ಬೆಂಗಳೂರಿನಲ್ಲಿ ರಾಘವೇಶ್ವರ ಶ್ರೀ ಮನ್ಮಥ ಚಾತುರ್ಮಾಸ್ಯ 2015 – “ಛಾತ್ರ ಚಾತುರ್ಮಾಸ್ಯ”
ಹೊಸನಗರ ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಮನ್ಮಥ ಸಂವತ್ಸರದ ಚಾತುರ್ಮಾಸ್ಯವು ಬೆಂಗಳೂರು ಗಿರಿನಗರದಲ್ಲಿರುವ ಶಾಖಾ ಮಠ ಶ್ರೀರಾಮಾಶ್ರಮದಲ್ಲಿ ಜು.31ರಿಂದ ಸೆ.30ರವರೆಗೆ ನಡೆಯಲಿದೆ. ಈ ವರ್ಷದ ಬಗ್ಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು ರವಿವಾರ ಶ್ರೀಗಳ ಸಮ್ಮುಖದಲ್ಲಿ ಅಧಿಕೃತವಾಗಿ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು.
ಶ್ರೀ ಕಾರ್ಯದರ್ಶಿ ಮೋಹನ ಭಾಸ್ಕರ ಹೆಗಡೆ ಅವರು ಮಾತನಾಡಿ, ಈ ಬಾರಿ ಶ್ರೀಗಳ 22ನೇ ಚಾತುರ್ಮಾಸ್ಯ ವ್ರತಾಚರಣೆ ನಡೆಯಲಿದ್ದು “ಛಾತ್ರ ಚಾತುರ್ಮಾಸ್ಯ”ವೆಂದು ಕರೆಯಲಾಗುತ್ತಿದೆ. ಈ ಚಾತುರ್ಮಾಸ್ಯದಲ್ಲಿ ಮಕ್ಕಳನ್ನು ಕೇಂದ್ರೀಕರಿಸಲಾಗುತ್ತಿದ್ದು ಅದಕ್ಕಾಗಿ ಮೂರು ಪ್ರಮುಖ ಸಮಿತಿಗಳನ್ನು ರಚಿಸಿ, ಘೋಷಿಸಲಾಗಿದೆ.
ಶ್ರೀರಾಮಚಂದ್ರಾಪುರ ಮಠದ ಶ್ರೀಗಳವರ ಚಾತುರ್ಮಾಸ್ಯವು ಒಂದೊಂದು ತತ್ವದ ಮೇಲೆ ನಡೆಯುತ್ತ ಬಂದಿರುವುದು ವಿಶೇಷವಾಗಿದೆ. ಈ ಹಿಂದೆ ಹನುಮ ಹಾಗೂ ಗುರು ತತ್ವಗಳ ಮೇಲೆ ಚಾತುರ್ಮಾಸ್ಯ ನಡೆದಿರುವುದನ್ನು ಸ್ಮರಿಸಬಹುದು.
ಸಮ್ಮುಖ ಸರ್ವಾಧಿಕಾರಿ ಟಿ.ಮಡಿಯಾಲ್ ಹಾಗೂ ಶಿಷ್ಯ ಸಮಾಜದ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು.
June 15, 2015 at 9:50 PM
Hare Raama.
June 16, 2015 at 12:55 PM
Hare Raama
June 16, 2015 at 6:03 PM
Hare Raama,
Tumba Santoshada sangati.
June 17, 2015 at 11:32 AM
Hare Raama
June 17, 2015 at 12:42 PM
Hare raama
June 18, 2015 at 2:20 PM
Hare ram
June 18, 2015 at 6:39 PM
hare rama
June 19, 2015 at 5:29 PM
HARE RAM,
GURUVINA PADAARVINDAGALLI SAHASRA SAHASRA NAMASKARGALU.