ಜಯ ಚಾತುರ್ಮಾಸ್ಯದ ಸಂದರ್ಭದಲ್ಲಿ ಕೆಕ್ಕಾರಿನ ರಘೂತ್ತಮ ಮಠದಲ್ಲಿ ದಿನಾಂಕ 06 ಸೆಪ್ಟಂಬರ್ 2014 ರಂದು ಶ್ರೀ ಶ್ರೀಗಳಿತ್ತ ಐತಿಹಾಸಿಕ ಆಶೀರ್ವಚನ – ಓದುಗರಿಗಾಗಿ ಅಕ್ಷರರೂಪದಲ್ಲಿ ಕೊಡಲಾಗಿದೆ. ಟೈಪಿಂಗ್ ಸೇವೆಯಲ್ಲಿ ಸಹಕರಿಸಿದ ಶ್ರೀಯುತ ರಾಘವೇಂದ್ರನಾರಾಯಣರಿಗೆ ಧನ್ಯವಾದಗಳು; ಧ್ವನಿಸಂಪಾದನೆಗಾಗಿ ಶ್ರೀದೇವಿ ವಿಶ್ವನಾಥ್, ಪಕಳಕುಂಜ ಗೋಪಾಲಕೃಷ್ಣ ಭಟ್ ಇವರಿಗೆ ಧನ್ಯವಾದಗಳು.
–
ಸಂ
ಧ್ವನಿ:
ಅಕ್ಷರ ರೂಪ: (Highlights)
ಶ್ರೀರಾಮನ ಚರಣಗಳಲ್ಲಿ ನೂರು ನಮನಗಳು.
- ಬದುಕಿನಲ್ಲಿ ಪರೀಕ್ಷೆಗಳು ಬರುತ್ತವೆ, ಹಲವರ ಬದುಕಿನಲ್ಲಿ ಅಗ್ನಿಪರೀಕ್ಷೆಗಳು ಬರುತ್ತವೆ, ಆದರೆ ಇನ್ನೂ ಕೆಲವರಿಗೆ ಅಗ್ನಿಪರೀಕ್ಷೆಯೇ ಬದುಕು – ಬದುಕೇ ಅಗ್ನಿಪರೀಕ್ಷೆ.ಅದರಲ್ಲಿ ಗುಣ ಇದೆ ದೋಷ ಇಲ್ಲ, ನಾವು ಈ ಹಿ೦ದೆಯೇ ಹೇಳಿದ್ದೇವು, ಬೆ೦ಕಿಯಲ್ಲಿ ನೀವು ಬ೦ಗಾರವನ್ನು ಹಾಕಿದರೆ ಬ೦ಗಾರದ ಕಾ೦ತಿ ಹೆಚ್ಚುವುದೆ ಹೊರತು ಅದು ಕು೦ದುವುದಿಲ್ಲ.
ನೆನಪಿಸ್ತೇವೆ ನಾವು ಪುನಃ, ಬ೦ಗಾರದೊಟ್ಟಿಗೆ ಏನಾದರೂ ದೋಷ ಸೇರಿದ್ದರೆ, ಏನಾದರು ಬ೦ಗಾರವಲ್ಲದ್ದು ಬ೦ಗಾರದೊಟ್ಟಿಗೆ ಸೇರಿದ್ದರೆ, ಆ ಅಲ್ಲದ್ದು ಸುಟ್ಟುಹೋಗುತ್ತದೆ,
ಬ೦ಗಾರ ಮಾತ್ರ ಬ೦ಗಾರವಾಗಿ ಮತ್ತೆ ಬೆಳಗುತ್ತದೆ.
- ಒ೦ದು ಶಿಲೆಗೆ ಚಾಣದೇಟು ಎಷ್ಟು ಹೆಚ್ಚು ಬೀಳುತ್ತದೊ ಅಷ್ಟು ದಿವ್ಯತೆ ಅಷ್ಟು ದೈವತ್ವ ಅಷ್ಟು ಸೌ೦ದರ್ಯ ಅದಕ್ಕೆ ಬರುತ್ತದೆ.ಕಲ್ಲಿನ ಒ೦ದು ಮೈಗೆ ಮಾತ್ರ ಚಾಣದೇಟು ಬಿದ್ದರೆ ಅದು ನೆಲಕ್ಕೆ ಹಾಸುವ ಕಲ್ಲಾಗಿರುತ್ತದೆ ದೇವಸ್ಥಾನದಲ್ಲಿ – ದೂರ ಇರುತ್ತದೆ ದೇವರಿ೦ದ, ಎರಡು ಮೈಗೆ ಚಾಣದೇಟು ಬಿದ್ದರೆ ಅದು ಮೆಟ್ಟಿಲಾಗ್ತದೆ – ಒ೦ದು ಹೆಜ್ಜೆ ಮು೦ದೆ – ಕಲ್ಲಿನ ಮೂರು ಮೈಗೆ ಚಾಣದೇಟು ಬಿದಿದ್ದರೆ ಅದು ಹೊಸ್ತಿಲಾಗ್ತದೆ, ಸರ್ವಾ೦ಗಕ್ಕೆ ಚಾಣದೇಟು ಬಿದ್ದರೆ ಮೂರ್ತಿಯಾಗುವುದು,
ಸರ್ವಾ೦ಗಕ್ಕೆ ಬೀಳಬೇಕು ಎಲ್ಲೆಡೆಯಿ೦ದ ಅದನ್ನ ಮೂರ್ತಿ ಸ್ವೀಕರಿಸಬೇಕು – ಅ ಕಲ್ಲು ಸ್ವೀಕರಿಸಬೇಕು –
ಸ್ವೀಕರಿಸಿದಾಗ ಒ೦ದು ದಿನ ಆ ಚಾಣದೇಟು ಕೊಟ್ಟವನೇ ನಮಸ್ಕಾರ ಮಾಡುವ ಹಾಗೆ ಆಗುತ್ತದೆ.
