ಹರೆ ರಾಮ.
ಕತ್ತಲಲ್ಲಿ ಬೆಳಕನ್ನುತೋರಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ ಏನೆನ್ನಬೇಕು?, ಸಂದರ್ಭವೊಂದರಲ್ಲಿ ನನ್ನ ತೀರ್ಥರೂಪರು ಹಿಂದೊಮ್ಮೆ ಹೇಳಿದ ಮಾತಿದು.
ಪ್ರಸಿದ್ಧ ಕನ್ನಡ ಲೇಖಕ ಶ್ರೀ ಬೈರಪ್ಪನವರ ಆವರಣ ಕಾದಂಬರಿಯ ಪ್ರವೇಶಿಕೆಯ ಕೆಲವು ವಾಕ್ಯಗಳನ್ನು ನಿಮ್ಮೊಳಗೆ ಹಂಚಿಕೊಂಡು ಮುಂದುವರಿಯುತ್ತೇನೆ.
“ಸತ್ಯವನ್ನು ಮರೆಮಾಚುವ ಮಾಯೆಯ ಕಾರ್ಯಕ್ಕೆ ಆವರಣವೆಂದೂ, ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು. ವ್ಯಕ್ತಿಯ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಅವಿದ್ಯೆ ಎಂದೂ, ಸಮೂಹದ ಮತ್ತು ಜಗತ್ತಿನ ಮಟ್ಟದಲ್ಲಿ ನಡೆಯುವ ಕ್ರಿಯೆಯನ್ನು ಮಾಯೆ ಎಂದೂ ಕರೆಯುತ್ತಾರೆ……
ಆಜ್ಞಾನಕ್ಕೆ ಆವರಣ ಮತ್ತು ವಿಕ್ಷೇಪಗಳೆಂಬ ಎರಡು ಶಕ್ತಿಗಳಿವೆ. ಕಿರಿದಾದ ಮೋಡವೊಂದು ಅನೇಕ ಯೋಜನವಿಸ್ತಾರವಾದ ಸೂರ್ಯಮಂಡಲವನ್ನು ನೋಡುಗರ ನೋಟದಿಂದ ಮರೆಯಾಗಿಸುವ ಹಾಗೆಯೇ ಆವರಣಶಕ್ತಿಯು ಸತ್ಯವನ್ನು ಮರೆಮಾಚಿಸುತ್ತದೆ… ನಮ್ಮ ಅಜ್ಞಾನದ ಕಾರಣ ಹಗ್ಗದಲ್ಲಿ ಹಾವು ಕಾಣುವಂತೆ ವಿಕ್ಷೇಪ ಶಕ್ತಿಯು ಇಲ್ಲದ್ದನ್ನು ಇರುವಂತೆ ತೋರಿಸುತ್ತದೆ.”
ಈ ನಿಜ ಸುಳ್ಳುಗಳ ಮಾಯೆಯೆಂಬ ಆಟ ನಮ್ಮನ್ನು ಈ ಹಿಂದಿಗಂತಲೂ ಇಂದೇಕೋ ಹೆಚ್ಚು ಕಾಡುತ್ತಿದೆ. ನಮ್ಮ ಪೂಜ್ಯ ಗುರೂಜಿಯವರ ಕುರಿತಾದ “ಸುಳ್ಳಿನ ಕಂತೆಗಳ” ಕಥೆಗಳು ನಮ್ಮಂತವರ ಮೇಲೆ, ನಮ್ಮ ಬಂಧುಗಳ ಮೇಲೆ, ನಮ್ಮ ಸಮಾಜದ ಮೇಲೆ ಬಹಳ ಬಹಳವಾಗಿ ದುಷ್ಪರಿಣಾಮ ಬೀರಿದೆ. ನಾವೆಲ್ಲಾ ನೊಂದಿದ್ದೇವೆ, ಬೆಂದಿದ್ದೇವೆ, ಅಲ್ಲಲ್ಲಿ ಕುಂದಿದ್ದೇವೆ ಕೂಡ. ಬೈರಪ್ಪನವರ ಮಾತಿನಲ್ಲೇ ಹೇಳುವುದಾದರೆ “ಅವಿದ್ಯಾ ಕಾಮ ಕರ್ಮಗಳಿಂದ ಬಿಡಿಸಿಕೊಂಡು ಶುದ್ಧಸಾಕ್ಷಿಯ ಹದಕ್ಕೆ ಏರುವ ತನಕ ನಮಗೆ ನಮ್ಮನ್ನಾಗಲಿ ನಮ್ಮ ದೇಶದ ಅಥವಾ ಮಾನವಕುಲದ ಇತಿಹಾಸವನ್ನಾಗಲಿ ಗ್ರಹಿಸುವುದು ಸಾಧ್ಯವಾಗುವುದಿಲ್ಲ.”
ಆದರೆ, ಆದರೆ ಇಂದು ಮೆರೆಯುತ್ತಿರುವುದಾದರೂ ಏನು? ಗೋವಿನಂತೆ ನಾವು ಮೌನವಾಗಿರುವಾಗ, ಕಥೆಗೊಂದು ಕಥೆಯನ್ನು ಸೇರಿಸಿ ಅದನ್ನೇ ಸತ್ಯ ಎಂದು ಬಿಂಬಿಸುವರು, ಸಮಾಜಕ್ಕೆ ಅದರಿಂದಾಗುವ ಸಾಧಕ ಬಾಧಕಗಳನ್ನು ಅರಿತೋ ಅರಿಯದೆಯೋ ಸುಳ್ಳಿಗೆ ಬೇರೆ ಬೇರೆ ಚಿತ್ತಾರಗಳ ಬಿಡಿಸಿ ಕುತೂಹಲದಿಂದ ನೋಡುವ ವಿಕೃತ ಮನಸ್ಸಿನವರಿಗೆ ಮುದನೀಡುವವರನ್ನು ಏನೆಂದು ಕರೆಯಬೇಕು?.
