ವಡೋಧರ(ಗುಜರಾತ್), ಡಿ. ೧೯: ‘ಶ್ರೀ ರಾಮಚಂದ್ರಾಪುರ ಮಠದ ವಿರುದ್ಧ ಕೆಲ ವಿದ್ರೋಹಿ ಶಕ್ತಿಗಳು ಮಾದ್ಯಮಗಳ ಮೂಲಕ ವ್ಯವಸ್ಥಿತ ಅಪಪ್ರಚಾರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು, ಶಿಷ್ಯ-ಭಕ್ತ ಸಮುದಾಯ ಇದಕ್ಕೆ ಕಿವಿಗೊಡದೇ ಸಂಘಟಿತವಾಗಿ ಮುನ್ನಡೆಯಬೇಕು’ ಎಂದು ಗೋಕರ್ಣ ಮಂಡಲಾಧೀಶ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಕರೆ ನೀಡಿದ್ದಾರೆ.
‘ದೇಶೀಯ ಗೋ ತಳಿಗಳ ಸಂರಕ್ಷಣೆಯ ಮಹಾ ಆಂದೋಲನದ ಮಹತ್ಕಾರ್ಯದ ಅಂಗವಾಗಿ ನಡೆಯುತ್ತಿರುವ ವಿಶ್ವ ಮಂಗಲ ಗೋಗ್ರಾಮ ಯಾತ್ರೆಯಂಥ ಭಾರತ ಪರ್ಯಟನೆಯಲ್ಲಿ ನಾವು ನಿರತರಾಗಿದ್ದು, ಪ್ರಸ್ತುತ ಗುಜರಾತ್ ಹಾಗೂ ಮಹಾರಾಷ್ಟ್ರ ಪ್ರವಾಸದಲ್ಲಿದ್ದೇವೆ. ಉದ್ದೇಶಿತ ಯಾತ್ರೆಯ ಮುಕ್ಕಾಲು ಪಾಲು ಪೂರ್ಣಗೊಂಡಿದ್ದು, ಗೋ ಸಂರಕ್ಷಣೆಯ ನಮ್ಮ ಇಂಗಿತಕ್ಕೆ ದೇಶಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಯಾತ್ರೆ ಯಶಸ್ವಿಯಾಗಿ ಅಂತಿಮ ಹಂತ ತಲುಪುತ್ತಿರುವ ಈ ಸನ್ನಿವೇಶದಲ್ಲಿ ಕೆಲ ವ್ಯಕ್ತಿಗಳು ಮಠದ ವಿರುದ್ಧ ಉದ್ದೇಶಪೂರ್ವಕ ವೃಥಾ ಅಪಪ್ರಚಾರ ನಡೆಸುವ ಮೂಲಕ ಶ್ರೀ ಮಠಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನದಲ್ಲಿ ನಿರತರಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಇಂಥ ಷಡ್ಯಂತ್ರದಿಂದ ಗೋ ಸಂರಕ್ಷಣೆಯ ನಮ್ಮ ಜೀವಿತದ ಆಂದೋಲನಕ್ಕೂ ಕಳಂಕ ತರುವ ಹುನ್ನಾರ ನಡೆದಿರುವುದು ಸ್ಪಷ್ಟವಾಗಿದೆ.’ ಎಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ತಿಳಿಸಿದ್ದಾರೆ.
‘ಇಡೀ ಜಗತ್ತಿನ ಗಮನ ಸೆಳೆದ ವಿಶ್ವ ಗೋ ಸಮ್ಮೇಳನದ ನಂತರದ ದಿನಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ನಿರಂತರ ಅಪಪ್ರಚಾರದೊಂದಿಗೆ ಮಠದ ವಿರುದ್ಧ ವಿದ್ರೋಹಿ ಶಕ್ತಿಗಳು ಕೆಲಸ ಮಾಡುತ್ತಲೇ ಬರುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗಲೂ ಸಹ ಅಂಥ ವ್ಯಕ್ತಿಗಳೇ ಮತ್ತೆ ಕಾರ್ಯ ನಿರತರಾಗಿರುವುದು ವಿಷಾದನೀಯ. ಇದರಿಂದ ಗೋ ಸಂರಕ್ಷಣೆಯ ಮಹಾ ಆಂದೋಲನಕ್ಕೆ ಯಾವುದೇ ಧಕ್ಕೆ ಬರುವುದಿಲ್ಲ. ಏನೇ ಆದರೂ ನಮ್ಮ ಜೀವಿತದುದ್ದಕ್ಕೂ ಗೋ ಮಾತೆಗಾಗಿ ಹೋರಾಟ ನಿರಂತರ ಮುಂದುವರಿಯುತ್ತದೆ. ಇಂಥ ಕ್ಷುಲ್ಲಕ ವಿಚಾರಗಳಿಂದ ಮಠದ ಭಕ್ತ ಅಭಿಮಾನಿಗಳು ವಿಚಲಿತರಾಗುವ ಅಗತ್ಯವಿಲ್ಲ. ಗೋ ಪ್ರೇಮಿಗಳು, ಮಠದ ಭಕ್ತ-ಶಿಷ್ಯ ವೃಂದದವರು ಇಂಥವಕ್ಕೆ ಕಿವಿಗೊಡದೇ ವಾಸ್ತವದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿ, ಸಂಘಟಿತರಾಗಿ ಒಂದೇ ಮನಸ್ಸಿನ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಬೇಕು.’ ಎಂದು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಪತ್ರಿಕಾ ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.
