ವಸತಿ: ಅಶೋಕೆ,ಗೋಕರ್ಣ
ಎಂದಿನಂತೆ ರಾಮಾರ್ಚನೆ..
ನಾಡವರ  ಸಮುದಾಯದ ಪ್ರಮುಖರ ಭೇಟಿ..
ರಷಿಯಾ’ದ ಅಧ್ಯಾತ್ಮ ಪಿಪಾಸುಗಳಾದ ರಿಚಿ, ಸರ್ಗಿ, ಅಲ್ಲ, ಆವ್ನಿ, ಮೊದಲಾದವರೊಡನೆ ‘ಪೂಜಾ’ ಎಂಬ ವಿಷಯದಲ್ಲಿ ಚಿಂತನೆ..
ಶ್ರೀ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ನಡೆದ ಉಚಿತ ಕಂಪ್ಯೂಟರ್ ವಿತರಣಾ ಸಮಾರಂಭದಲ್ಲಿ ಸಾನ್ನಿಧ್ಯ..
ಕೋಟಿತೀರ್ಥ-ತೀರದ ಬಟ್ಟೆವಿನಾಯಕನ ಪರಿಸರದಲ್ಲಿ  ಅಭಿವೃದ್ಧಿ ಕಾರ್ಯಕ್ರಮಗಳ ಶಿಲಾನ್ಯಾಸ..
ಪತ್ರಕರ್ತ ಶ್ರೀಧರ ಅಡಿ ಮನೆ ಭೇಟಿ.. ತಮ್ಮ ಪುತ್ರನಿಗೆ ಶ್ರೀರಾಮನ ಕೃಪೆಯಿಂದ ಆದ ಶ್ರೇಯಸ್ಸಿನ ನಿಮಿತ್ತವಾಗಿ ಕುಟುಂಬದ ವತಿಯಿಂದ ಶ್ರೀ ಪಾದುಕಾಪೂಜೆ..
ರಥಬೀದಿಯ ಶ್ರೀ ಸುಬ್ರಹ್ಮಣ್ಯೇಶ್ವರ ದೇವರ ದರ್ಶನ..
ಕೆಕ್ಕಾರಿಗೆ ಪ್ರಯಾಣ..
ಶ್ರೀಮಠದಲ್ಲಿ ದೇವರ ದರ್ಶನ..
ಶ್ರೀಗಳ ಗೌರವಾಧ್ಯಕ್ಷತೆಯ ವಿದ್ಯಾರಣ್ಯ ವೆದಪಾಥಶಾಲೆಯಲ್ಲಿ ಸ್ವಾಗತ-ಪೂಜೆ, ವಸತಿ..
ಪಾಠಶಾಲಾ ಸಮಿತಿಯವರೊಂದಿಗೆ ಸಭೆ..
ಶ್ರೀರಾಮಾರ್ಚನೆ..

Facebook Comments Box