Author Sri Samyojaka

ಬಾಹ್ಯಸೌಂದರ್ಯದಂತೆ ಅಂತಃಸೌಂದರ್ಯವೂ ಮುಖ್ಯ-ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ

ಗೋಕರ್ಣ. ಮಾ.೬. ಬದುಕಿನಲ್ಲಿ ಸೌಂದರ್ಯ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಕಾಣುವ ಕಣ್ಣು ಎರಡೂ ಅಗತ್ಯ. ರೂಪ, ಆಕಾರ, ಮೊದಲಾದವುಗಳಿಂದ ನಮ್ಮ ಬಾಹ್ಯಶರೀರದ ಚೆಲುವು ವೃದ್ಧಿಗೊಳ್ಳುತ್ತದೆ. ಶೀಲ, ಸದ್ಗುಣಗಳಿಂದ ಅಂತಃಸ್ಸೌಂದರ್ಯ ಹೆಚ್ಚುತ್ತದೆ.ಜೀವನದ ಸಾರ್ಥಕತೆಗೆ ಇವೆರಡೂ ಬೇಕು.ಕೇವಲಬಾಹ್ಯಸೌಂದರ್ಯದಲ್ಲಿ ಥಳಕು ಮಾತ್ರ ವ್ಯಕ್ತ. ಅಂತಸ್ಸೌಂದರ್ಯದಿಂದ ನಮ್ಮ ಅಂತರಂಗ ಅರಳುತ್ತದೆ. ಈ ಎರಡರ ಹಿತವಾದ ಸಂಯೋಜನೆಯೇ ಬದುಕಿನಲ್ಲಿ ಉನ್ನತವಾದ ಧ್ಯೇಯವಾಗಬೇಕು.ರಾಕ್ಷಸರೆಂದರೆ… Continue Reading →

ಧರೆಯ ಸಂಕಟವನ್ನು ನೀಗಲು ರಾಮಾವತಾರ-ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ

ಗೋಕರ್ಣ.ಮಾ5. ನಮ್ಮ ಶರೀರಕ್ಕೆ ರೋಗಾಣುಗಳ ಪ್ರವೇಶವಾದರೆ ಅದರಿಂದ ರೋಗದ ಉತ್ಪತ್ತಿ. ಅದರ ಪರಿಹಾರಕ್ಕಾಗಿ ನಾವು ವೈದ್ಯರ ಮೊರೆ ಹೋಗುತ್ತೇವೆ. ಚಿಕಿತ್ಸೆಯನ್ನು ಪಡೆದುಸ್ವಸ್ಥರಾಗುತ್ತೇವೆ. ಹಾಗೆಯೇ ಈ ಭೂಮಿತಾಯಿಯ ದೇಹಕ್ಕೆ ಅತ್ಯಂತ ಭಯಂಕರವಾದ ರಾವಣನೆಂಬ ರೋಗಾಣುವಿನ ಪ್ರವೇಶವಾಗಿ ವ್ಯಾಧಿಯು ಜಾಸ್ತಿಯಾಗಿ ಲೋಕದ ಸ್ವಾಸ್ಥ್ಯವು ಹದಗೆಟ್ಟಾಗ ಜನರು ಆಕ್ರಂದನ ಮಾಡತೊಡಗಿದಾಗ ಆಗಿದ್ದು ರಾಮಾವತಾರ. ಲೋಕಕ್ಕೆ ತೊಂದರೆ ಬಂದಾಗ ಗತಿ… “ವೈದ್ಯೋ… Continue Reading →

ಗೋಕರ್ಣ ಸಾಗರತೀರದಲ್ಲಿ ಗುರುಮೂರ್ತಿ ಪುನಃಪ್ರತಿಷ್ಠೆ.

ಗೋಕರ್ಣ.ಮಾ 4. ಗೋಕರ್ಣದ ಸಾಗರತೀರದ ಸಣ್ಣ ಬೇಲೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ವಿದ್ಯಾನಂದಾಚಾರ್ಯರು ಹಾಗೂ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಚಿದ್ಬೋಧ ಭಾರತೀ ಮಹಾಸ್ವಾಮಿಗಳ ಗುರುಮೂರ್ತಿಗಳ ಪುನಃಪ್ರತಿಷ್ಠಾಮಹೋತ್ಸವವು ಇಂದು ಪ್ರಾತಃಕಾಲ ಅತ್ಯಂತ ವೈಭವದಿಂದ ಸಂಪನ್ನಗೊಂಡಿತು. ಶ್ರೀಮದ್ರಾಮಚಂದ್ರಾಪುರಮಠದ ಪ್ರಥಮಪೀಠಾಧೀಶರೂ ಶ್ರೀಮದಾಚಾರ್ಯ ಶಂಕರ ಭಗವತ್ಪಾದರ ಪ್ರಶಿಷ್ಯರೂ ಆಗಿದ್ದ ಶ್ರೀ ಶ್ರೀಮದ್ವಿದ್ಯಾನಂದಾಚಾರ್ಯರ ಹಾಗೂ ಅವರ ಶಿಷ್ಯರೂ ಶ್ರೀಪೀಠದ ದ್ವಿತೀಯ ಪೀಠಾಧೀಶರೂ… Continue Reading →