December 20, 2009 at 12:10 AM
ಮಠದ ಸದುದ್ದೇಶದ ಕಾರ್ಯಗಳು ಎಲ್ಲರಿಗೂ ತಿಳಿದೇ ಇದೆ, ಇಲ್ಲಿ ಯಾವ ಸ್ವಾರ್ಥ ಇದೆ?
ತೊ೦ದರೆ ಇದ್ದವರು ದಯವಿಟ್ಟು ಗುರುಗಳ ಹತ್ತಿರ ಖುದ್ದು ಚರ್ಚೆ ಮಾಡಿ ಬಗೆಹರಿಸಿಕೊಳ್ಳಿ.
ಮಠದ ಶಿಷ್ಯ ವೃ೦ದ ಮತ್ತು ಹಿತೈಷಿಗಳು – ಈ ಅಪಪ್ರಚಾರ ಮಾಡುವವರ ವಿರುದ್ಧ ದನಿ ಎತ್ತಲೇ ಬೇಕು. ಇದರಲ್ಲಿ ಸ೦ಕೋಚ ಎ೦ತದು?
ಅಪಪ್ರಚಾರಕ್ಕೆ ಪ್ರಯತ್ನ ಪಡುತ್ತಿರುವ ಅಪ್ರಿಯರೇ, ಗಾಳಿ ಸುದ್ದಿಗೆ ಕಿವಿಗೊಟ್ಟು ಎಗರಾಡುವ ಶಿಷ್ಯರೇ, ಸತ್ಯಾಸತ್ಯತೆಗಳನ್ನು ಮೊದಲು ಸರಿಯಾಗಿ ತಿಳಿಯಿರಿ.
ಭಾರತೀಯ ಗೋ ತಳಿಗಳ ಸ೦ರಕ್ಷಣೆ ಅತ್ಯ೦ತ ಅಗತ್ಯ, ದಯವಿಟ್ಟು ವಿಚಾರ ಮಾಡಿ.
ಈಡೀ ವಿಶ್ವವೇ ಗ್ಲೋಬಲ್ ವಾರಮಿ೦ಗ್ ಎ೦ದು ಬಾಯಿ ಬಡೆದುಕೊಳ್ಳುತ್ತಿದೆ, ಅದನ್ನು ಕಡಿಮೆ ಮಾಡುಲು ಎಷ್ಟು ಸ೦ಸ್ಥೆಗಳು ಮನಪೂರ್ವಕವಾಗಿ ಕೆಲಸ ಮಾಡುತ್ತಿವೆ?
ವಿಶ್ವ ಮ೦ಗಲ ಗೋ ಗ್ರಾಮ ಯಾತ್ರೆ ಹಾಗು ಮಠದ ಎಲ್ಲ ಕಾರ್ಯಕ್ಕು ನಮ್ಮ ಬೆ೦ಬಲವಿದೆ.
ಕೋದ೦ಡ ರಾಮನಿಗೆ ಜಯವಾಗಲಿ. ಅಪಪ್ರಚಾರ ಮಾಡುತ್ತಿರುವ ನರಿ ಮನದ ನರರಿಗೆ ದಿಕ್ಕಾರವಿರಲಿ.
December 20, 2009 at 12:12 AM
We already have lots of negative vibrations on this planet, let us create some positive vibrations – atleast share positive feelings with those who are working for the welfare of the society (i.e. us).
