• ಪ್ರಾತ: ಪೂಜೆ:
    ಶ್ರೀ ರಾಮದಿ ದೇವತೆಗಳ ಪ್ರಾತ:ಕಾಲದ ಪೂಜೆಯನ್ನು ಶ್ರೀ ಶ್ರೀ ಗಳವರು ಮುಂಬಯಿಯ ಝಂಡು ಅತಿಥಿಗೃಹದಲ್ಲಿ ನೆರವೇರಿಸಿದರು.
    ಪ್ರಾತ:ಕಾಲದ ಪೂಜೆ ಅದರಲ್ಲೂ ಶ್ರೀ ಶ್ರೀ ಗಳವರು ಸಲ್ಲಿಸುವ ಪೂಜೆ ಎಂದರೆ ಅವಿಸ್ಮರಣೀಯ ಆನಂದದ ಅನುಭೂತಿಯನ್ನು ನೀಡುವದಾಗಿದೆ.
    ಆ ಮಂದ್ರ ಬೆಳಕು, ಆ ಹಿತವಾದ ಘಂಟಾನಾದ, ಕೂರ್ಮಾಸನಾಸ್ಥಿತ ಶ್ರೀಗಳವರ ಗಂಭೀರ ನೋಟ, ಒಂದೇ.. ಎರಡೇ… ಸಾವಿರಾರು ಸುಕ್ಷ್ಮಾತಿಸೂಕ್ಷ್ಮತರ ಸಂಗತಿಗಳ ಮಹಾಧ್ಯಾನ – ಮಹಾಯಜ್ಞ…
  • ಭೇಟಿ – ಸಮಾಲೋಚನೆ:

    • ರಾಷ್ಟ್ರದ ಪ್ರತಿಭಾವಂತ  ಆರ್ಥಿಕ ತಜ್ಞ ಹಾಗು ಗುರುಭಕ್ತ – ಶ್ರೀ ಆನಂದ ರಾಠಿಯವರೊಡನೆ ಸುಮಾರು ೧ ಘಂಟೆ ಕಾಲ ನೆರೆ ಸಂತ್ರತರ ಕುರಿತು, ಅಭಿವೃದ್ದಿಯ ಕುರಿತು, ಗೋಕರ್ಣದ ಕುರಿತು ಸಮಾಲೋಚಿಸಿದರು.
    • ಶ್ರೀ ಸುರೇಶ ಒಬೆರಾಯ್ ಭೇಟಿಮಾಡಿ ಆಶಿರ್ವಾದ ಪಡೆದರು.
    • ಶ್ರೀ ಐಕಲ ಹರೀಶ್ ಶೆಟ್ಟಿ – ಮುಂಬೈ ಬಂಟರ ಸಂಘದ ಅಧ್ಯಕ್ಷ ರು ಭೇಟಿಯಾಗಿ ತಮಗೆ ಸೇವಾ ಅವಕಾಶ ನೀಡಲು ಕೋರಿದರು.
  • ಸಂಘಟನೆ – ಸಮಾಲೋಚನೆ:
    • ಶ್ರೀ ಮಠದ ಮುಂಬೈ ಪ್ರಾಂತದ ಸಂಘಟನೆಯ ಕುರಿತು ಹಿರಿಯ ಶಿಷ್ಯರಾದ ಶ್ರೀ ಎಂ ಕೆ ಜನಾರ್ಧನ, ಪ್ರಕಾಶ ಭಟ್ ಮೊದಲದವರೊಡನೆ ಸುದೀರ್ಘ ಚಿಂತಿಸಿ – ಮಾರ್ಗದರ್ಶನ ನೀಡಿದರು.
Facebook Comments Box