ಸಾಮನ್ಯನಿಗೂ, ಎಳೆವ ಮಕ್ಕಳಿಗೂ ಹೊಳೆವ ತರ್ಕಗಳಾಗಲಿ, ಕಾರಣಗಳಾಗಲೀ ಸಣ್ಣ ಮನಸ್ಸಿನವರಿಗಾಗಲಿ, ಸುದ್ದಿಯ ವ್ಯಾಪಾರಿಗಳಾಗಲೀ ಹೊಳೆಯುವುದಾದರೂ ಎಂತು. ಆದರೆ ಸತ್ಯವೆಂದೂ ಗೆಲವುದು ಎಂದು ನಂಬಿದವರು ನಾವು. ಸುಳ್ಳು ಹೇಳುವವರು ದಿನಕ್ಕೊಂದು ವಿಷಯ, ದಿನಕ್ಕೊಂದು ವೇದಿಕೆ ಹುಡುಕತ್ತಾ ಹೋಗುತ್ತಾರೆ. ಗುರುಗಳು ಹೇಳಿದಂತೆ, ಸತ್ಯವನ್ನ ಪದೆ ಪದೇ ಹೇಳಬೇಕಾಗಿಲ್ಲ, ಅದು ತನ್ನಂತಾನೆ ತೆರೆದು ಕೊಳ್ಳುತ್ತದೆ.
ನಾನು ಈ ಮಿಥ್ಯಾರೋಪಕ್ಕೆ ಪ್ರತಿಕ್ರಿಯಿಸುವುದು ಇಷ್ಟೇ.
ನಾನು ಅನೇಕ ವರುಷಗಳಿಂದ ನೋಡಿದ ಬೆಳಕಲ್ಲಿ ಕತ್ತಲೆಯನ್ನು ಕಾಣುವುದಾದರೂ ಎಂತು? ನಮ್ಮ ಗುರುಗಳು ಎಂದರೆ ದೇವರ ಅವತಾರ ಎಂದು ತಿಳಿದವನೇನು ನಾನಲ್ಲ. ಆದರೆ ಈ ಗುರುಗಳಲ್ಲಿ ಮಾನವತೆಯ ಮಹಾವತಾರವನ್ನು ಕಣ್ಣಾರೆ ನಿಮ್ಮೆಲ್ಲರೊಡನೆ ನೋಡಿದ, ಅನುಭವಿಸಿದವರಲ್ಲಿ ನಾನೂ ಒಬ್ಬ. ಸಮಾಜದ ಪ್ರತಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯನ್ನೇ ಯಾವಾಗಲೂ ಚಿಂತಿಸುವ, ಬಡವರನ್ನೂ, ಶ್ರೀಮಂತರೆಲ್ಲರನ್ನೂ ಏಕ ದೃಷ್ಟಿಯಿಂದ ನೋಡುವ, ಸಮಾಜದ ಸ್ವಾಸ್ಥವನ್ನು ಸದಾ ಚಿಂತಿಸುವ, ನಮ್ಮ ನಿಮ್ಮೆಲ್ಲರ ಅನೇಕ ವೈಯಕ್ತಿಕ ವಿಚಾರಗಳಲ್ಲೂ, ಸಮಾಜದ ಇಡಿ ದೃಷ್ಟಿಯಲ್ಲೂ ಒಳ್ಳೆಯ ಸಲಹೆ ನೀಡಿದ್ದಲ್ಲದೇ, ತಮ್ಮ ಸಹಜ, ಸರಳ ಜೀವನದಿಂದ ನಮಗೆಲ್ಲಾ ಮಾದರಿಯಾಗಿರುವ ಗುರುಗಳಲ್ಲಿ ಕರುಣೆಯಲ್ಲದೇ ಇನ್ನೇನನ್ನು ಕಾಣಲು ಸಾದ್ಯ. ಅನೇಕ ಕುಟುಂಬಗಳನ್ನು ಒಂದು ಮಾಡಿದ, ಅದೆಷ್ಟೋ ಸಲ ಒಂದೇ ಕುಟುಂಬದವರ ಭಿನ್ನಮತವನ್ನು ದೂರಮಾಡಿದವರು ಒಂದು ಕುಟುಂಬಕ್ಕೆ ಒಳಿತನ್ನ ಬಯಸುವರೋ ಹೊರತಾಗಿ ಕೆಟ್ಟದನ್ನು ಮಾಡಹೊರಟಾರೇನು?
ನಮಗೆಲ್ಲಾ ತಿಳಿದಹಾಗೆ ಕಪಟಿಗಳು ಪರದೆಯ ಹಿಂದಿನಿಂದ ಪಿತೂರಿ ಹೂಡುತ್ತಲೇ ಇದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಸಮಾಜದ ಈ ಪರಮಹಂಸರಿಗೆ ತೊಂದರೆ ಕೊಡುತ್ತಾ ಬಂದಿದ್ದಾರೆ. ಹಾಗಂತ ಅವರು ಸಾಧಿಸುವುದಾದರೂ ಏನು? ವಿಕೃತ ಮನದವರಿಗೆ ಸಂಕಟ ತಂದ್ದೊಡ್ಡುವುದೇ ಒಂದು ರೀತಿಯ ಸಂತಸವಿರಬಹುದೇನೋ.