December 20, 2009 at 10:48 AM
There is no doubt that we should stand united and be behind the activities carried out by our Swamiji. I have expressed my thoughts quite sometime back on my blog http://www.ganeshnadiga.blogspot.com
December 20, 2009 at 1:00 PM
ಹರೇರಾಮ
ಈಗ ನಡೆಯುತ್ತಿರುವುದು ಪರಿಕ್ಷಾಕಾಲ ಹಿಂದೆ ನಡೆದಿರುವ ಮಠದ ಯೋಜನೆಯಲ್ಲಿ ಸರಿಯಾಗಿ ಶ್ರದ್ಧೆಯಿಂದ ಸೇವೆ ಮಾಡಿದವರು ಯಾರು? ನಾಟಕೀಯವಾಗಿ ಸೇವೆ ಮಾಡಿದವರು ಯಾರು? ಹುರುಳೆಷ್ಟು ಜಳ್ಳೆಷ್ಟು ಎನ್ನುವುದು ತಿಳಿದು ಬರುತ್ತದೆ.(ಮಠದ ವಿಷಯದಲ್ಲಿ ಹವ್ಯಕರ ನಿಲುವೇನು?ಪ್ರಾಭಲ್ಯವೇನು? ಎನ್ನುವುದು ಮನದಟ್ತಾಗುತ್ತದೆ.
December 20, 2009 at 1:14 PM
ಹರೇರಾಮ
ನಿಜವಾಗಿ ಹೇಳುವುದಾದರೆ ಹವ್ಯಕರಿಗೆ ಗೌರವದಿಂದ ಕಾಣುವ ಹಾಗೆ,,ಹವ್ಯಕರಿಂದ ಏನು ಮಾಡಲು ಸಾದ್ಯ, ಸಾಧಿಸುವಂತ ಛಲ ಇದೆ ಎಂದು ಜಗತ್ತಿಗೆ ತೋರಿಸಿಕೊಟ್ಟವರು ನಮ್ಮ ಗುರುಗಳು. ಇದನ್ನ ಅರಿತಾದರೂ ಅಪಪ್ರಚಾರ ಮಾಡದಿರಲಿ
December 20, 2009 at 2:42 PM
ಆನೆ ಸಾಗುತಿರುವ ದಾರಿಯಲ್ಲಿ ಬದಿಗಿರುವ ನಾಯಿ ಗಳು ಬೊಗಳುತ್ತವೆ ಬಹುಶಃ ನಾಯಿಗಳಿಗೆ ಗೊತ್ತಿಲ್ಲ ಆನೆ ಎಂದರೆ ಏನು ಅಂತ ……ಆನೆ ಮನಸು ಮಾಡಿದರೆ ನಾಯಿ ಮಟಾಶ್ …!
December 22, 2009 at 11:21 AM
ಹರೇ ರಾಮ. ಗುರುಗಳೇ, ದಯವಿಟ್ಟು media ದಲ್ಲಿ ನಡೆಯುತ್ತಿರುವ ಮಠದ ಬಗೆಗಿನ ಅಪಪ್ರಚಾರದ ಬಗ್ಗೆ ನೊಂದುಕೊಳ್ಳಬೇಡಿ. ಎಲ್ಲ ಶಿಷ್ಯರಿಗೂ ನಿಚ್ಚಳವಾಗಿದೆ – ಇದರಲ್ಲೇನೂ ಸತ್ಯವಿಲ್ಲ – ಇದೊಂದು ಷಡ್ಯಂತ್ರ ಎಂದು. ಈ ಜಾಲವನ್ನು ಬಯಲಿಗೆಳೆಯುವುದು ಮಾತ್ರ ಬಾಕಿ ಇದೆ. ಇದು ಮಾಡಲೇ ಬೇಕಾದ ಕೆಲಸ. ಇದಕ್ಕಾಗಿ ನಾವೆಲ್ಲ ನಿಮ್ಮ ಹಿಂದೆ ಇದ್ದೇವೆ. ನಿಮ್ಮ ಆಶೀರ್ವಾದವಿರಲಿ.
December 22, 2009 at 11:35 AM
ಹರೇ ರಾಮ
ಶ್ರೀಮಠದ ಏಳ್ಗೆ ಸಹಿಸದ ಹಲವರು (ಇದರಲ್ಲಿ ಕೆಲವು ಸ್ವಾಮೀಜಿಗಳು ಶಾಮೀಲಂತೆ.. ಎಲ್ಲ ಬಿಟ್ಟ ಈ ಸನ್ಯಾಸಿಗಳಿಗೆ ಈ ರೀತಿಯ ಹೊಟ್ಟೆಕಿಚ್ಚೇಕೋ ನಾ ಕಾಣೆ)ಶ್ರೀಮಠ/ಶ್ರೀಗಳ ಮೇಲೆ ಹಲವಾರು ದಿನಗಳಿಂದ ಶ್ರೀಮಠದ ವಿರುದ್ದ ಹಲವಾರು ಇಲ್ಲಸಲ್ಲದ ವಿಷಯಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಯಾವುದಕ್ಕೂ ಸರಿಯಾದ ಪುರಾವೆ ಅವರ ಹತ್ತಿರ ಇಲ್ಲ. ಸಮಾಜದ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳ ಬೆಂಬಲಕ್ಕೆ ನಾವಿದ್ದೇವೆ.
