್ಲ ವೆಂದದಾಲ್ಲಿ, ಆ ದೂರು ಪ್ರಾಮಾಣಿಕ ವಲ್ಲ ಎಂಬ ಅಭಿಪ್ರಾಯದ ಹಿಂದಿನ ಕಾರಣಗಳನ್ನು ಅರಿತು ಕೊಳ್ಳಲು ಪ್ರಯತ್ನ ಪಡಿ .
ಅದಕ್ಕೂ ಸಮಯವಿಲ್ಲ ವೆಂದಾದಲ್ಲಿ ದಯವಿಟ್ಟು ಒಮ್ಮುಖ ವಾಗಿ ಶ್ರೀಗಳ ಘನತೆಗೆ ಕುಂದಾಗುವಂತಹ ಅಭಿಪ್ರಾಯ ಗಳನ್ನು ವ್ಯಕ್ತ ಪಡಿಸಲು ಮುಂದಾಗುವ ಮುನ್ನ ಇನ್ನೊಮ್ಮೆ ಯೋಚನೆ ಮಾಡಿ.
ಹೌದು – ವಾಕ್ ಸ್ವಾತಂತ್ರ ಸಂವಿಧಾನ ದತ್ತ ಹಕ್ಕು ಆದರೆ ಅದು absolute ಅಲ್ಲ . ಶ್ರೀಗಳ ಮೇಲೆ ಅವರ ಘನತೆಗಳಿಗೆ ಕುಂದಾಗುವಂತಹ ಬರವಣಿಗೆ ನೇರವಾಗಿ ಭಾರತೀಯ ದಂಡ ಸಂಹಿತೆ ಯ ಸೆಕ್ಷನ್ 295-A ಕೆಳಗೆ ಜಾಮೀನು ರಹಿತ ಅಪರಾಧ ಮತ್ತು ಅದಕ್ಕೆ 3 ವರ್ಷಗಳವೆರೆಗೆ ಜೈಲು ವಾಸವನ್ನು ಘನ ನ್ಯಾಯಾಲಯ ವಿಧಿಸಬಹುದು ಎಂಬುದನ್ನು ತಮ್ಮೆಲ್ಲರ ಗಮನಕ್ಕೆ ತರುತ್ತೇನೆ ..
– ಸೆಕ್ಷನ್ ೨೯೫ a ಉದ್ದೇಶ ಪೂರ್ವಕವಾಗಿ ಒಂದು ಸಮುದಾಯದ ಜನರ ಧಾರ್ಮಿಕ ನಂಬಿಕೆಗಳಿಗೆ ಅವಮಾನ/ಹಾನಿ ಮಾಡುವುದು ಅತವ ಹಾನಿ ಮಾಡಲು ಪ್ರಯತ್ನಿಸುವುದನ್ನು ತಡೆಯುತ್ತದೆ – ಹೀಗೆ ಹಾನಿ ಮಾಡುವುದು ಬರವಣಿಗೆ ಅಥವಾ ಮಾತುಗಳು ಅಥವಾ ಇನ್ನು ಯಾವುದೇ ಮಾಧ್ಯಮ ಗಳ ಮೂಲಕ ಆಗಿರಬಹುದು .
ಆದ್ದರಿಂದ ಅನಾವಶ್ಯಕವಾಗಿ ಶ್ರೀಗಳ ಮೇಲೆ ಅವರ ಘನತೆಗಳಿಗೆ ಕುಂದು ತರುವ ಬರವಣಿಗೆ ಗಳ ಮೂಲಕ ಲಕ್ಷಾಂತರ ಜನರ ಧಾರ್ಮಿಕ ನಂಬಿಕೆ ಗಳಿಗೆ ಹಾನಿ ಮಾಡಬೇಡಿ ಎಂದು ಎಚ್ಚರಿಸುತ್ತೇನೆ, ಕೋರಿಕೊಳ್ಳುತ್ತೇನೆ..
–
ಪ್ರಸನ್ನ ಎಂ ಮಾವಿನಕುಳಿ, ಬಿ.ಇ, ಎಲ್.ಎಲ್.ಬಿ
September 9, 2014 at 9:55 PM
hareraama.
timley required article. truely said and truely warning article. thanq prasannanna.
September 9, 2014 at 10:36 PM
Harerama, Thanks much Prasanna.
September 9, 2014 at 11:56 PM
Very good write up. Congratulations, Sri Prasanna.
