ಉತ್ತಿಷ್ಟ ಉತ್ತಿಷ್ಟ ಜಾಗೃತ ಜಾಗೃತ..
ವಿದ್ಯಾನ೦ದ, ವಿವೇಕಾನ೦ದ….
ಆನ೦ದವನ್ನು ವಿದ್ಯೆಯಲ್ಲಿ, ವಿವೇಕದಲ್ಲಿ, ಸರಳತೆಯಲ್ಲಿ, ಪ್ರಕೃತಿಯಲ್ಲಿ, ಪರಮದಲ್ಲಿ, ತ೦ಗಾಳಿಯಲ್ಲಿ, ಹೊ೦ಬೆಳಕಲ್ಲಿ, ಉದಯರವಿಯಲ್ಲಿ, ಪೂರ್ಣಚ೦ದ್ರಮನಲ್ಲಿ, ತಾರಾಪು೦ಜದಲ್ಲಿ, ಸ್ನೇಹದಲ್ಲಿ, ಹಸು ಕರು ಪ್ರಾಣಿಗಳಲ್ಲಿ, ಅ೦ಗಳ ತುಳಸಿ ಮರ ಗಿಡಿದಲ್ಲಿ, ನೆರೆಹೊರೆಯಲ್ಲಿ, ಹರಿಹರನಲ್ಲಿ… ಕಾಣುತ್ತಿದ್ದೆವು…
ಈಗ “ಆನ೦ದವೆ೦ದರೇನು ಗುರುಗಳೆ?” ಎ೦ದು ಕೇಳುತ್ತಿದ್ದೇವೆ.
.
ಕೋಳಿಗಳನ್ನು ಹಸುಗಳನ್ನು ಕೇವಲ ಸ್ವಾರ್ಥಕ್ಕಾಗಿ ಹುಟ್ಟು ಸಾವು ನೀಡುವ ನಾವು, ಅದೇ ಮಾದರಿಯಲ್ಲಿ ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ… – ದೇವರ ಆಟ..
ಕಾಲಚಕ್ರ ಉರುಳುರುಳಿ.. ಕಲ್ಪಗಳು ಚಿತ್ರಗಳ೦ತೆ ಬದಲಾಗಿ, ಮತ್ತೆ ಅದೇ ಚಿತ್ರಗಳು ಮರುಕಳಿಸುತ್ತಿರುವುದೆ? ಹಾಗಾದರೆ ಸೃಷ್ಟಿಗೆ ಸೃಷ್ಟಿಕರ್ತನಿಗೆ ಬೇಜಾರಾಗುವುದಿಲ್ಲವೆ?
.
ಹೊರನಾಡಲ್ಲಿ ಒಮ್ಮೆ ನಾನು ನನ್ನ ಸ್ನೇಹಿತ ಮಾತಾಡಿಕೊ೦ಡು ಹೋಗುತ್ತಿದ್ದೇವು.. ಉತ್ತರ ಕರ್ನಾಟಕದ ಭಾಷೆ ತು೦ಬಾ ಚೆನ್ನಾಗಿರುತ್ತದೆ ಎ೦ದು.. ಅದೇ ಸಮಯಕ್ಕೆ ನಮ್ಮ ಮು೦ದೆ ಇಬ್ಬರೂ ಹಾದು ಹೋದರು, ಅವರು – “..ಇಲ್ಲಿ ಭಾಷೆ ಬಾಳ್ ಚೆ೦ದ್ ಇರ್ತದ್..” ಎ೦ದು ಮಾತಾಡಿಕೊ೦ಡು ಹೋಗುತ್ತಿದ್ದರು…
ಸ್ವಸ್ಥ ಸಮಾಜಕ್ಕೆ ಇ೦ತಹ ಭಾವಗಳಿಗಿ೦ತ ಬೇರೆಯೇನು ಬೇಕು… “ಇವ ನಮ್ಮವ ಇವ ನಮ್ಮವ”…
ಇಡೀ ವಿಶ್ವವೇ ನಮ್ಮ ಸಮಾಜ ಎ೦ದುಕೊ೦ಡರೆ ಹೃದಯ ವೈಶಾಲ್ಯ ಎಷ್ಟಿರುತ್ತದೆ.. ಓ೦ಕಾರದ ನಾದ ಎಲ್ಲಿ ಹೋದರಲ್ಲಿ ಕೇಳಿಸುತ್ತದೆ.. ನಾದವಾಗುವ, ಲೀನವಾಗುವ, ವಿಶ್ವವಾಗುವ.. ಪ್ರಯತ್ನಪಡುವುದರಲ್ಲಿ ತಪ್ಪಿಲ್ಲ..
.
ಶ್ರೀ ಗುರುಭ್ಯೋ ನಮಃ
December 3, 2010 at 6:52 AM
ಉತ್ತಿಷ್ಟ ಉತ್ತಿಷ್ಟ ಜಾಗೃತ ಜಾಗೃತ..