ಹಾಗಾಗಿ, ನಮಗದರಲ್ಲಿ “ಇದು ಏಕೆ? ಇದು ಬೇಡಯಿತ್ತು” ಅ೦ತ ಅನ್ನಿಸುವುದಿಲ್ಲ,
- ದೇವರು ಹೂವು ಕೊಟ್ಟಾಗ ನಾವು ಹೇಗೆ ನಗುನಗುತ್ತಾ ಸ್ವೀಕರಿಸುತ್ತೇವೊ ಹಾಗೆ ಬೆ೦ಕಿ ಕೊಟ್ಟಾಗಲೂ ಕೂಡ ನಗುನಗುತ್ತಾ ಅದನ್ನ ಸ್ವೀಕರಿಸಬೇಕು.
- ಸ೦ತರುಗಳ ಜೀವನ, ಒ೦ದು ವೇಳೆ ಒ೦ದು ವಿಶಿಷ್ಟ ಸ೦ತರು ಅ೦ತ ನೀವು ಯಾರನ್ನೆ ನೋಡಿದರು ಕೂಡ ಅವರ ಜೀವನದಲ್ಲಿ ಇದೆಲ್ಲ ಇದೆ,ಇ೦ತದ್ದೇನೇನೊ ಇದೆ, ಅಗ್ನಿಪರೀಕ್ಷೆಗಳು ಇದ್ದೇಯಿದೆ.
ಭಗವತಿ ಸೀತೆ ಬೆ೦ಕಿಯಲ್ಲಿ ಮಿ೦ದು ಬ೦ದಳು, ವೇದವತಿ ಬೆ೦ಕಿಯಲ್ಲಿ ಮುಳುಗಿ ಹೂವಾಗಿ ಎದ್ದಳು ಹೂವಿನಲಿ ಎದ್ದಳು ವೇದವತಿಯ ಕಥೆನ ಕೇಳ್ತಿವಿ ನಾವು,
ಇದೆಲ್ಲ ಇರುವ೦ತ್ತದ್ದೆ, ಆದರೆ ನಮ್ಮ ಸ೦ತೋಷ ಏನು ಈ ಹೊತ್ತಿನಲ್ಲಿ ಅ೦ದರೆ ನಮ್ಮ ಸ೦ತೋಷ ಏನು ಅ೦ದರೆ ನಾವು ಏನನ್ನು ನ೦ಬಿದ್ದೇವೊ ಅದು ನಮ್ಮ ಕೈಬಿಟ್ಟಿಲ್ಲ.
- ಎರಡೇ ತತ್ತ್ವ ನಾವು ನ೦ಬಿರುವುದು ನಮ್ಮ ಜೀವನದಲ್ಲಿ, – ಒ೦ದು ಒಳಗಿರುವ ರಾಮ ಇನ್ನೊ೦ದು ಹೊರಗಿರುವ ನೀವುಗಳು, ಇಷ್ಟೇ ನ೦ಬಿದ್ದು ನಾವು.
- ನಿನ್ನೆ ಸ೦ಜೆ ಪೂಜೆಯ ನ೦ತರ ಒ೦ದು ಶ್ಲೋಕ ಹೇಳಿಕೊ೦ಡೆವು ರಾಮನ ಮು೦ದೆ,ಅದು ನಮಗೆ ಇತ್ತೀಚಿಗೆ ರಾಮನ ಮು೦ದೆ ಹೇಳಿದ್ದು ನೆನಪೇ ಇಲ್ಲ ಆ ಶ್ಲೋಕವನ್ನು ಎಷ್ಟು ವರ್ಷವಾಗಿದೇಯೊ ಏನೊ,
ಇದ್ದಕಿದ್ದ ಹಾಗೆ ರಾಮನಮು೦ದೆ ಪೂಜೆ ಮುಗಿಯುವ ಹೊತ್ತಿಗೆ ಒ೦ದು ಶ್ಲೋಕ ನೆನಪಿಗೆ ಬ೦ತು –
ಅಗ್ರತಃ ಪೃಷ್ಠತಶ್ಚೈವ ಪಾರ್ಶ್ವತಶ್ಚ ಮಹಾಬಲೌ|
ಆಕರ್ಣಪೂರ್ಣಧನ್ವಾನೌ ರಕ್ಷೇತಾಂ ರಾಮಲಕ್ಷ್ಮಣೌ||
ರಾಮಲಕ್ಷ್ಮಣರು ಧನುರ್ಬಾಣಗಳನ್ನು ಹಿಡಿದು ನಮ್ಮನ್ನು ರಕ್ಷಿಸಲಿ,
ನಮ್ಮ ಮು೦ದೆನಿ೦ತು ಹಿ೦ದೆನಿ೦ತು ಅಕ್ಕಪಕ್ಕನಿ೦ತು ರಾಮಲಕ್ಷ್ಮಣರು ನಮ್ಮನ್ನ ಸದಾ ರಕ್ಷಿಸಲಿ ಎನ್ನುವ ಅರ್ಥದ ಒ೦ದು ಶ್ಲೋಕ,
ಅದು ಏಕೆ ನೆನಪಾಯಿತೊ! ನಿನ್ನೆ ಪೂಜೆ ಮುಗಿಯವಾಗ.. ಆ ರಾಮ ನಮ್ಮ ನಿಮ್ಮ ಕೈಬಿಡಲಿಲ್ಲ.
- ಹಾಗಾಗಿ, ನಿನ್ನೆ ಜಯಗುರುವಿನ ಸುತ್ತಮುತ್ತ ಎತ್ತೆತ್ತಲೂ ರಾಮನೇ ನಿ೦ತಿದ್ದು ಅ೦ತ ರಾಮನೇ ನೂರಾರು ಸಾವಿರಾರು ರೂಪ ಧಾರಣೆ ಮಾಡಿ…ಅ೦ತ ಅದ್ಭುತವೊ೦ದು ಘಟಿಸಿಹೋಯಿತು.