ಸದಾ ಸಮಾಜದ ಒಳಿತಿಗಾಗಿ, ಸಮಾಜದ ಒಂದೊಂದು ವ್ಯಕ್ತಿಯ ಮೇಲೆತ್ತಲು ನಮ್ಮ ನಿಮ್ಮೆನ್ನೆಲ್ಲಾ ಒಂದಾಗಿಸಿ, ಒಂದು ಗುರಿತೋರಿಸಿ ಅವರವರ ಗುಣ ಯೋಗ್ಯತೆಗಳ ಗುರುತಿಸಿ ಯಾವುದ್ಯಾವುದೋ ಯೋಜನೆಗಳಲ್ಲಿ ತನುವಿಹೊದೋ, ಮನವಿಹುದೋ, ಧನವಿಹುದೋ ನಮ್ಮಿಂದ ಕಿಂಚಿತ್ ಸೇವೆಯ ಮಾಡಿಸಿ, ಪುಣ್ಯದ ದಾರಿ ಎಂದರೆ ಹಂಚಿ ತಿನ್ನಬೇಕು ಎಂಬ ಉಪನಿಷತ್ ವ್ಯಾಖ್ಯೆಯನ್ನು ಕಾರ್ಯರೂಪಕ್ಕೆ ತಂದವರು ನಮ್ಮ ಗುರುಗಳು.
ಸಮಾಜದ ಮಹಿಳೆಯರಿಗೆ ಗೌರವಯುತ ಬಾಳುವೆಯ ಹಾದಿಯಲ್ಲಿ ಮಾತೃವಿಭಾಗವನ್ನು ತೆರೆದು, ಅಸಂಖ್ಯ ಮಹಿಳೆಯರಿಗೆ ದಾರಿಯನ್ನು ತೋರಿದ ಗುರುಗಳಿಗೆ, ನಮ್ಮವರಿಂದಲೇ ಈ ರೀತಿಯ ಪಾಡು ಪಡುವಂತಾಯಿತಲ್ಲಾ ಎಂದು ನನ್ನಂತೆ ನಿಮಗೂ ಸಂಕಟವಾಗಿದ್ದು ದಿಟ. ಆದರೆ, ನಾವೆಲ್ಲ ಓದಿಕೊಂಡು ಬಂದಂತೆ, ನಮ್ಮ ಇತಿಹಾಸ, ಪುರಾಣಗಳಲ್ಲಿ ನಾವು ಇಂತಹಾ ಕುಲಗೇಡಿಗಳನ್ನು ನೋಡಬಹುದು. ಕಾರಣ, ಪ್ರಾರಬ್ಧ ಹೌದು, ನಾವು ಎಂದೆಂದಿಗೂ ನಂಬಿಕೊಂಡು ಬಂದಂತೆ ಪ್ರಾರಾಬ್ಧವೇ ಸರಿ, ಇದು ರಾಮನನ್ನೂ ಬಿಡಲಿಲ್ಲ, ಕೃಷ್ಣನನ್ನು ಬಿಡಲಿಲ್ಲ.
ನಮ್ಮ ಕರುಣಾಮಯಿ ಗುರುಗಳಲ್ಲಿ ಯಾವ ಋಣಾತ್ಮಕ ಅಂಶವನ್ನೂ ಇಲ್ಲಿಯವರೆಗೆ ನೋಡಲಿಲ್ಲ, ಗಮನಿಸಲಿಲ್ಲ, ಅನುಭವಿಸಲಿಲ್ಲ. ಗೋವಿನ ಗುರುವೆಂದು ಹವ್ಯಕರ ಹೊರತಾಗಿಯು ಅವರನ್ನು ಪ್ರೀತಿಸುವ, ಗೌರವಿಸುವ ಅನೇಕ ಸಮಜವನ್ನು ನಾವು ನೋಡಿದ್ದೇವೆ. ಇಂದಿನ ಈ ವಿಷಭರಿತ ಸಮಾಜ ವ್ಯವಸ್ಥೆಯಲ್ಲೂ ಗೋವಿನ ಕುರಿತಾದ ಅವರ ವಿಶ್ವ ವ್ಯಾಪಿ ಚಳುವಳಿಯಲ್ಲಿ ಅವರು ಯಾರನ್ನೂ ಎದುರ ಹಾಕಿ ಕೊಂಡಿದಿಲ್ಲ. ತಮ್ಮ ಮಧುರ ಮಾತಿನಿಂದ, ಸತ್ಯ ಗೋಚರ ವಿಷಯಗಳಿಂದ ಗೋವಿನಿಂದ ಆಗುವ ಲೌಕಿಖ ಲಾಭದ ಕಾರಣಗಳನ್ನು ನಮಗೆ ತಿಳಿಹೇಳಿ, ನಮ್ಮಮನವನ್ನು ಚೇತರಿಸಿ ಆಧ್ಯಾತ್ಮದೆಡೆಗೆ ನಮ್ಮನ್ನು ಕೊಂಡಯ್ದ ಪುಣ್ಯ ಪುರಷನಲ್ಲಿ ನಾನು ಒಳ್ಳೆಯ ಗುಣಗಳಲ್ಲದೇ, ಎನನ್ನು ಕಾಣಲಿ. ವಿದ್ಯೆಯಿಂದ ವಂಚಿತರಾದವರಿಗೆ, ವಿದ್ಯೆಯನ್ನು ನೀಡಬೇಕಾದ್ದು, ಆರೋಗ್ಯ ಕೈಗೆಟಕದವರಿಗೆ ಆರೋಗ್ಯದ ಭರವಸೆ, ಗ್ರಾಮೀಣ ಜನರಿಗೆ ಪಟ್ಟಣದವರಿಗೆ ಕೊಟ್ಟುಕೊಳ್ಳುವ ವ್ಯವಸ್ಥೆ, ಆಧ್ಯಾತ್ಮ ಅರಸುವವರಿಗೆ ನಿರಂತರ ಸತ್ಸಂಘ, ಭಾರತೀ ಪ್ರಕಾಶನದಿಂದ ನಿರಂತರ ಸಜ್ಜನಿಕೆಯ ಧರ್ಮ ಭಾರತಿ, ಅದೆಷ್ಟು ಯೋಜನೆಗಳು, ಅದೆಷ್ಟ ಯೋಚನೆಗಳು,ಎಲ್ಲಾ ಸಮಾಜಕ್ಕಾಗಿ, ಒಳ್ಳೆಯ ಸಮಾಜಕ್ಕಾಗಿ. ನೋವಿನಿಂದ ಬರೆಯುತ್ತಿದ್ದೇನೆ, ಇಂತವರನ್ನೂ ಈ ದೈವ ಪರೀಕ್ಷೆಗೆ ಒಳಪಡಿಸುತ್ತಿದೆಯಲ್ಲಾ!!.