December 23, 2009 at 12:52 PM
ಏಳ್ಗೆ ಇರುವಲ್ಲಿ ಟೀಕೆ ಇದ್ದೇ ಇರುತ್ತವೆ. ಏಳ್ಗೆ ಸಹಿಸಲಾರದವರು, ಕೈಲಾಗದವರು ಟೀಕೆ ಬಿಟ್ಟು ಇನ್ನೇನು ತಾನೇ ಮಾಡಿಯಾರು? ಬೆರಳೆಣಿಕೆಗೆ ಮೀರಿದ ಸಮಾಜ ಸೇವಾ ಕಾರ್ಯ ಮಾಡುತ್ತಿರುವ ನಮ್ಮ ಪರಮಪೂಜ್ಯ ಗುರುಗಳ ನಿಂದೆ ಮಾಡುವವರು ಏಲ್ಲೂ ಸಲ್ಲದವರು.ಗುರುಗಳ ಉದ್ದೇಶಕ್ಕೆ ನಮ್ಮ ದೇಶವೇ ಸಂಘಟಿತವಾಗುತ್ತಿರುವಾಗ, ವಿಶ್ವವೇ ಸಂಘಟಿತವಾಗಲಿರುವಾಗ, ಇನ್ನು ಅಸಂಘಟಿತ, ಅನಾಮಧೇಯ ವ್ಯಕ್ತಿಗಳು ಧರ್ಮಪೀಠದ ಶಕ್ತಿಯನ್ನು ಏದುರಿಸಲು ಸಾಧ್ಯವೇ? ಆದರೂ, ಗುರುವನ್ನೇ ನಮ್ಮ ಹೃದಯದಲ್ಲಿ ಸ್ಥಾಪಿಸಿಕೊಂಡ ನಮಗೆ, ಗುರುನಿಂದನೆ ಎಂದರೆ ಆತ್ಮ ನಿಂದನೆ ತಾನೇ ? ಇದನ್ನು ವಿರೋಧಿಸದಿರುವುದು ಅಧರ್ಮ. ಅಪಪ್ರಚಾರ ನಡೆಸುತ್ತಿರುವ ಹೀನ ಮನೋಭಾವದ ವ್ಯಕ್ತಿಗಳಿಗೆ ಧಿಕ್ಕಾರವಿರಲಿ. ಹತ್ತು ವರ್ಷಗಳಿಂದ ಗುರುಗಳನ್ನು ಅನುಸರಿಸಿದ ನಮಗೆ ಇನ್ಯಾವ ಅಪನಂಬಿಕೆ ? ಅಪಸ್ವರ ? ನಮ್ಮ ಗುರುಗಳಲ್ಲಿ ಸ್ವಾರ್ಥ ಮನೋಭಾವನೆ ಇದೆ, ಅವರ ನಡೆ-ನುಡಿ, ಸ್ವಭಾವಗಳಲ್ಲಿ ಸಂನ್ಯಾಸತ್ವಕ್ಕೆ ವಿರುದ್ಧವಾದ ಗುಣಗಳು ಇವೆ ಎಂದು ಭಾವಿಸಿದರೆ, ನಾವು ಆ ಭಗವಂತನ ವಿಶ್ವಾಸಕ್ಕೆ ಎಂದೂ ಪಾತ್ರರಾಗಲು ಸಾಧ್ಯವಿಲ್ಲ. ಆದ್ದರಿಂದ ಕೂಡಿ, ಕಳೆದು, ಅಳೆದ ನಂತರ ನಂಬಿದ ಗುರುಗಳ ಹಿಂದೆ ವಿಶ್ವಾಸಪೂರ್ವಕ ಹೆಜ್ಜೆ ಹಾಕೋಣ. ಮಾನವೀಯತೆ ಹೊಂದಿದವರೆಲ್ಲರೂ ಕೈಜೋಡಿಸೋಣ. ಗುರುಗಳೇ, ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಆಶೀರ್ವಾದವಿರಲಿ.
December 23, 2009 at 3:06 PM
Very meaningful comment.
December 23, 2009 at 11:33 PM
ಅರ್ಥಗರ್ಭಿತವಾದ ಮಾತು ….ಗುರು ನಿಂದನೆ ಮಾಡುವವರಿಗೆ ನಮ್ಮ ದಿಕ್ಕಾರವಿರಲಿ ….ಗುರುವೇ ನಮಗೆ ಸರ್ವಸ್ವ
December 24, 2009 at 11:59 AM
ಹರೇ ರಾಮ
ಗುರು ನಿಂದನೆ ಮಾಡುವ ಅವಿವೇಕಿಗಳಿಗೆ ಧಿಕ್ಕಾರವಿರಲಿ