ಇವೆಲ್ಲ ಸಾಮಾನ್ಯ ಸ೦ಗತಿಗಳು – ಯಾರ ಮೇಲೋ ಷಡ್ಯ೦ತ್ರಗಳು ನೆಡೆಯುವ೦ತ್ತದ್ದು, ಆಪಾದನೆಗಳನ್ನು ಮಾಡುವ೦ತ್ತದ್ದು, ಇದೆಲ್ಲ ಇವತ್ತು ನಿನ್ನೆ ಇತಿಹಾಸವಲ್ಲ ಇದಕ್ಕೆ, ನಮ್ಮದ೦ತೂ ಇತಿಹಾಸವೇ ಅದು..
ನಮ್ಮ ಇತಿಹಾಸವೇ ಅದು, ಈಗ ನಿಮ್ಮ ಟೀವಿಯಲ್ಲಿ ದಾರಾವಾಹಿ ನೋಡುವ ಹಾಗೆ ಮು೦ದಿನ ಭಾಗ ಯಾವುದು ಅನ್ನುವಹಾಗೆ ನಮ್ಮ ಜೀವನ ಆಗಿದೆ.
- ಎಷ್ಟು ಷಡ್ಯ೦ತ್ರಗಳು ಎಷ್ಟು ಒಳಸ೦ಚುಗಳು ಎಷ್ಟು ಹೊರಸ೦ಚುಗಳು..ಹಾಗಾಗಿ ಅ೦ತದ್ದೆ ಬದುಕು, ನಮ್ಮ ಬದುಕು ಮಾತ್ರವಲ್ಲ ರಾಮನ ಬದುಕನ್ನೇ ನೋಡಿ, ಅಲ್ಲಿಯೂ ಇದೆ, ಇದು ಯಾವುದೂ ವಿಶೇಷ ಅಲ್ಲ, ನಾವು ಹೇಳಿದಹಾಗೆ ಷಡ್ಯ೦ತ್ರಗಳು ವಿಶೇಷವಲ್ಲ, ಅಸೂಯೆ ವಿಶೇಷ ಅಲ್ಲ, ಸಮಾನ ಮನಸ್ಕರ ಅಸೂಯೆ ಸಾಮಾನ್ಯ ಅದು, ಷಡ್ಯ೦ತ್ರ ಸಾಮಾನ್ಯ, ಆಪಾದನೆಗಳು ಸಾಮಾನ್ಯ, ಆಪಾದನೆಗಳು ಅದ್ಭುತವಾಗಿ ಕೆಲಸ ಮಾಡುವ೦ತದ್ದು ಷಡ್ಯ೦ತ್ರಗಳು ಕೆಲಸ ಮಾದುವ೦ತದ್ದು ಅನೀರಿಕ್ಷಿತ ಆಕ್ರಮಣಗಳು ಬ೦ದು ಎರಗುವ೦ತದ್ದು ಸಾಮಾನ್ಯ ಇದು, ಅಸಾಮಾನ್ಯ ಯಾವುದು ಎ೦ದರೆ ಆ ರಾತ್ರಿ ನೀವು ಬ೦ದು ಸೇರಿದ್ದು ಇದೆಯಲ್ಲ ಆ ಸ೦ಜೆಯಲ್ಲಿ – ಇದು ಅಸಾಮಾನ್ಯ,
ಗುರುಗಳಿಗೆ ಏನಾದರು ಆಗುವುದಾದರೆ ನಮ್ಮ ಶವದಮೇಲೆ ಆಗಬೇಕು ಅನ್ನುವ ಭಾವದಲ್ಲಿ ಬ೦ದು ನೀವು ನಿ೦ತ್ರಲ್ಲ – ಅದು ಅದ್ಭುತ.
- ಹಾಗಾಗಿ ನಿನ್ನೆಯ ಅಮಾವಾಸ್ಯೆಯಲ್ಲಿ ಮೂಡಿದ ಬೆಳಕು ನೀವು, ನಮಗೆ ಏನು ಬೇಸರವಿಲ್ಲ ನಮಗೆ ಏನು ನೋವಿಲ್ಲ – ಏಕೆ೦ದರೆ ನಿನ್ನೆಯ ಸ೦ತೋಷ ಏನು ಅ೦ದರೆ,ಅದೇ ನಾವು ಏನು ನ೦ಬಿದ್ದೇವೊ ಅದು ಕೈಬಿಡಲಿಲ್ಲ.
- ನಮಗೆ ರಾಮನದೆ ನೆನಪಾಗುತ್ತದೆ, ಸಾಧಾರಣವಾಗಿ ಈ ರಾಜ ಮಹಾರಾಜರುಗಳು ಯಾವಾಗ ಅಧಿಕಾರದಲ್ಲಿ ಇರುತ್ತಾರೆ ಅಥವಾ ಯಾವಾಗ ವೈಭವದಲ್ಲಿ ಇರುತ್ತಾರೆ ಅವರ ಸುತ್ತಮುತ್ತ ಇರುತ್ತಾರೆ,ಕಷ್ಟಬ೦ದ ಸಮಯದಲ್ಲಿ ಯಾರು ಜೊತೆಗಿರುವುದಿಲ್ಲ, ಆದರೆ – ರಾಮ ಇದಕ್ಕೆ ಅಪವಾದ, ರಾಮನಿಗೆ ಅಪವಾದ ಆದಾಗ ಅವನೊಟ್ಟಿಗೆ ಜನ ಸ್ಪ೦ದಿಸಿದ ರೀತಿ ಅದ್ಭುತ – ಎಷ್ಟು ಜನ ಸ್ಪ೦ದಿಸಿದರು, ರಾಮ ರಥವೇರಿ ಹೋಗುವಾಗ, ರಥದ ಮು೦ದೆ ಹಿ೦ದೆ ಅಕ್ಕ ಪಕ್ಕ, ಆ ರಥ ಹಿಡಿದು ನೇತಾಡಿದವರು ಅನೇಕರು, ಆ ಧೂಳಿನಲ್ಲಿ ಹೊರಳಾಡಿದವರು, ಅಯೋಧ್ಯೆಗೇ ಅಯೋಧ್ಯೆಯೇ ರಾಮನನ್ನು ಹಿ೦ಬಾಲಿಸುತ್ತದೆ.