ಕೊನೆಯಲ್ಲಿ ನಾನು ನಮ್ಮ ಸಮಾಜ ಭಾಂದವರಿಗೆ ಹೇಳುವುದಿಷ್ಟೆ. ಸಮಾಧಾನದಿಂದ, ಸುಜ್ಞಾನದಿಂದ, ಸುಮೋಧದಿಂದ ನಮ್ಮ ನಿಮ್ಮ ನೆಡುವಳಿಕೆಯನ್ನು ಇಟ್ಟಕೊಳ್ಳೋಣ. ಜಗಳಮಾಡಿ ಅದೇನನ್ನೋ ಸಾದಿಸುತ್ತೇನೆ ಎನ್ನುವವರು ದಾರಿ ಅವರದ್ದಾಗಲಿ, ನಮಗೇಕೆ ಅದರ ಗೊಡವೆ. ನಾವು ನಮ್ಮಲ್ಲಿ ಬಹಳ ನಂಬಿಕೆಯಿದೆ ಎಂದಾದರೆ, ನಮ್ಮನ್ನು ನಾವು ನಂಬಿದ ರಾಮನಾಗಲೀ, ರಾಜರಾಜೇಶ್ವರಿಯಾಗಲೀ, ನಮ್ಮ ಅಧಮ್ಯ ಗುರುಪರಂಪರೆಯಾಗಲೀ ಕೈಬಿಡುವಿದಿಲ್ಲ. ಶುದ್ಧ ಸಾಕ್ಷಿಯ ಮೇಲೆ ನಮಗೆಲ್ಲಾ ನಂಬಿಕೆಯಿದೆ. ಅದೇ ಅಂತ: ಸಾಕ್ಷಿ. ನಮ್ಮ ಗುರುಗಳೇ ಹೇಳಿದಂತೆ ನಮ್ಮ ಜೊತೆಗಿರುವ ಆತ್ಮ ನಮ್ಮಡನೇ ಇರುತ್ತಾ ನಮ್ಮ ಆಟೋಟಗಳನ್ನು ನೋಡುತ್ತಾ ಇರುತ್ತಾನೆ……..
ಕೊನೆಯಲ್ಲಿ ವಿಧುರ ನೀತಿಯಿಂದ:-
ನ ವೈ ಭಿನ್ನಾ ಜಾತು ಚರಂತಿ ಧರ್ಮಂ, ನ ವೈ ಸುಖಂ ಪ್ರಾಪ್ನುವಂತೀಹ ಭಿನ್ನಾ: | ನ ವೈ ಭಿನ್ನಾ ಗೌರವಂ ಪ್ರಾಪ್ನುವಂತಿ, ನ ವೈ ಭಿನ್ನಾ ಪ್ರಶಮಂ ರೋಚಯತಿ||
ಜಗಳವಾಡುವವರು ಧರ್ಮ ಮಾಡುವುದಿಲ್ಲ. ಸುಖ ಪಡುವುದಿಲ್ಲ. ಅವರಿಗೆ ಮಾನ ಮರ್ಯಾದೆಗಳ ಪರಿವಿಲ್ಲ.ಜಗಳಗಂಟರಿಗೆ ಸಂಧಾನವಾಗಲಿ, ಶಾಂತಿಯಾಗಲಿ ಗೋಚರಿಸುವುದಿಲ್ಲ. ದ್ವೇಷಾಸೂಯೆಗಳೆಂಬ ತುಪ್ಪವನ್ನು ಜಗಳವೆಂಬ ಜಾತವೇದಕ್ಕೆ ಸುರಿದರೆ ಕಲಹ ಬೆಳೆಯುವುದಲ್ಲದೇ ಪರಸ್ಪರ ನಾಶಕ್ಕೆ ಎಡೆಮಾಡಿಕೊಡುತ್ತದೆ. ಮಧುರ ಮಾತುಗಳು ಬಾಂಧವ್ಯವನ್ನು ವೃದ್ಧಿಸುತ್ತವೆ.
ನಮಗೆ ಜಗಳದ ಗೊಡವೆ ಬೇಡ, ನಮ್ಮ ಗುರುಗಳನ್ನು ಅನುಸುರಿಸುವುದಾದರೆ ಮಧುರ ಮಾತೆ ಬೇಕು. ಸತ್ಯವೊಂದೇ ಗೆಲುವುದು. ಕತ್ತಲಲ್ಲಿ ಬೆಳಕನ್ನು ಕಾಣಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ?
ಭಗವಂತ ಅವರಿಗೆ ಸದ್ಬುದ್ಧಿಯನ್ನು ಕೊಡಲಿ.
ಹರೇರಾಮ.
September 25, 2014 at 9:41 AM
Navarathri utsava ellarigu shubhavannu nidali
September 25, 2014 at 11:23 AM
ನವದುರ್ಗೆಯರು ಎಲ್ಲರ ಕಾಮ, ಕ್ರೋಧ, ಮೋಹ, ಮದ- ಮಾತ್ಸರ್ಯಗಳೆಂಬ ಶತ್ರುಗಳನ್ನು ನಿಗ್ರಹಿಸಿ, ಸರ್ವರಿಗೂ ಶುಭವನ್ನುಂಟು ಮಾಡಲಿ.