Regarding the punishments for posting defamatory comments / status / write-ups etc., on the Social Sites through the media of Internet ; I think the appropriate Sections would be: (1) Section 500 of the Indian Penal Code (i.e. Defamation) and (2) Section 66-A of the Information Technology Act-2000, as amended in the year 2008, which has come into force from 05-02-2009. Please check up and make the necessary changes in your writeup if you find correct. Sorry for the interference.
September 10, 2014 at 12:46 AM
public tv web sitenalli – pradanige dooru lekhanakke 2 reply bandide. Adakke nimma E lekanada Link paste Madabahude…..Matigedigalu Tilidu kollali ಘನತೆಗಳಿಗೆ ಕುಂದಾಗುವಂತಹ ಬರವಣಿಗೆ ನೇರವಾಗಿ ಭಾರತೀಯ ದಂಡ ಸಂಹಿತೆ ಯ ಸೆಕ್ಷನ್ 295-A ಕೆಳಗೆ ಜಾಮೀನು ರಹಿತ ಅಪರಾಧ ಮತ್ತು ಅದಕ್ಕೆ 3 ವರ್ಷಗಳವೆರೆಗೆ ಜೈಲು ವಾಸವನ್ನು ಘನ ನ್ಯಾಯಾಲಯ ವಿಧಿಸಬಹುದು
Hare Raama.
September 10, 2014 at 9:26 AM
Hareraama. Thank you Prasanna for this article.
First case should be against Ravi Belagere and his Hai Bengaluru.
September 12, 2014 at 6:04 PM
Who is Ravi Belagere ??????? and what is hoi Bengaluru??????
September 10, 2014 at 12:06 PM
Hare Raama!
This is a very good warning / request! Highly appreciated!
Thanks a ton!
Hare Raama
September 10, 2014 at 12:28 PM
Namaskara. Oodi Pratikriyisida ellarigu dhanyavadagalu. Ganapathi hegade yavrige namaskragalu. Houdu tavu heliddu atyanta sari aagide. Defamation case nu hakabahudu. aadare idannu yake nanu prastapiside andare, nanna prakara ee chillare vyaktigalinda namma preetiya samsthanada mana hani endu helalikke swalpa hinjarike ayitu..adakkoskara namma bhavanegalige dhakke madiddakke iruva section barede aste..tamma salahegalige/abhimanakke mattu olleya matugalige tumbu hradayada dhanyavadagalondige..
September 10, 2014 at 4:05 PM
Dear Prasanna
This is good warning. Higly appreciated.
September 10, 2014 at 4:55 PM
Shre gurubhyonamaha,Egina Buddijeevigalu eruvude swacha samajada aaroghya kedisalu. Hare Raama.
September 12, 2014 at 9:30 PM
Sec-295 A bagge vistruta vivara beku.Ottu breyuvarege SADBUDDIYANU needali.HARE RAAMA.
September 13, 2014 at 4:11 PM
ಸಂಧರ್ಭೋಚಿತ ಲೇಖನ, ಮಾನ್ಯ ಪ್ರಸನ್ನ ಮಾವಿನಕುಳಿ ಅವರಿಗೆ ಧನ್ಯವಾದಗಳು. ವಾಕ್ ಸ್ವಾತಂತ್ರ್ಯ ಎಂದು ಶ್ರೀಗಳ ವಿರುದ್ಧ ಬಾಯಿಗೆ ಬಂದಂತೆ ಬೊಗಳಿದರೆ, ಮನಸ್ಸಿಗೆ ಬಂದಂತೆ ಬರೆದರೆ ಅದರ ಪರಿಣಾಮ ನೆಟ್ಟಗಾಗುವುದಿಲ್ಲ್, ಮಠದ ಶಿಶ್ಯರರು ಸುಮ್ಮನೆ ಕೈ ಕಟ್ಟಿ ಕುಳಿತುಕೊಳ್ಳುವುದಿಲ್ಲ ಎನ್ನುವುದು ವಿಕೃತ ಮನಸ್ಸಿನವರಿಗೆ ತಿಳಿದಿರಲಿ, ಕೆಲವು ಪೀತ ಪತ್ರಿಕೆಗಳು, ಸಂಘಟನೆಗಳು ಶ್ರೀಗಳ ವಿರುದ್ಧ ಹೇಳಿಕೆ ಕೊಡುತ್ತಿವೆ, ಆದರೆ ಲಕ್ಶಾಂತರ ಶಿಷ್ಯರು ಈ ಬಗ್ಗೆ ತಲೆ ಕೆಡಿಸಿಕೊಳ್ಳುವಿದಿಲ್ಲ. ರಾಮ ಇದ್ದಾಗ ರಾವಣನೂ ಇದ್ದ, ಕೃಷ್ಣ ಇದ್ದಾಗ ಕಂಸನೂ ಇದ್ದ, ಅದೇ ರಾವಣನ ವಂಶಸ್ಥರು ಹಾಗೂ ಕಂಸನ ವಂಶಸ್ಥರು ಈಗಲೂ ಇದ್ದಾರೆ, ಅಂತಿಮವಾಗಿ ರಾಮನಿಗೇ ಜಯ, ಕೃಶ್ಣನಿಗೇ ಜಯ, ಶ್ರೀಗಳಿಗೇ ಜಯ.