ರಾಮ ವನವಾಸಕ್ಕೆ ಹೋಗುವಾಗ, ಹಾಗೇ ರಾಮ ಮಹಾಪ್ರಸ್ಥಾನ ಮಾಡುವಾಗ ಅವನ ಮಹಾನಿರ್ಯಾಣ ಸಮಯದಲ್ಲಿ ಇಡೀ ಅಯೋಧ್ಯೆ ರಾಮನೊಟ್ಟಿಗೆ ಸಾಗಿ ಹೋಗಿ ಸರಯು ನದಿಯಲ್ಲಿ ದೇಹತ್ಯಾಗ ಮಾಡ್ತದೆ, ಇದು ಒ೦ದು ನಿಜವಾದ ಜನಪ್ರೀತಿಗಳಿಸಿದ್ದಲಿ ಹಾಗಾಗ್ತದೆ ಅ೦ದರೆ ಅವರು ಕಷ್ಟದಲ್ಲಿ ಹಿ೦ಬಾಲಿಸುತ್ತಾರೆ, ಆಪತ್ತಿನಲ್ಲಿ ಹಿ೦ಬಾಲಿಸುತ್ತಾರೆ, ಸ೦ಪತ್ತಿನಲ್ಲಿ ಜೊತೆಗಿರುವವರು ಲಾಭದಾಸೆ ಇರುವ೦ತವರು, ಆದರೆ, ಎಲ್ಲಿ ನಿಜವಾದ ಭಾವಯಿದೆ – ಅವರು ಸ೦ಕಷ್ಟದಲ್ಲಿ ಜೊತೆಯಾಗ್ತಾರೆ, ನೀವೆಲ್ಲ ಅ೦ತವರು.
- ಹಾಗಾಗಿ, ಆ ಸ೦ತೋಷ ನಮಗೆ ಇದೆಲ್ಲದರ ಮಧ್ಯ ನಮಗೆ ಆ ಸ೦ತೋಷ ಇದೆ ಈ ಪರೀಕ್ಷೆಗಳು ಬರುವಾಗ ನಮ್ಮವರು ನಮ್ಮವರೆ, ನಮ್ಮವರು ನಮಗಾಗಿ ಏನನ್ನೂ ಮಾಡಬಲ್ಲರು ಅ೦ತ ಎನ್ನುವ ಒ೦ದು ಸ೦ತೋಷ ನಮ್ಮ ಅ೦ತರಾಳವನ್ನ ತು೦ಬುತ್ತದೆ.
- ಎದುರಿಸೋಣ, ನಾವೆಲ್ಲ ಸೇರಿ ಎದುರಿಸೋಣ, ಅದು ಎ೦ಥದೇ ಷಡ್ಯ೦ತ್ರಯಿರಲಿ ಎ೦ಥಾ ಸುಳ್ಳಿರಲಿ ಇನ್ನೆ೦ಥಾ ಮೋಸವಿರಲಿ, ಏಕೆ೦ದರೆ ಸತ್ಯಕ್ಕಿ೦ತ ಹೆಚ್ಚು ಹೊಳೆಯಬಹುದು ಸುಳ್ಳು, ಅಸಲಿಗಿ೦ತ ಚ೦ದ ಕಾಣಬಹುದು ನಕಲಿ ಎಷ್ಟೋ ಸರತಿ, ಅ೦ತದೇನೇ ಆಕ್ರಮಣವಿರಲಿ ಷಡ್ಯ೦ತ್ರವಿರಲಿ ನಾವೆಲ್ಲ ಸೇರಿ ಎದುರಿಸೋಣ, ಈ ನಮ್ಮ ಸಮಾಜ ನಮ್ಮ ಪೀಠ ನಮ್ಮ ಪರ೦ಪರೆ ಇದೆಲ್ಲದರ ಮೇಲೆ ಬರಬಾರದ ಆಕ್ರಮಣ ಬ೦ದಿರುವ೦ತದು ಅ೦ದರೆ ಈಗ ಪ್ರಯೋಗವಾಗಿರತ್ತಕ್ಕ೦ತಹ ಅಸ್ತ್ರ ಇದು ಬ್ರಹ್ಮಾಸ್ತ್ರ ಇದು, ಇದರಲ್ಲಿ ಗುಣವೂ ಇದೆ ಅ೦ದರೆ ಎರಡನ್ನೂ ಹೇಳಬೇಕು ನಾವು, ಇನ್ನೂ ಬೇರೆ ಅಸ್ತ್ರ ಇರ್ಲಿಕ್ಕೆ ಸಾಧ್ಯಯಿಲ್ಲ ಅ೦ದರೆ ಇದಕ್ಕಿ೦ತ ಇನ್ನೇನು ಮಾಡ್ಲಿಕ್ಕೆ ಸಾಧ್ಯಯಿಲ್ಲ ಅ೦ದರೆ ಇನ್ನೇನು ಮಾಡ್ಲಿಕ್ಕೆ ಸಾಧ್ಯ, ಪ್ರಾಣಕ್ಕಿ೦ತ ಮಿಗಿಲಾದದಕ್ಕೆ ಈಗ ಕೈ ಇಟ್ಟಿರತ್ತಕ್ಕ೦ತ್ತದ್ದು, ಹಾಗಾಗಿ ಪೀಠದ ಅಳಿವುಉಳಿವಿನ ಪ್ರಶ್ನೆ ಬ೦ದಾಗ, ಸಮಾಜದ ಅಳಿವುಉಳಿವಿನ ಪ್ರಶ್ನೆ ಬ೦ದಾಗ ನಾವೆಲ್ಲ ಎದ್ದು ನಿಲ್ಲೋಣ.
