ಪೆರಾಜೆ-ಮಾಣಿ ಮಠಃ 17.9.2013, ಮಂಗಳವಾರ

ಇಂದು ಬೆಂಗಳೂರು ಮಂಡಲಾಂತರ್ಗತ ಯಲಹಂಕ, ನಂದಿನಿ, ಜಯಪ್ರಕಾಶ ಹಾಗೂ ವರ್ತೂರು ವಲಯಗಳ ಗುರುಭಿಕ್ಷಾಸೇವೆ ನಡೆಯಿತು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ನಂತರ ಮಾತೆಯರಿಂದ ಕುಂಕುಮಾರ್ಚನೆ ನಡೆಯಿತು. ಶ್ರೀ ಚಿದಂಬರ ಭಟ್ ನಂದಿನಿ ವಲಯದವರಿಂದ ವಲಯಗಳ ಪರವಾಗಿ ಗುರುಭಿಕ್ಷಾಸೇವೆ ನಡೆಯಿತು.  ಶ್ರೀ ಸರ್ವೇಶ್ವರ ಕೇಕುಣ್ಣಾಯ ಶ್ರೀಕ್ಷೇತ್ರ ಸುಬ್ರಹ್ಮಣ್ಯ, ಶ್ರೀ ಮಾಧವ ಕೂಡ್ಲು ಎಸ್ ಐ ವಿಟ್ಲ, ಶ್ರೀ ಅಂಗಾರ ಶಾಸಕರು ಸುಳ್ಯ ಕ್ಷೇತ್ರ ಶ್ರೀಗುರುಗಳ ಆಶೀರ್ವಾದ ಪಡೆದರು.

~

ಯಾಗಶಾಲೆಯಿಂದಃ

ಭಿಕ್ಷಾಂಗ ಆಂಜನೇಯ ಹವನ, ಸೇವಾರ್ಥ ಆಂಜನೇಯ ಹವನ, ಗಣಪತಿ ಹವನ ರಾಹುಬೃಹಸ್ಪತಿ ದಶಾ ಸಂಧಿ ಶಾಂತಿ, ಶ್ರೀಸೂಕ್ತ ಹವನ, ಅಗ್ನೇಅಂಗಿರ ವೇದಮಂತ್ರ ಜಪದ ದಶಾಂಶ ಹವನ, ಭಾಗವತ ಪಾರಾಯಣ, ಸುಂದರ ಕಾಂಡ ಪಾರಾಯಣ, ಸರ್ವಜನವಶ್ಯಮೋಹನಗೌರೀ ಹವನ, ಆಂಜನೇಯನಿಗೆ ಸೀಯಾಳಾಭಿಷೇಕ, ಆಂಜನೇಯನಿಗೆ ಮುಸುಂಬಿ ಕಣಜ, ಶ್ರೀರಾಮ ಪೂಜೆ, ಶ್ರೀರಾಮತಾರಕಯಜ್ಞ, ಗೋಪೂಜೆ, ಗೋತುಲಾಭಾರ, ಮಾಣಿ ಮಠದ ಗಣಪತಿಗೆ ಮೂಡಪ್ಪ ಸೇವೆಗಳು ನಡೆದವು.

ಪಾದಪೂಜೆಃ ಶ್ರೀ ಸೇರಾಜೆ ಸುಬ್ರಹ್ಮಣ್ಯ ಭಟ್ ವಿಟ್ಲ, ಶ್ರೀ ಸರ್ಪಂಗಳ ಸುಬ್ರಹ್ಮಣ್ಯ ಭಟ್ಟ ಕುರಿಯತ್ತಡ್ಕ, ಶ್ರೀ ಬಿ ವಿ ಗೋಪಾಲಕೃಷ್ಣ ಭಟ್ಟ ಆರ್ಯಾಪು, ಶ್ರೀ ಮಣಿಮುಂಡ ಮಹಾಲಿಂಗ ಉಪಾಧ್ಯಾಯ ಅಡ್ಯನಡ್ಕ.

~

ಸಾಂಸ್ಕೃತಿಕ ಕಾರ್ಯಕ್ರಮಃ

ಗಮಕ ವಾಚನ-ವ್ಯಾಖ್ಯಾನ ‘ಶ್ರೀರಾಮಾಂಜನೇಯ ಸಮಾಗಮ’ ಗಮಕ ವಾಚನ ಶ್ರೀಮತಿ ಅನ್ನಪೂರ್ಣಾ ನೀರಬಿದರೆ, ವ್ಯಾಖ್ಯಾನ ಶ್ರೀಮತಿ ಗೀತಾ ಕೋಂಕೋಡಿ. ಶ್ರೀ ಶಿವರಾಮ ಕಜೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಕಲಾವಿದರಿಗೆ ಸ್ಮರಣಿಕೆ ಹಾಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

~

ಸಂಧ್ಯಾಕಾರ್ಯಕ್ರಮ:
ಉಪನೀತರಾದವರು ಸಾಯಂಸಂಧ್ಯೆಯಲ್ಲಿ ಸಂಧ್ಯಾವಂದನೆಯನ್ನು ಹಾಗೂ ಮಾತೆಯರು ಶ್ರೀರಾಮತಾರಕ ಮಂತ್ರಜಪ ಮಾಡಿದರು. ಶ್ರೀಕರಾರ್ಚಿತ ರಾಮಾದಿ ದೇವರುಗಳ ಪೂಜೆಯ ಬಳಿಕ ಮಹಿಳೆಯರಿಂದ ಭಜನೆ ನಡೆಯಿತು.

~

Facebook Comments Box