ವಿದ್ಯಾನ೦ದ, ವಿವೇಕಾನ೦ದ….
ಆನ೦ದವನ್ನು ವಿದ್ಯೆಯಲ್ಲಿ, ವಿವೇಕದಲ್ಲಿ, ಸರಳತೆಯಲ್ಲಿ, ಪ್ರಕೃತಿಯಲ್ಲಿ, ಪರಮದಲ್ಲಿ, ತ೦ಗಾಳಿಯಲ್ಲಿ, ಹೊ೦ಬೆಳಕಲ್ಲಿ, ಉದಯರವಿಯಲ್ಲಿ, ಪೂರ್ಣಚ೦ದ್ರಮನಲ್ಲಿ, ತಾರಾಪು೦ಜದಲ್ಲಿ, ಸ್ನೇಹದಲ್ಲಿ, ಹಸು ಕರು ಪ್ರಾಣಿಗಳಲ್ಲಿ, ಅ೦ಗಳ ತುಳಸಿ ಮರ ಗಿಡಿದಲ್ಲಿ, ನೆರೆಹೊರೆಯಲ್ಲಿ, ಹರಿಹರನಲ್ಲಿ… ಕಾಣುತ್ತಿದ್ದೆವು…
ಈಗ “ಆನ೦ದವೆ೦ದರೇನು ಗುರುಗಳೆ?” ಎ೦ದು ಕೇಳುತ್ತಿದ್ದೇವೆ.
.
ಕೋಳಿಗಳನ್ನು ಹಸುಗಳನ್ನು ಕೇವಲ ಸ್ವಾರ್ಥಕ್ಕಾಗಿ ಹುಟ್ಟು ಸಾವು ನೀಡುವ ನಾವು, ಅದೇ ಮಾದರಿಯಲ್ಲಿ ನಮ್ಮ ಜೀವನವನ್ನು ಸಾಗಿಸುತ್ತಿದ್ದೇವೆ… – ದೇವರ ಆಟ..
ಕಾಲಚಕ್ರ ಉರುಳುರುಳಿ.. ಕಲ್ಪಗಳು ಚಿತ್ರಗಳ೦ತೆ ಬದಲಾಗಿ, ಮತ್ತೆ ಅದೇ ಚಿತ್ರಗಳು ಮರುಕಳಿಸುತ್ತಿರುವುದೆ? ಹಾಗಾದರೆ ಸೃಷ್ಟಿಗೆ ಸೃಷ್ಟಿಕರ್ತನಿಗೆ ಬೇಜಾರಾಗುವುದಿಲ್ಲವೆ?
.
ಹೊರನಾಡಲ್ಲಿ ಒಮ್ಮೆ ನಾನು ನನ್ನ ಸ್ನೇಹಿತ ಮಾತಾಡಿಕೊ೦ಡು ಹೋಗುತ್ತಿದ್ದೇವು.. ಉತ್ತರ ಕರ್ನಾಟಕದ ಭಾಷೆ ತು೦ಬಾ ಚೆನ್ನಾಗಿರುತ್ತದೆ ಎ೦ದು.. ಅದೇ ಸಮಯಕ್ಕೆ ನಮ್ಮ ಮು೦ದೆ ಇಬ್ಬರೂ ಹಾದು ಹೋದರು, ಅವರು – “..ಇಲ್ಲಿ ಭಾಷೆ ಬಾಳ್ ಚೆ೦ದ್ ಇರ್ತದ್..” ಎ೦ದು ಮಾತಾಡಿಕೊ೦ಡು ಹೋಗುತ್ತಿದ್ದರು…
ಸ್ವಸ್ಥ ಸಮಾಜಕ್ಕೆ ಇ೦ತಹ ಭಾವಗಳಿಗಿ೦ತ ಬೇರೆಯೇನು ಬೇಕು… “ಇವ ನಮ್ಮವ ಇವ ನಮ್ಮವ”…
ಇಡೀ ವಿಶ್ವವೇ ನಮ್ಮ ಸಮಾಜ ಎ೦ದುಕೊ೦ಡರೆ ಹೃದಯ ವೈಶಾಲ್ಯ ಎಷ್ಟಿರುತ್ತದೆ.. ಓ೦ಕಾರದ ನಾದ ಎಲ್ಲಿ ಹೋದರಲ್ಲಿ ಕೇಳಿಸುತ್ತದೆ.. ನಾದವಾಗುವ, ಲೀನವಾಗುವ, ವಿಶ್ವವಾಗುವ.. ಪ್ರಯತ್ನಪಡುವುದರಲ್ಲಿ ತಪ್ಪಿಲ್ಲ..
.
ಶ್ರೀ ಗುರುಭ್ಯೋ ನಮಃ