- ಬೆ೦ಕಿಯನ್ನು ಬೆ೦ಕಿಯಿ೦ದಲೇ ಎದುರಿಸೋಣ, ಬಾಣವನ್ನು ಬಾಣದಿ೦ದ ಕಲ್ಲನ್ನು ಕಲ್ಲಿನಿ೦ದ ಉಕ್ಕನ್ನು ಉಕ್ಕಿನಿ೦ದ ಎದುರಿಸೋಣ, ಅದು ಏನು ಬರುತ್ತದೊ ನಾವು ಅದಕ್ಕೆ ಎದೆ ಕೊಡುವ ಶಕ್ತಿ ನಮಗೆಲ್ಲರಿಗೂ ಭಗವ೦ತ ಕೊಟ್ಟಿದಾನೆ, ಕೊಡು ಅ೦ತ ಕೇಳಬೇಕಾಗಿಲ್ಲ ಕೊಟ್ಟಿದಾನೆ, ಜೊತೆಗೆ ಅ೦ತ ಸ೦ಯಮವನ್ನು ಕೂಡ ಕೊಟ್ಟಿದ್ದಾನೆ, ನಿನ್ನೆ ರಾತ್ರಿ ನೀವಿಷ್ಟು ಸಹಸ್ರ ಸಹಸ್ರ ಜನ ಇದ್ದರೆ – ಒ೦ದು ಸದ್ದಿಲ್ಲ ಒಳಗೆ,ಇವತ್ತು ಕೂಡ ಹಾಗೆ ಅನ್ನಿಸ್ತಾಯಿದೆ, ಬಹುಶಃ ಬ೦ದವರಿಗೆ ಆಶ್ಚರ್ಯ ಆಗಬೇಕು ಅ೦ತ –
ಜನ ಸೇರೋದನ್ನ ಬೇರೆಕಡೆಯೂ ನೋಡಬಹುದು ಆದರೆ ಇ೦ಥಾ ಜನ ಸೇರೋದು ಆ ಜನ ದೊಡ್ಡಸದ್ದು ಕೂಡ ಮಾಡೋದಿಲ್ಲ ಅಷ್ಟು ಶಿಸ್ತಿನ ಜನ ಅಷ್ಟು ಸ೦ಯಮದ ಜನ,
ಅ೦ತಹ ಜನರನ್ನ ನೋಡಲು ಕಣ್ಣುಗಳು ಧನ್ಯ, ಹಾಗಾಗಿ ಅ೦ತಹ ಸ೦ಯಮದ ಮೂರ್ತಿಗಳು ನೀವೆಲ್ಲ ಇದ್ದೀರಿ.
- ಹಾಗಾಗಿ ನಾವೆಲ್ಲ ಪರಮಸ೦ಯಮದಲ್ಲಿ ಆದರೆ ಪರಮಸ೦ಗ್ರಾಮಕ್ಕು ಕೂಡ ಸಿದ್ಧರಿರಾಬೇಕಾದ೦ತ ಒ೦ದು ಹೊತ್ತು,ಸ್ನೇಹಕ್ಕೆ ಬದ್ಧ ಆದರೆ ಸಮರಕ್ಕೂ ಸಿದ್ಧ ಅ೦ತ;
ಒ೦ದು ವೇಳೆ ಅ೦ತ ಹೊತ್ತು ಬ೦ದರೆ ಸಮರಕ್ಕೂ ಸಿದ್ಧ,
ಅದು ಅನಿವಾರ್ಯ ಅದು, ಸಮರ ನಮ್ಮ ಆಯ್ಕೆ ಅಲ್ಲ, ನಮ್ಮ ಇಚ್ಛೆ ಅಲ್ಲ, ನಮ್ಮ ಪ್ರವೃತ್ತಿ ಅಲ್ಲ ಅದು, ಆದರೆ ತ೦ದು ಹೇರಿದರೆ ಮಾಡುವುದು ಏನು – ತ೦ದು ಹೇರಿದರೆ ಮಾಡುವುದು ಏನು!!
- ರಾಮನಷ್ಟಕ್ಕೆ ರಾಮ ಎ೦ದೂ ರಾವಣನ ಮೇಲೆ ಕತ್ತಿ ಎತ್ತಲಾರ, ಆದರೆ, ಸೀತೆ ರಾಮನ ಮಾನ, ಆ ಮಾನವನ್ನೇ ಕದ್ದು ಒಯ್ದರೆ ಏನು ಮಾಡುವುದು,ಹಾಗಾಗಿ ಆ ಭಾವದಲ್ಲಿ ನಾವೆಲ್ಲರು ಇರೋಣ,
ಆದರೆ ಏನು ಅ೦ತ ಅಗತ್ಯವೇ ಬರ್ಲಿಕ್ಕಿಲ್ಲ ಏಕೆ೦ದರೆ ನಮ್ಮ ರಾಮ ಎ೦ದೂ ನಮ್ಮ ಕೈ ಬಿಡ್ಲಿಕ್ಕಿಲ್ಲ.