September 25, 2014 at 2:00 PM
Hareraama,
Guruji’ s Bless
Dattu, Dombivli
September 25, 2014 at 6:11 PM
Hare Raama,
Nava ratri Habbavu ellarigu shubhavannuntumadali.
September 25, 2014 at 6:14 PM
hare raama …
September 25, 2014 at 9:50 PM
harerama
September 26, 2014 at 9:48 AM
Navaraathri ya shubhashayagalu.
September 26, 2014 at 7:58 PM
Shree Gurubhyonamaha,Ellarigu navarathri habbada hardika shubhashayagalu
October 6, 2014 at 9:10 PM
Sri Sri Raghaveshwar Bharati Mahaswamiglige shirasastanga namaskara sallisutta ellrigu Navaratre habbada hardhika shubhashayagalu. Hareram.
October 27, 2014 at 7:52 PM
ಹರೆ ರಾಮ.
ಕತ್ತಲಲ್ಲಿ ಬೆಳಕನ್ನುತೋರಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ ಏನೆನ್ನಬೇಕು?, ಸಂದರ್ಭವೊಂದರಲ್ಲಿ ನನ್ನ ತೀರ್ಥರೂಪರು ಹಿಂದೊಮ್ಮೆ ಹೇಳಿದ ಮಾತಿದು.
ಪ್ರಸಿದ್ಧ ಕನ್ನಡ ಲೇಖಕ ಶ್ರೀ ಬೈರಪ್ಪನವರ ಆವರಣ ಕಾದಂಬರಿಯ ಪ್ರವೇಶಿಕೆಯ ಕೆಲವು ವಾಕ್ಯಗಳನ್ನು ನಿಮ್ಮೊಳಗೆ ಹಂಚಿಕೊಂಡು ಮುಂದುವರಿಯುತ್ತೇನೆ.
“ಸತ್ಯವನ್ನು ಮರೆಮಾಚುವ ಮಾಯೆಯ ಕಾರ್ಯಕ್ಕೆ ಆವರಣವೆಂದೂ, ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು. ವ್ಯಕ್ತಿಯ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಅವಿದ್ಯೆ ಎಂದೂ, ಸಮೂಹದ ಮತ್ತು ಜಗತ್ತಿನ ಮಟ್ಟದಲ್ಲಿ ನಡೆಯುವ ಕ್ರಿಯೆಯನ್ನು ಮಾಯೆ ಎಂದೂ ಕರೆಯುತ್ತಾರೆ……
ಆಜ್ಞಾನಕ್ಕೆ ಆವರಣ ಮತ್ತು ವಿಕ್ಷೇಪಗಳೆಂಬ ಎರಡು ಶಕ್ತಿಗಳಿವೆ. ಕಿರಿದಾದ ಮೋಡವೊಂದು ಅನೇಕ ಯೋಜನವಿಸ್ತಾರವಾದ ಸೂರ್ಯಮಂಡಲವನ್ನು ನೋಡುಗರ ನೋಟದಿಂದ ಮರೆಯಾಗಿಸುವ ಹಾಗೆಯೇ ಆವರಣಶಕ್ತಿಯು ಸತ್ಯವನ್ನು ಮರೆಮಾಚಿಸುತ್ತದೆ… ನಮ್ಮ ಅಜ್ಞಾನದ ಕಾರಣ ಹಗ್ಗದಲ್ಲಿ ಹಾವು ಕಾಣುವಂತೆ ವಿಕ್ಷೇಪ ಶಕ್ತಿಯು ಇಲ್ಲದ್ದನ್ನು ಇರುವಂತೆ ತೋರಿಸುತ್ತದೆ.”
ಈ ನಿಜ ಸುಳ್ಳುಗಳ ಮಾಯೆಯೆಂಬ ಆಟ ನಮ್ಮನ್ನು ಈ ಹಿಂದಿಗಂತಲೂ ಇಂದೇಕೋ ಹೆಚ್ಚು ಕಾಡುತ್ತಿದೆ. ನಮ್ಮ ಪೂಜ್ಯ ಗುರೂಜಿಯವರ ಕುರಿತಾದ “ಸುಳ್ಳಿನ ಕಂತೆಗಳ” ಕಥೆಗಳು ನಮ್ಮಂತವರ ಮೇಲೆ, ನಮ್ಮ ಬಂಧುಗಳ ಮೇಲೆ, ನಮ್ಮ ಸಮಾಜದ ಮೇಲೆ ಬಹಳ ಬಹಳವಾಗಿ ದುಷ್ಪರಿಣಾಮ ಬೀರಿದೆ. ನಾವೆಲ್ಲಾ ನೊಂದಿದ್ದೇವೆ, ಬೆಂದಿದ್ದೇವೆ, ಅಲ್ಲಲ್ಲಿ ಕುಂದಿದ್ದೇವೆ ಕೂಡ. ಬೈರಪ್ಪನವರ ಮಾತಿನಲ್ಲೇ ಹೇಳುವುದಾದರೆ “ಅವಿದ್ಯಾ ಕಾಮ ಕರ್ಮಗಳಿಂದ ಬಿಡಿಸಿಕೊಂಡು ಶುದ್ಧಸಾಕ್ಷಿಯ ಹದಕ್ಕೆ ಏರುವ ತನಕ ನಮಗೆ ನಮ್ಮನ್ನಾಗಲಿ ನಮ್ಮ ದೇಶದ ಅಥವಾ ಮಾನವಕುಲದ ಇತಿಹಾಸವನ್ನಾಗಲಿ ಗ್ರಹಿಸುವುದು ಸಾಧ್ಯವಾಗುವುದಿಲ್ಲ.”
