ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?
ಆದರೆ ಮುನಿಯ ಈ ಪ್ರಶ್ನೆಗೆ ಲಭಿಸಿದ್ದು ಅಂತಿಂಥ ಉತ್ತರವಲ್ಲ…!
ಲೋಕೋತ್ತರವಾದ ರಾಮಾಯಣ…!!!
ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!
ಪರಮಪೂಜ್ಯ ಶ್ರೀಶ್ರೀ ರಾಘವೇಶ್ವರ ಮಹಾಸ್ವಾಮಿಗಳ ದಿವ್ಯ ಸಂಕಲ್ಪದಂತೆ, ಕುಂಬಳೆ ಸಮೀಪದ ಮುಜುಂಗಾವು ಎಂಬಲ್ಲಿ ಮೇ-೬-೨೦೦೪ರಂದು ಒಂದು ಸುಸಜ್ಜಿತ ಕಣ್ಣಿನ ಆಸ್ಪತ್ರೆ ಲೋಕಾರ್ಪಣೆಗೊಂಡಿದೆ. ಅತ್ಯಂತ ಗ್ರಾಮೀಣ ಪ್ರದೇಶದಲ್ಲಿ ಅತ್ಯಾಧುನಿಕ ನೇತ್ರ ಚಿಕಿತ್ಸಾ ಸೌಲಭ್ಯ. ಕೇವಲ ದಾನಿಗಳ ಸುಮಾರು ೧ ಕೋಟಿ ರೂಪಾಯಿ ನೆರವಿನಿಂದ ರೂಪುಗೊಂಡಿದೆ. ಸುಮಾರು ೮,೦೦೦ ಚದರ ಅಡಿ ವಿಸ್ತೀರ್ಣದ ಕಟ್ಟಡದೊಳಗೆ ೩೦ ಹಾಸಿಗೆಗಳುಳ್ಳ ಚಿಕಿತ್ಸಾಲಯ,… Continue Reading →
ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಗಳ ಕರುಣಾದೃಷ್ಟಿಗೆ ಈ ಆಸ್ಪತ್ರೆ ಇನ್ನೊಂದು ಉದಾಹರಣೆ. ಹಳ್ಳಿಯ ಬಡಜನರ ಆರೋಗ್ಯ ಸುಧಾರಣೆಗೆ ಈ ಹೊರರೋಗಿ ಜನರಲ್ ಔಷಧಾಲಯವನ್ನು ಮಹಾಸ್ವಾಮಿಗಳವರು ಮುಜುಂಗಾವಿನಲ್ಲಿ ದಯಪಾಲಿಸಿದರು. ಇಲ್ಲಿನ ವೈಶಿಷ್ಟ್ಯ ಕೇವಲ ೫ ರೂಪಾಯಿಗಳ ನೋಂದಾವಣಿ ಶುಲ್ಕ. ರೋಗಿಗಳಿಗೆ ನೀಡುವ ಈ ಕಾರ್ಡಿನಲ್ಲಿ ಮೂರು ತಿಂಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ. ಈ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದ… Continue Reading →
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಸರ್ವೆ ನಂಬ್ರ ೨೬೯ | ೧ರಲ್ಲಿ ನಮ್ಮ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯು ಸುಮಾರು ೧೯೩೫ನೇ ಇಸವಿಯಿಂದ ಪ್ರಾರಂಭವಾಗಿದ್ದು, ಬನಾರಿ ಕೆ. ಸುಬ್ರಾಯ ಭಟ್ ಅವರ ನೇತೃತ್ವದಲ್ಲಿ ೧೯೫೫ರಲ್ಲಿ ಸ್ವಂತ ಕಟ್ಟಡ ಹೊಂದಿತು. ಆಗಿನ ಜಿಲ್ಲಾಧಿಕಾರಿ ಶ್ರೀ ರಾಜಾರಾಂ I A S ಇವರಿಂದ… Continue Reading →
ಶ್ರೀ ಸ್ವಯಂಭೂ ದೇವಾಲಯ ಕಡತೋಕಾ ಹೊನ್ನಾವರ ತಾಲೂಕು. ಉತ್ತರಕನ್ನಡ ಜಿಲ್ಲೆ ನಮೋಸ್ತು ಸ್ಥಾಣುಭೂತಾಯ ಜ್ಯೋತಿರ್ಲಿಂಗಾವೃತಾತ್ಮನೇ ಚತುರ್ಮೂರ್ತಿ ವಪುಚ್ಛಾಯ ಭಾಸಿತಾಂಗಾಯ ಶಂಭವೇ ಕಲಿಯುಗದಲ್ಲಿ ಲೋಕಕಲ್ಯಾಣಕ್ಕಾಗಿ ಭೂಮಿಗಳಿದು ಬಂದು ದೇವಾನುದೇವತೆಗಳು ನೆಲೆಸಿರುವ ಸ್ಥಳಗಳಿಗೆ ತಮ್ಮದೇ ಆದ ಸ್ಥಳಪುರಾಣವಿರುತ್ತದೆ. ಆದಿ ಕಾಲದಲ್ಲಿ ಶಿವನ ಪರಮಭಕ್ತನಾದ ಖರಾಸುರನು ತನ್ನ ತ್ರಿಕಾಲ ಪೂಜೆಗಾಗಿ ಸಮಯಕ್ಕೆ ಅನುಗುಣವಾಗಿ ಶಿವಲಿಂಗವನ್ನು ಸ್ಥಾಪಿಸಿ, ಪೂಜೆಗೈದು ಮುಂದೆ ಸಾಗುತ್ತಿದ್ದನು…. Continue Reading →