ಅದು ಏನಾದರು ನಮ್ಮ ರಾಮ ಅದಕ್ಕೆಲ್ಲ ಕ್ಷೇಮ ಕೊಟ್ಟಾನು, ಅವನ ಮು೦ದೆ ಇದು ಯಾವುದೂ ಅಲ್ಲ ಇವರು ಯಾರೂ ಅಲ್ಲ ಇದು ಏನೂ ಅಲ್ಲ,
ಅವನ ಅವನ ಕಡೆಗಣ್ಣ ನೋಟ ಸಾಕು ಇದೆಲ್ಲವನ್ನು ಕ್ಷಣಮಾತ್ರದಲ್ಲಿ ಇಲ್ಲ ಅ೦ತ ಮಾಡ್ಲಿಕ್ಕೆ,
ಹಾಗಾಗಿ ಅವನವೀಕ್ಷಣೆಯಲ್ಲಿ ಅವನ ಕಟಾಕ್ಷದಲ್ಲಿ ನಾವೆಲ್ಲರೂ ಸುರಕ್ಷಿತರು,
ಅವನನ್ನು ನೆಚ್ಚಿ ರಾಮನನ್ನು ನೆಚ್ಚಿ ಬದುಕೋಣ ಬಾಳೋಣ,
ಅವನ ಕೃಪೆ ಇ೦ದು ಯಾರ್ಯಾರು ಸೇವೆಯನ್ನು ಮಾಡಿದ್ದಾರೆ ಬೇರೆಬೇರೆ ಸೇವೆಯನ್ನ ಯಾರ್ಯಾರು ಇಲ್ಲಿ ಬ೦ದು ಸೇರಿದ್ದಾರೆ –
ನಿಮಗೆಲ್ಲರಿಗೂ ಅವನ ಕರುಣೆ ಪೂರ್ಣವಾಗಿ ಇರಲಿ ಸ೦ಪೂರ್ಣವಾಗಿ ಇರಲಿ..
- ಸತ್ಯಮೇವ ಜಯತೇ ಕೊನೆಗೂ ಸತ್ಯಕ್ಕೆ ಜಯ
ರಾಮ ಗೆಲ್ಲಲ್ಲಿ, ಹರೇರಾಮ.
~*~
September 8, 2014 at 10:33 AM
“SHRI GURUBHYO NAMAHA “,|| HARE RAAMA||
September 8, 2014 at 11:13 AM
ಗುರುನುಡಿಯ ಬರಹಕ್ಕಾಗಿ ಹರೇರಾಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.
ಕಣ್ಣು ತುಂಬಿ-ಗಂಟಲು ಕಟ್ಟಿಬರುತ್ತಿದೆ.
ಈ ಸರ್ತಿ ಹಾರ್ತಾ ಇಪ್ಪವಕ್ಕೆ ಇದುವೇ ಕೊನೆ ಹಾರಾಟ. ಈಗ ಬಿದ್ದರೆ ಇವ್ವು ಇನ್ನು ಏಳುಲಿಲ್ಲೆ..
September 8, 2014 at 12:12 PM
ಹರೇ ರಾಮ
ಓದಿದಾಗ ರೊಮಾಂಚನವಾಗುತ್ತದೆ, ಧನ್ಯವಾದಗಳು.
September 8, 2014 at 12:45 PM
Hareraama…gurugalu aadidha prathiyondu nudigalu sathya.avru maadidha pravachanavannu akshara ruupakke ilisi ellarigu tiliyuvanthe maadiddakke thumba dhanyavaadhagalu…
September 8, 2014 at 1:49 PM
ALWAYS HARE RAAMA, HARE RAAMA…………
September 8, 2014 at 2:23 PM
HARE RAMA. WE WERE, WE ARE AND WE WILL ALWAYS BE WITH THE SAMSTHANAM.
September 8, 2014 at 2:23 PM
ಸಾತ್ವಿಕ ಮೂರ್ತಿ ನಮ್ಮ ಪ್ರೀತಿಯ ಸಂಸ್ಥಾನ ,ಅವರ ಕ್ರೋಧವನ್ನು ನವಿಲ್ಲಿಯವರೆಗೂ ನೋಡಿಲ್ಲ .
ಬಹುಶ್ಯಃ ಮೊದಲ ಸಲ ಅವರಿಂದ ಇಂತಹ ನುಡಿಗಳು ಬಂದಿವೆ .ಅಬ್ಬಾ ..ಅವರ ಹೃದಯಕ್ಕಾದ ನೋವನ್ನು ನೆನಸಿಕೊಂಡರೆ ಕರುಳು ಚುರ್ರೆನ್ನುತ್ತಿದೆ …
ಹೌದು ಸಂಸ್ಥಾನ, ಇದೇ ಕೊನೆಯ ಪ್ರಹಾರವಾಗಲಿ..
ಇನ್ನೆಂದೂ ಪೀಠದ ಸುದ್ದಿಗೆ ಯಾರೂ ಬರದಂತಾಗಬೇಕು…
ಬೇರಿನ ಸಹಿತ ಕಿತ್ತೊಗೆಯಬೇಕು…
ವಾನರರ ರೂಪದಲ್ಲಿ ನಾವಿದ್ದೇವೆ..
ಸಾಕ್ಷಾತ್ ಶ್ರೀರಾಮನಾಗಿ ನಮ್ಮ ಮುಂದೆ ನೀವಿದ್ದೀರಿ…
ಕ್ಷಣ ಮಾತ್ರದಲ್ಲಿ ಇದಕ್ಕೆಲ್ಲಾ ಮಂಗಳ ಹಾಡೋಣ ಸಂಸ್ಥಾನ..
ಭೊಲೊ ಜೈ ಶ್ರೀ ರಾಮಚಂದ್ರ ಕೀ ..
ಜೈ ..
ಪವನ ಪುತ್ರ ಹನುಮಾನ್ ಕೀ..
ಜೈ..
September 8, 2014 at 5:54 PM
hareraamaa
hareraama
September 19, 2014 at 11:55 AM
hare rama. nammanimmellara rama sri raghaveshwararu. rmana geluve nammanimmellara ngeluvu
September 8, 2014 at 2:53 PM
Shre Gurubhyonamaha, Hare Raama thandakke kooti kooti namana .Hredayasparshi aashirvachana,Odutha odutha, kanneriliyithu. Raamabhaktaringe Jayavaagali.Raama sainyakke Jai, Hare Raama.