ಆದರೆ, ಆದರೆ ಇಂದು ಮೆರೆಯುತ್ತಿರುವುದಾದರೂ ಏನು? ಗೋವಿನಂತೆ ನಾವು ಮೌನವಾಗಿರುವಾಗ, ಕಥೆಗೊಂದು ಕಥೆಯನ್ನು ಸೇರಿಸಿ ಅದನ್ನೇ ಸತ್ಯ ಎಂದು ಬಿಂಬಿಸುವರು, ಸಮಾಜಕ್ಕೆ ಅದರಿಂದಾಗುವ ಸಾಧಕ ಬಾಧಕಗಳನ್ನು ಅರಿತೋ ಅರಿಯದೆಯೋ ಸುಳ್ಳಿಗೆ ಬೇರೆ ಬೇರೆ ಚಿತ್ತಾರಗಳ ಬಿಡಿಸಿ ಕುತೂಹಲದಿಂದ ನೋಡುವ ವಿಕೃತ ಮನಸ್ಸಿನವರಿಗೆ ಮುದನೀಡುವವರನ್ನು ಏನೆಂದು ಕರೆಯಬೇಕು?.
ಸಾಮನ್ಯನಿಗೂ, ಎಳೆವ ಮಕ್ಕಳಿಗೂ ಹೊಳೆವ ತರ್ಕಗಳಾಗಲಿ, ಕಾರಣಗಳಾಗಲೀ ಸಣ್ಣ ಮನಸ್ಸಿನವರಿಗಾಗಲಿ, ಸುದ್ದಿಯ ವ್ಯಾಪಾರಿಗಳಾಗಲೀ ಹೊಳೆಯುವುದಾದರೂ ಎಂತು. ಆದರೆ ಸತ್ಯವೆಂದೂ ಗೆಲವುದು ಎಂದು ನಂಬಿದವರು ನಾವು. ಸುಳ್ಳು ಹೇಳುವವರು ದಿನಕ್ಕೊಂದು ವಿಷಯ, ದಿನಕ್ಕೊಂದು ವೇದಿಕೆ ಹುಡುಕತ್ತಾ ಹೋಗುತ್ತಾರೆ. ಗುರುಗಳು ಹೇಳಿದಂತೆ, ಸತ್ಯವನ್ನ ಪದೆ ಪದೇ ಹೇಳಬೇಕಾಗಿಲ್ಲ, ಅದು ತನ್ನಂತಾನೆ ತೆರೆದು ಕೊಳ್ಳುತ್ತದೆ.
ನಾನು ಈ ಮಿಥ್ಯಾರೋಪಕ್ಕೆ ಪ್ರತಿಕ್ರಿಯಿಸುವುದು ಇಷ್ಟೇ.
ನಾನು ಅನೇಕ ವರುಷಗಳಿಂದ ನೋಡಿದ ಬೆಳಕಲ್ಲಿ ಕತ್ತಲೆಯನ್ನು ಕಾಣುವುದಾದರೂ ಎಂತು? ನಮ್ಮ ಗುರುಗಳು ಎಂದರೆ ದೇವರ ಅವತಾರ ಎಂದು ತಿಳಿದವನೇನು ನಾನಲ್ಲ. ಆದರೆ ಈ ಗುರುಗಳಲ್ಲಿ ಮಾನವತೆಯ ಮಹಾವತಾರವನ್ನು ಕಣ್ಣಾರೆ ನಿಮ್ಮೆಲ್ಲರೊಡನೆ ನೋಡಿದ, ಅನುಭವಿಸಿದವರಲ್ಲಿ ನಾನೂ ಒಬ್ಬ. ಸಮಾಜದ ಪ್ರತಿ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಯನ್ನೇ ಯಾವಾಗಲೂ ಚಿಂತಿಸುವ, ಬಡವರನ್ನೂ, ಶ್ರೀಮಂತರೆಲ್ಲರನ್ನೂ ಏಕ ದೃಷ್ಟಿಯಿಂದ ನೋಡುವ, ಸಮಾಜದ ಸ್ವಾಸ್ಥವನ್ನು ಸದಾ ಚಿಂತಿಸುವ, ನಮ್ಮ ನಿಮ್ಮೆಲ್ಲರ ಅನೇಕ ವೈಯಕ್ತಿಕ ವಿಚಾರಗಳಲ್ಲೂ, ಸಮಾಜದ ಇಡಿ ದೃಷ್ಟಿಯಲ್ಲೂ ಒಳ್ಳೆಯ ಸಲಹೆ ನೀಡಿದ್ದಲ್ಲದೇ, ತಮ್ಮ ಸಹಜ, ಸರಳ ಜೀವನದಿಂದ ನಮಗೆಲ್ಲಾ ಮಾದರಿಯಾಗಿರುವ ಗುರುಗಳಲ್ಲಿ ಕರುಣೆಯಲ್ಲದೇ ಇನ್ನೇನನ್ನು ಕಾಣಲು ಸಾದ್ಯ. ಅನೇಕ ಕುಟುಂಬಗಳನ್ನು ಒಂದು ಮಾಡಿದ, ಅದೆಷ್ಟೋ ಸಲ ಒಂದೇ ಕುಟುಂಬದವರ ಭಿನ್ನಮತವನ್ನು ದೂರಮಾಡಿದವರು ಒಂದು ಕುಟುಂಬಕ್ಕೆ ಒಳಿತನ್ನ ಬಯಸುವರೋ ಹೊರತಾಗಿ ಕೆಟ್ಟದನ್ನು ಮಾಡಹೊರಟಾರೇನು?
ನಮಗೆಲ್ಲಾ ತಿಳಿದಹಾಗೆ ಕಪಟಿಗಳು ಪರದೆಯ ಹಿಂದಿನಿಂದ ಪಿತೂರಿ ಹೂಡುತ್ತಲೇ ಇದ್ದಾರೆ. ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ಸಮಾಜದ ಈ ಪರಮಹಂಸರಿಗೆ ತೊಂದರೆ ಕೊಡುತ್ತಾ ಬಂದಿದ್ದಾರೆ. ಹಾಗಂತ ಅವರು ಸಾಧಿಸುವುದಾದರೂ ಏನು? ವಿಕೃತ ಮನದವರಿಗೆ ಸಂಕಟ ತಂದ್ದೊಡ್ಡುವುದೇ ಒಂದು ರೀತಿಯ ಸಂತಸವಿರಬಹುದೇನೋ.