Manjunath Rajalakshmi, Tumkur
September 13, 2014 at 9:28 PM
ಕಾನೂನಿನ ಅರಿವು ಲವಲೆಏಶವೂ ಇಲ್ಲದವರು, ಗುರುಗಳಭಾವಚಿತ್ರವನ್ನಾದರೂ ಒಮ್ಮೆ ನೋಡದವರು ಬಾಯಿಗೆ ಬಂದಂತೆ ಮಾತನಾದುವುದಕ್ಕೆ ಇದು ಸರಿಯಾದಉತ್ತರ
September 16, 2014 at 12:31 PM
ಮಾನ್ಯ ಪ್ರಸನ್ನ ಮಾವಿನಕುಳಿ ಅವರೇ ನಿಮಗೆ ಶ್ರೀಗಳ, ಶ್ರೀರಾಮನ ಅನುಗ್ರಹದಿಂದ ಸದಾ ಶುಭವಾಗಲಿ ಎಂದು ಹರಸುತ್ತೇನೆ. ಪ್ರಚಾರ ಮಾಧ್ಯಮದಲ್ಲಿನ ವಿಚಾರವನ್ನು ಓದಿ ತುಂಬಾ ಸಂಕಟ, ವೇದನೆಯನ್ನು ಅನುಭವಿಸಿ, ಕಣ್ಣೀರು ಬಂದಿತ್ತು. ಶ್ರೀಗಳ ಬಗ್ಗೆ ಏನೊಂದೂ ತಿಳಿದುಕೊಳ್ಳದೆ ಅವರ ಘನತೆಗೆ ಕುಂದುಂಟಾಗುವ ರೀತಿ ಬಾಯಿ ಇದೆಯೆಂದು ಮಾತನಾಡುವುದು ಅಸಂಬದ್ಧವಾಗುತ್ತದೆ. ಈ ಕಾರಣಕ್ಕಾಗಿಯೇ ಹಾಯ್ ಬೆಂಗಳೂರು ಪತ್ರಿಕೆಯ ಮುಖ ಪುಟ ನೋಡಿ ಮನಸ್ಸು ಕೆಂಡವಾಗಿ, ಒಳ ಪುಟಗಳನ್ನು ಓದಲೇ ಇಲ್ಲ. ಬರೆದವನು ಮುಂದೆ ಅನುಭವಿಸುತ್ತಾನೆ. ಇರಲಿ. ನಿಮ್ಮ ಸಂಧರ್ಭೋಚಿತ ಲೇಖನವನ್ನು ಓದಿದಾಗ ತುಂಬಾ ಸಮಾಧಾನವಾಯ್ತು. ಕಲಿಕಾಲದಲ್ಲಿ ಧರ್ಮವು ಒಂದೇ ಕಾಲಿನಲ್ಲಿ ನಿಂತಿದ್ದು, ಅಧರ್ಮದ ಮೂರು ಕಾಲುಗಳು ಮೆರೆದರೂ ಕೂಡಾ, ಭುವಿಯಲ್ಲೂರಿದ ಧರ್ಮದ ಹೆಜ್ಜೆಯು ದೃಢವಾಗಿದೆ. ಸಂಭವಾಮಿ ಯುಗೇ ಯುಗೇ. ನಮ್ಮ ಪ್ರೀತಿಯ ಸಂಸ್ಥಾನಕ್ಕೆ ಜಯವಾಗಲಿ. ಹರೇ ರಾಮ.
September 22, 2014 at 2:33 PM
Rightly said Prasanna , thanks for the informative article