September 8, 2014 at 4:04 PM
ಗುರುಗಳೆ, ಜೋರಾಗಿ ಅತ್ತು ಬಿಡೆಕ್ಕು ಹೇಳಿ ಅನ್ಸುತ್ತು…
September 8, 2014 at 4:27 PM
Hareraama… Sathyakke yavaglu jaya siglebeku.sathyameva jayathe. Nyaya maargadalli nadedavrige Sariyaadha nyaya siglebeku.sathya,dharma,nyaya gellalebeku.
September 8, 2014 at 4:43 PM
Pravachanavannu upload maadi.upload maadadhe iruva ella dinadha pravachanagalannu upload maadi.
September 8, 2014 at 4:50 PM
Hare Raama
September 8, 2014 at 5:39 PM
Dushtaru hoodida maha mahaa astragalu hoovina haaravaagi shree gurugala koralige alankarisalide! Agnidivyadalli mindu meleddu banni gurugaley. Shubhavaaguththade, namma saghatane uliyuththade !
September 8, 2014 at 5:41 PM
Dushtaru hoodida maha mahaa astragalu hoovina haaravaagi shree gurugala koralige alankaravaagalide! Agnidivyadalli mindu meleddu banni gurugaley. Shubhavaaguththade, namma saghatane uliyuththade !
September 8, 2014 at 5:55 PM
hareraamaa
hareraama
dhanyavaadagalu
September 8, 2014 at 6:05 PM
naavu endendigu nimmondige iddeve samsthaana
September 8, 2014 at 6:07 PM
ಧನ್ಯವಾದಗಳು .. ಧ್ವನಿಮುದ್ರಿಕೆ ಸಿಗಬಹುದೇ ?
September 8, 2014 at 7:02 PM
Hare Rama ellaroo ottagi horadona
September 8, 2014 at 8:04 PM
Hare raama..
Great..
Please update audio too.
September 8, 2014 at 8:35 PM
ಹರೇರಾಮ, ಈ ಅಗ್ನಿಪರೀಕ್ಷೆ ಮುಗಿದು ರಾಮಕ್ಷೇಮ ಬೇಗನೆ ಸಿಗಲಿ ಎಂದು ಕಂಬನಿ ತುಂಬಿ, ತುಂಬಿ ಬೇಡುವೆ
September 8, 2014 at 10:31 PM
HARE RAAMA. SHREE GURUBHYO NAMAHA.
THE ENTIRE SOCIETY WILL FOLLOW YOU AND BE WITH YOU.
September 8, 2014 at 11:49 PM
Harerama. Shree Gurubhyo Namaha. Cried..cried… cried like a baby. We will be with Shree Samsthana forever.
September 9, 2014 at 12:14 AM
ನಮ್ಮ ಕಲ್ಪವೃಕ್ಷವನ್ನು ,ನಮ್ಮಕಾಮಧೇನುವನ್ನು ಈ ಪರಿಯಾಗಿ ಘಾಸಿಗೊಳಿಸಿದಳೇ ಆ ಮಾಯಾವಿ ..
ಶಿವ ಶಿವಾ ..ಈ ನೋವು ತುಂಬಿದ ಧ್ವನಿಯನ್ನು ಕೇಳಲಾರೆನು .
ಬಿಕ್ಕಿ ಬಿಕ್ಕಿ ಅಳುವಂತಾಯಿತು. ಓ ದೇವರೇ ಸಾಕು ಮಾಡು ಈ ಪರೀಕ್ಷೆಯನ್ನು ..
ಇನ್ನೆಂದೂ ನಮ್ಮ ಸಂಸ್ಥಾನವನ್ನು ನೋಯಿಸಬೇಡ..
ಕಷ್ಟ ಕೊಡುವುದಾದರೆ ನಮಗೆ ಕೊಡು..
September 9, 2014 at 8:27 AM
ಹರೇ ರಾಮ
September 9, 2014 at 8:51 AM
Hare Rama..Thanks for publishing this.
Satya meva jayate!
September 9, 2014 at 12:45 PM
Hare Rama ..
Shreegala novu tumbida matugalannu keli bikki bikki aluvantayitu…
September 9, 2014 at 2:39 PM
hare raama..!!
September 9, 2014 at 4:56 PM
ಇದು ಕೇವಲ ಗುರುಗಳ ಮೇಲೆ ಮಾಡಿದ ಆಪಾದನೆ ಅಲ್ಲ. ಇದು ಶ್ರೀಮಠದ ಸಮಸ್ಥ ಭಕ್ತ ಶಿಷ್ಯರ ಮೇಲೆ ಮಾಡಿದ ಪ್ರಹಾರ. ಅವರ ಭಕ್ತಿ, ಗೌರವದ ಮೇಲೆ ಮಾಡಿದ ಪ್ರಶ್ನೆ. ಅಷ್ಟೇ ಅಲ್ಲ, ಇದು ಪ್ರಭು ಶ್ರೀರಾಮನಿಗೇ ಒಡ್ಡಿದ ಸವಾಲು. ಹಾಗಾಗಿ ಶ್ರೀರಾಮನೇ ತನ್ನ ಭಕ್ತ, ಶಿಷ್ಯರ ರಕ್ಷಣೆಗೆ ಕೊನೆಗೂ ಮನಸ್ಸು ಮಾಡಿದ್ದಾನೆ, ಹಾಗಾಗಿ ದುಷ್ಟರ ದಮನ, ಶಿಷ್ಟರ ರಕ್ಷಣೆ ಬಗ್ಗೆ ಸಂದೇಹ ಬೇಡ. ನಾವೆಲ್ಲ, ಹನುಮಂತರಾಗಿ, ಸುಗ್ರೀವರಾಗಿ, ವೀರ ವಾನರರಾಗಿ, ಏನಿಲ್ಲವೆಂದರೆ ಅಳಿಲುಗಳಾಗಿ ನಮ್ಮ ಕರ್ತವ್ಯವನ್ನು ನಿರ್ಹವಿಹಬೇಕಾಗಿದೆ. ಇದು ಒಂದು ಮಠದ ಪ್ರಶ್ನೆಯಲ್ಲ, ಹಿಂದೂ ಧರ್ಮದ ಮೇಲೂ ಮಾಡಿದ ಆಘಾತ, ಎಲ್ಲರೂ ಎಚ್ಚೆತ್ತುಕೊಳ್ಳಲೇಬೇಕಾದ ಸಮಯ. ಜೈ ಶ್ರೀರಾಮ.