ಸದಾ ಸಮಾಜದ ಒಳಿತಿಗಾಗಿ, ಸಮಾಜದ ಒಂದೊಂದು ವ್ಯಕ್ತಿಯ ಮೇಲೆತ್ತಲು ನಮ್ಮ ನಿಮ್ಮೆನ್ನೆಲ್ಲಾ ಒಂದಾಗಿಸಿ, ಒಂದು ಗುರಿತೋರಿಸಿ ಅವರವರ ಗುಣ ಯೋಗ್ಯತೆಗಳ ಗುರುತಿಸಿ ಯಾವುದ್ಯಾವುದೋ ಯೋಜನೆಗಳಲ್ಲಿ ತನುವಿಹೊದೋ, ಮನವಿಹುದೋ, ಧನವಿಹುದೋ ನಮ್ಮಿಂದ ಕಿಂಚಿತ್ ಸೇವೆಯ ಮಾಡಿಸಿ, ಪುಣ್ಯದ ದಾರಿ ಎಂದರೆ ಹಂಚಿ ತಿನ್ನಬೇಕು ಎಂಬ ಉಪನಿಷತ್ ವ್ಯಾಖ್ಯೆಯನ್ನು ಕಾರ್ಯರೂಪಕ್ಕೆ ತಂದವರು ನಮ್ಮ ಗುರುಗಳು.
ಸಮಾಜದ ಮಹಿಳೆಯರಿಗೆ ಗೌರವಯುತ ಬಾಳುವೆಯ ಹಾದಿಯಲ್ಲಿ ಮಾತೃವಿಭಾಗವನ್ನು ತೆರೆದು, ಅಸಂಖ್ಯ ಮಹಿಳೆಯರಿಗೆ ದಾರಿಯನ್ನು ತೋರಿದ ಗುರುಗಳಿಗೆ, ನಮ್ಮವರಿಂದಲೇ ಈ ರೀತಿಯ ಪಾಡು ಪಡುವಂತಾಯಿತಲ್ಲಾ ಎಂದು ನನ್ನಂತೆ ನಿಮಗೂ ಸಂಕಟವಾಗಿದ್ದು ದಿಟ. ಆದರೆ, ನಾವೆಲ್ಲ ಓದಿಕೊಂಡು ಬಂದಂತೆ, ನಮ್ಮ ಇತಿಹಾಸ, ಪುರಾಣಗಳಲ್ಲಿ ನಾವು ಇಂತಹಾ ಕುಲಗೇಡಿಗಳನ್ನು ನೋಡಬಹುದು. ಕಾರಣ, ಪ್ರಾರಬ್ಧ ಹೌದು, ನಾವು ಎಂದೆಂದಿಗೂ ನಂಬಿಕೊಂಡು ಬಂದಂತೆ ಪ್ರಾರಾಬ್ಧವೇ ಸರಿ, ಇದು ರಾಮನನ್ನೂ ಬಿಡಲಿಲ್ಲ, ಕೃಷ್ಣನನ್ನು ಬಿಡಲಿಲ್ಲ.
ನಮ್ಮ ಕರುಣಾಮಯಿ ಗುರುಗಳಲ್ಲಿ ಯಾವ ಋಣಾತ್ಮಕ ಅಂಶವನ್ನೂ ಇಲ್ಲಿಯವರೆಗೆ ನೋಡಲಿಲ್ಲ, ಗಮನಿಸಲಿಲ್ಲ, ಅನುಭವಿಸಲಿಲ್ಲ. ಗೋವಿನ ಗುರುವೆಂದು ಹವ್ಯಕರ ಹೊರತಾಗಿಯು ಅವರನ್ನು ಪ್ರೀತಿಸುವ, ಗೌರವಿಸುವ ಅನೇಕ ಸಮಜವನ್ನು ನಾವು ನೋಡಿದ್ದೇವೆ. ಇಂದಿನ ಈ ವಿಷಭರಿತ ಸಮಾಜ ವ್ಯವಸ್ಥೆಯಲ್ಲೂ ಗೋವಿನ ಕುರಿತಾದ ಅವರ ವಿಶ್ವ ವ್ಯಾಪಿ ಚಳುವಳಿಯಲ್ಲಿ ಅವರು ಯಾರನ್ನೂ ಎದುರ ಹಾಕಿ ಕೊಂಡಿದಿಲ್ಲ. ತಮ್ಮ ಮಧುರ ಮಾತಿನಿಂದ, ಸತ್ಯ ಗೋಚರ ವಿಷಯಗಳಿಂದ ಗೋವಿನಿಂದ ಆಗುವ ಲೌಕಿಖ ಲಾಭದ ಕಾರಣಗಳನ್ನು ನಮಗೆ ತಿಳಿಹೇಳಿ, ನಮ್ಮಮನವನ್ನು ಚೇತರಿಸಿ ಆಧ್ಯಾತ್ಮದೆಡೆಗೆ ನಮ್ಮನ್ನು ಕೊಂಡಯ್ದ ಪುಣ್ಯ ಪುರಷನಲ್ಲಿ ನಾನು ಒಳ್ಳೆಯ ಗುಣಗಳಲ್ಲದೇ, ಎನನ್ನು ಕಾಣಲಿ. ವಿದ್ಯೆಯಿಂದ ವಂಚಿತರಾದವರಿಗೆ, ವಿದ್ಯೆಯನ್ನು ನೀಡಬೇಕಾದ್ದು, ಆರೋಗ್ಯ ಕೈಗೆಟಕದವರಿಗೆ ಆರೋಗ್ಯದ ಭರವಸೆ, ಗ್ರಾಮೀಣ ಜನರಿಗೆ ಪಟ್ಟಣದವರಿಗೆ ಕೊಟ್ಟುಕೊಳ್ಳುವ ವ್ಯವಸ್ಥೆ, ಆಧ್ಯಾತ್ಮ ಅರಸುವವರಿಗೆ ನಿರಂತರ ಸತ್ಸಂಘ, ಭಾರತೀ ಪ್ರಕಾಶನದಿಂದ ನಿರಂತರ ಸಜ್ಜನಿಕೆಯ ಧರ್ಮ ಭಾರತಿ, ಅದೆಷ್ಟು ಯೋಜನೆಗಳು, ಅದೆಷ್ಟ ಯೋಚನೆಗಳು,ಎಲ್ಲಾ ಸಮಾಜಕ್ಕಾಗಿ, ಒಳ್ಳೆಯ ಸಮಾಜಕ್ಕಾಗಿ. ನೋವಿನಿಂದ ಬರೆಯುತ್ತಿದ್ದೇನೆ, ಇಂತವರನ್ನೂ ಈ ದೈವ ಪರೀಕ್ಷೆಗೆ ಒಳಪಡಿಸುತ್ತಿದೆಯಲ್ಲಾ!!.
