ಬೇಕೇ ಈ ಕೆಲಸ ?
ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..
ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..
ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!
ಅಮೃತಧಾರಾ ಗೋಶಾಲೆ ಕೋಲಾಡ, ಮಹಾರಾಷ್ಟ್ರ ಶ್ರೀ ಶ್ರೀ ರಾಘವೇಶ್ವರ ಭ್ಹಾರತೀ ಸ್ವಾಮಿಜಿಯವರ ಕನಸಿನ ಕೂಸಾದ “ಕಾಮದುಘಾ” ಈ ಯೋಜನೆಯಡಿಯಲ್ಲಿ ಹಾಗೂ ಅವರ ನೇತೃತ್ವದಲ್ಲಿ, ಅಮೃತಧಾರಾ ಗೋಶಾಲೆಯು ಮಹಾರಾಷ್ಟ್ರದ ಕೋಲಾಡ, ತಾ, ರೋಹಾ, ರಾಯಗಡ ಜಿಲ್ಲೆಯಲ್ಲಿ ಸ್ಥಾಪಿಸಲ್ಪಟ್ಟಿದೆ. ಸುಮಾರು ೧೫೦ ಆಕಳುಗಳನ್ನು ಈ ಯೋಜನೆಯಡಿಯಲ್ಲಿ ಸಾಕಲಾಗುತ್ತಿದೆ. ವಿಶ್ವದಿಂದ ನಶಿಸುತ್ತಿರುವ ಭಾರತೀಯ ಗೋವಂಶದ ತಳಿಗಳನ್ನು ಸಂರಕ್ಷಿಸಲು ಅಮೃತಧಾರಾ ಗೋಶಾಲೆಯು… Continue Reading →
ಅಮೃತಧಾರಾ ಗೋಶಾಲೆ, ಮುಳಿಯ ಬಂಟ್ವಾಳ ತಾಲೂಕಿನ ವಿಟ್ಲ ಸೀಮೆಯ ಐತಿಹಾಸಿಕವಾಗಿ ತುಂಬಾ ಪ್ರಸಿದ್ಧಿ. ಸೀಮೆಯ ಒಂದು ಐತಿಹಾಸಿಕ ಸ್ಥಳ ಮಾಯಿಲರ ಕೋಟೆ. ಮಾಯಿಲರ ಕೋಟೆ ಅಳಿಕೆ ಗ್ರಾಮದ ಮುಳಿಯದ ಸಮೀಪದಲ್ಲಿದೆ. ಮಾಯಿಲರ ಕೋಟೆಯಿರುವ ಬೆಟ್ಟದ ಇಳಿಜಾರಿನಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಸ್ವಾಭಾವಿಕ ಸಸ್ಯರಾಶಿ ಹಾಗೂ ನಿರಂತರ ಹರಿದುಬರುತ್ತಿರುವ ಜಲಮೂಲಗಳಿಂದ ಸಮೃದ್ಧವಾದ ಪ್ರದೇಶದಲ್ಲಿದೆ ಮುಳಿಯದ ಅಮೃತಧಾರಾ ಗೋಶಾಲೆ. ದೇಶೀ… Continue Reading →