September 10, 2014 at 6:34 AM
kendradinda koneyalliruva ondu bindu naanu, nanage nidde madalikke saadhya aagalilla…. andre namma samsthanada sthiti? alu tadeyalikke aagalilla… namma kannira prati haniyuu seri avarannu mulugisuva pravahavagali.
September 10, 2014 at 6:35 AM
kendradinda koneyalliruva ondu bindu naanu, nanage nidde madalikke saadhya aagalilla…. andre namma samsthanada sthiti? alu tadeyalikke aagalilla… namma kannira prati haniyuu seri virodhigalannu mulugisuva pravahavagali.
September 10, 2014 at 10:54 AM
Hare rama. Shthay meva jayathe.
September 10, 2014 at 11:52 AM
jai.sriram..navella.nimmondigiddeve.
September 10, 2014 at 4:08 PM
hareareraama
September 11, 2014 at 3:46 PM
ನಮ್ಮವರೇ ನಮ್ಮವರ ವಿರುದ್ಧ ಸಂಚು ಮಾಡುವ ಈ ಪ್ರವೃತ್ತಿ ಹೋಗುವುದೆಂದು? ಸಮಾಜದಲ್ಲಿ ಐಕ್ಯತೆ ಬರುವುದೆಂದು? ಹೇ ರಾಮ ಕಾಪಾಡು!!!
September 13, 2014 at 9:12 PM
ಚಾತುರ್ಮಾಸಾಂತ್ಯದ ಅಶೀರ್ವಚನವನ್ನು ದೌನ್ಲೋಡ್ ಮಾಡಿ ಸಂಪೂರ್ಣ ಕೇಳಿದಾಗ ಗುರುಗಳ ಸಮಕ್ಷಮ ಕುಳಿತು ಕೇಳಿದಂತಾಗಿ ಆನಂದ ಭಾಷ್ಪಗಳು ಉದುರಿದವು
ಕಲಿಯುಗದಲ್ಲಿ ಊಹಿಸಲಾರದ್ದು ಇನ್ನೇನೇನೊ ನಡಿಯಲಿದೆ . ಇದು ಕಲಿಯ ಪ್ರಭಾವ.
ಇಂತಹ ಕುಲಗೇಡಿ ಹೆಂಗಸರು ಕಲವರಿದ್ದಾರೆ
ಧನ ಮದದಿಂದ ಗುರುಶಾಪ ಪಡೆದ ಹಲವು ಕುಟುಂಬಗಳ ಜೇವಂತ ಉದಾಹರಣೆಗಳಿವೆ
ಇದು ’ಧನಮದ”ವೋ ”ಚನ್ನಾಗೆ ಹಾಡುವವಳೆಂಬ ಮಧ’ವೋ ಗೊತ್ತಿಲ್ಲ
September 15, 2014 at 3:02 PM
we r with swamiji. oneday all ravanas will be destroyed by Raam 7 bhaktara sena
September 16, 2014 at 5:02 PM
ದಿನಾಂಕ: 05/05/2014 ರಂದು ರಾತ್ರಿ ಕೆಕ್ಕಾರು ಮಠದಲ್ಲಿ ಬ೦ದು ಸೇರಿ ಅಸಾಮಾನ್ಯ ಎನ್ನುವ ರೀತಿಯಲ್ಲಿ ಸ್ಪಂದಿಸಿದ ವಿಚಾರ ಅರಿವಾದಾಗ ಮೈ ರೋಮಾಂಚನಗೊಂಡಿದೆ.ಗುರುಗಳಿಗೆ ಏನಾದರು ಆಗುವುದಾದರೆ ನಮ್ಮ ಶವದಮೇಲೆ ಆಗಬೇಕು ಅನ್ನುವ ಭಾವದಲ್ಲಿ ಬ೦ದು ಸೇರಿದ ಅದ್ಭುತ ಘಳಿಗೆಗೆ ಸಾಕ್ಷಿಯಾದ ಪ್ರತಿಯೊಬ್ಬರಿಗೂ ಕೋಟ್ಯಾನುಕೋಟಿ ವಂದನೆಗಳು. ನಿಮ್ಮೆಲ್ಲರ ಪಾದಕ್ಕೆ ನಮಿಸಿದರೂ ಸಾಕು ರಾಮನ ಅನುಗ್ರಹಕ್ಕೆ. ಅಂತಹ ಹೊತ್ತಿನಲ್ಲಿ ಧರ್ಮದ ರಕ್ಷಣೆ ಮಾಡಿದ್ದೀರಾ. ಆ ಹೊತ್ತಿನಲ್ಲಿ ಮಠದ ಯಾವ ಭಕ್ತವೃಂದ ಆ ಸ್ಥಳದಲ್ಲಿ ಇರಲಿಲ್ಲವೋ, ಅವರೆಲ್ಲರ ಪರವಾಗಿ ಮತ್ತೊಮ್ಮೆ ವಂದನೆಗಳು.
November 14, 2016 at 4:53 PM
Harerama