ಸಮರ್ಪಣಾಭಾವಕ್ಕೆ ಶ್ರೇಷ್ಠಪ್ರತೀಕ ಆಂಜನೇಯ-ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀ.

ಮುಂಬಯಿ.ಫೆ೧೭. ನಮಗೆ ಬದುಕನ್ನಿತ್ತ ಭಗಂತನಿಗೆ ನಾವೆಲ್ಲರೂ ಋಣಿಗಳು.ಇದರಲ್ಲಿ ಆಶ್ಚರ್ಯವೇನಿಲ್ಲ. ಆದರೆ ಅಂತಹ ಭಗವಂತನ ಬಾಯಿಂದಲೇ ತಾನು ನಿನಗೆ ಋಣಿ ಎಂಬ ಮಾತನ್ನು ಆಡಿಸಿದ ಭಕ್ತನೋರ್ವ ಲೋಕದಲ್ಲಿದ್ದರೆ ಆತ ಆಂಜನೇಯ ಮಾತ್ರ. ರಾವಣನಿಂದ ಅಪಹೃತಳಾಗಿದ್ದ ಲೋಕಮಾತೆಯಾದ ಜನಕನಂದಿನಿಯನ್ನು ಕನಕಮಯಲಂಕೆಯಲ್ಲಿ ಕಂಡು ಅವಳಿಗೆ ರಾಮಮುದ್ರಿಕೆಯನ್ನಿತ್ತು ಅವಳಿಂದ ಅಭಿಜ್ಞಾನವನ್ನು ಪಡೆದು ಅದನ್ನು ಪ್ರಭು ಶ್ರೀರಾಮಚಂದ್ರನಲ್ಲಿ ನಿವೇದಿಸಿಕೊಂದಾಗ ಸ್ವತಹ ಶ್ರೀರಾಮನೆ ಆಂಜನೇಯನಿಗೆ… Continue Reading →

ಬದುಕಿನಲ್ಲಿ ಶೋಧನೆ ಅತ್ಯಗತ್ಯ- ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

ಮುಂಬಯಿ.ಫೆ ೧೬. ಶೋಧನೆ ಎಂಬುದು ಎಲ್ಲರ ಬದುಕಿನಲ್ಲಿಯೂ ಎಲ್ಲ ಕಾಲದಲ್ಲಿಯೂ ಅತ್ಯಗತ್ಯ. ಎಲ್ಲ ರೀತಿಯ ಸಾಧನೆಯ ಹಿನ್ನೆಲೆಯಲ್ಲಿಯೂ ಶೋಧನೆಯ ತಳಹದಿಯಿದೆ.ಪ್ರತಿಯೊಂದು ಆವಿಷ್ಕಾರವೂ ಸತತಶೋಧನೆಯ ತುಡಿತದ ಫಲ.ಲೋಕದ ಇತಿಹಾಸದಲ್ಲಿ ಮೊಟ್ಟಮೊದಲನೆಯ ಅತಿದೊಡ್ಡಮಟ್ಟದ ಶೋಧವೆಂದರೆ ರಾಮಭಕ್ತಾಗ್ರೇಸರ ಆಂಜನೇಯನ ಸೀತಾನ್ವೇಷಣೆ.ಕೋಟಿ,ಕೋಟಿ ಸಂಖ್ಯೆಯ ಕಪಿಗಳ ತಂಡದ ನೇತೃತ್ವವನ್ನು ವಹಿಸಿ ದಕ್ಷಿಣದಿಕ್ಕಿನಲ್ಲಿ ಸೀತಾನ್ವೇಷಣೆಯನ್ನು ನಡೆಸಿದ ಅಂಗದನ ಗುಂಪಿನಲ್ಲಿದ್ದ ಆಂಜನೇಯ ಶತಯೊಜನ ವಿಸ್ತೀರ್ಣದ ಸಾಗರವನ್ನು… Continue Reading →

ಮಂಗಳೂರಿನಲ್ಲಿ ರಾಮಕಥಾ

ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಮಂಗಳೂರಿನ ಶ್ರೀಭಾರತೀ ಕಾಲೇಜಿನ ಆವರಣದಲ್ಲಿ ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 21 ರಿಂದ ಪ್ರಾರಂಭಗೊಂಡು 25 ರ ವರೆಗೆ ನಡೆಯಲಿದೆ.

