ಬೆಂಗಳೂರು ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರಮಠದ ಶಾಖೆ ಶ್ರೀ ರಾಮಾಶ್ರಮದಲ್ಲಿ ಇಂದು ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರು ೨೦೧೫ರ ಪಂಚಾಂಗ ಸಹಿತ ದಿನದರ್ಶಿಕೆಯನ್ನು (ಕ್ಯಾಲೆಂಡರ್) ಲೋಕಾರ್ಪಣೆಗೊಳಿಸಿದರು. ಶ್ರೀಮಠದ ಶ್ರೀಭಾರತೀಪ್ರಕಾಶನ ಹೊರತಂದಿರುವ ಈ ದಿನದರ್ಶಿಕೆಯ ಲೋಕಾರ್ಪಣೆಯ ಈ ಸಂದರ್ಭದಲ್ಲಿ ಶ್ರೀಮಠದ ಸಮ್ಮುಖ ಸರ್ವಾಧಿಕಾರಿ ಶ್ರೀ ಟಿ. ಮಡಿಯಾಳ್, ಶ್ರೀಭಾರತೀಪ್ರಕಾಶನದ ಕಾರ್ಯದರ್ಶಿ ವಿದ್ವಾನ್ ಜಗದೀಶಶರ್ಮಾ, ಶ್ರೀಕಾರ್ಯದರ್ಶಿಗಳಾದ ಶ್ರೀ ಮೋಹನ ಹೆಗಡೆ ಹೆರವಟ್ಟ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ಕೆ.ಜಿ ಭಟ್, ರಾಮಕಥಾ ಸಂಯೋಜಕರಾದ ಶ್ರೀ ಗಜಾನನ ಶರ್ಮಾ, ಶ್ರೀ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು, ನ್ಯಾಯವಾದಿಗಳಾದ ಅರುಣ ಶ್ಯಾಮ ಇವರುಗಳು ಉಪಸ್ಥಿತರಿದ್ದರು.
Leave a Reply