ಪರಮಗುರು ಬ್ರಹ್ಮಲೀನ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವ ಆಮಂತ್ರಣ

ಶ್ರೀಮಜ್ಜಗದ್ಗುರುಶಂಕರಾಚಾರ್ಯವಿಚ್ಛನ್ನ ಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ 34ನೇ ಪೀಠಾಧಿಪತಿಗಳಾದ ಪರಮಗುರು ಬ್ರಹ್ಮಲೀನ ಶ್ರೀಶ್ರೀರಾಮಚಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಆಮಂತ್ರಣ

ಆಶೀರ್ವಚನ: ನಂದನ ಸಂವತ್ಸರ ಪೌಷ ಶುಕ್ಲ ಬಿದಿಗೆ (13 ಜನವರಿ 2013)

ಆಶೀರ್ವಚನ: ನಂದನ ಸಂವತ್ಸರ ಪೌಷ ಶುಕ್ಲ ಬಿದಿಗೆ (13 ಜನವರಿ 2013)

ಕೈರಂಗಳದಲ್ಲಿ ರಾಮಕಥಾ..

ಮಂಗಳೂರು. ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಕೈರಂಗಳದ ಅಮೃತಧಾರಾ ಗೋಶಾಲೆಯ ಆವರಣದಲ್ಲಿ  ಶ್ರೀರಾಮಕಥಾ ಆಯೋಜನೆಗೊಂಡಿದ್ದು, ದಿನಾಂಕ 5 ರಿಂದ ಪ್ರಾರಂಭಗೊಂಡು 9 ರ ವರೆಗೆ ನಡೆಯಲಿದೆ. ಪೂಜನ,ಪ್ರವಚನ.ಗಾಯನ, ವಾದನ, ಯಕ್ಷಗಾನ, ಚಿತ್ರಕಲೆ, ರೂಪಕಗಳ ಅದ್ಭುತ ದೃಶ್ಯ ವೈಭವಗಳೊಂದಿಗೆ ಪ್ರಸ್ತುತಗೋಳ್ಳಲಿದ್ದು,ಶಂಕರನಾರಾಯಣ ಕೊರಗಿಯವರ ರೂಪಕದಲ್ಲಿ ರಾವಣ, ಕುಂಭಕರ್ಣ ವಿಭೀಷಣ ಜನ್ಮ ವೃತ್ತಾಂತ ಮೇಳೈಸಲಿದೆ. ಖ್ಯಾತ… Continue Reading →

ವಿಜೃಂಭಣೆಯ ತ್ರಿಪುರಾಖ್ಯದೀಪೋತ್ಸವ.

ಗೋಕರ್ಣ. ಐತಿಹಾಸಿಕ ಯಾತ್ರಾಸ್ಥಳವಾದ ಗೋಕರ್ಣದ ಶ್ರೀ ಸಾರ್ವಭೌಮ ಮಹಾಬಲೇಶ್ವರ ದೇವರ ನಂದನಸಂವತ್ಸರದ  ಸಾಂಪ್ರದಾಯಿಕವಾದ ತ್ರಿಪುರಾಖ್ಯ ದೀಪೋತ್ಸವವು ೨೮ ಬುಧವಾರದಂದು ಅತ್ಯಂತ ವೈಭವದಿಂದ ಸಂಪನ್ನವಾಯಿತು.ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ನಡೆದ ಈ ಇತಿಹಾಸಪ್ರಸಿದ್ಧ ಉತ್ಸವದಲ್ಲಿ ನೆರೆಯಜಿಲ್ಲೆಗಳ ಭಕ್ತರೂ ಸೇರಿದಂತೆ ಸಹಸ್ರಾರು ಸಂಖ್ಯೆಯ ಭಕ್ತರು  ಶ್ರದ್ಧಾಭಕ್ತಿಗಳಿಂದ ದೀಪವನ್ನು ಹಚ್ಚುವ ಮೂಲಕ ಪಾಲ್ಗೊಂಡರು. ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು… Continue Reading →

« Older posts Newer posts »

© 2025 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