ಕೊನೆಯಲ್ಲಿ ನಾನು ನಮ್ಮ ಸಮಾಜ ಭಾಂದವರಿಗೆ ಹೇಳುವುದಿಷ್ಟೆ. ಸಮಾಧಾನದಿಂದ, ಸುಜ್ಞಾನದಿಂದ, ಸುಮೋಧದಿಂದ ನಮ್ಮ ನಿಮ್ಮ ನೆಡುವಳಿಕೆಯನ್ನು ಇಟ್ಟಕೊಳ್ಳೋಣ. ಜಗಳಮಾಡಿ ಅದೇನನ್ನೋ ಸಾದಿಸುತ್ತೇನೆ ಎನ್ನುವವರು ದಾರಿ ಅವರದ್ದಾಗಲಿ, ನಮಗೇಕೆ ಅದರ ಗೊಡವೆ. ನಾವು ನಮ್ಮಲ್ಲಿ ಬಹಳ ನಂಬಿಕೆಯಿದೆ ಎಂದಾದರೆ, ನಮ್ಮನ್ನು ನಾವು ನಂಬಿದ ರಾಮನಾಗಲೀ, ರಾಜರಾಜೇಶ್ವರಿಯಾಗಲೀ, ನಮ್ಮ ಅಧಮ್ಯ ಗುರುಪರಂಪರೆಯಾಗಲೀ ಕೈಬಿಡುವಿದಿಲ್ಲ. ಶುದ್ಧ ಸಾಕ್ಷಿಯ ಮೇಲೆ ನಮಗೆಲ್ಲಾ ನಂಬಿಕೆಯಿದೆ. ಅದೇ ಅಂತ: ಸಾಕ್ಷಿ. ನಮ್ಮ ಗುರುಗಳೇ ಹೇಳಿದಂತೆ ನಮ್ಮ ಜೊತೆಗಿರುವ ಆತ್ಮ ನಮ್ಮಡನೇ ಇರುತ್ತಾ ನಮ್ಮ ಆಟೋಟಗಳನ್ನು ನೋಡುತ್ತಾ ಇರುತ್ತಾನೆ……..
ಕೊನೆಯಲ್ಲಿ ವಿಧುರ ನೀತಿಯಿಂದ:-
ನ ವೈ ಭಿನ್ನಾ ಜಾತು ಚರಂತಿ ಧರ್ಮಂ, ನ ವೈ ಸುಖಂ ಪ್ರಾಪ್ನುವಂತೀಹ ಭಿನ್ನಾ: | ನ ವೈ ಭಿನ್ನಾ ಗೌರವಂ ಪ್ರಾಪ್ನುವಂತಿ, ನ ವೈ ಭಿನ್ನಾ ಪ್ರಶಮಂ ರೋಚಯತಿ||
ಜಗಳವಾಡುವವರು ಧರ್ಮ ಮಾಡುವುದಿಲ್ಲ. ಸುಖ ಪಡುವುದಿಲ್ಲ. ಅವರಿಗೆ ಮಾನ ಮರ್ಯಾದೆಗಳ ಪರಿವಿಲ್ಲ.ಜಗಳಗಂಟರಿಗೆ ಸಂಧಾನವಾಗಲಿ, ಶಾಂತಿಯಾಗಲಿ ಗೋಚರಿಸುವುದಿಲ್ಲ. ದ್ವೇಷಾಸೂಯೆಗಳೆಂಬ ತುಪ್ಪವನ್ನು ಜಗಳವೆಂಬ ಜಾತವೇದಕ್ಕೆ ಸುರಿದರೆ ಕಲಹ ಬೆಳೆಯುವುದಲ್ಲದೇ ಪರಸ್ಪರ ನಾಶಕ್ಕೆ ಎಡೆಮಾಡಿಕೊಡುತ್ತದೆ. ಮಧುರ ಮಾತುಗಳು ಬಾಂಧವ್ಯವನ್ನು ವೃದ್ಧಿಸುತ್ತವೆ.
ನಮಗೆ ಜಗಳದ ಗೊಡವೆ ಬೇಡ, ನಮ್ಮ ಗುರುಗಳನ್ನು ಅನುಸುರಿಸುವುದಾದರೆ ಮಧುರ ಮಾತೆ ಬೇಕು. ಸತ್ಯವೊಂದೇ ಗೆಲುವುದು. ಕತ್ತಲಲ್ಲಿ ಬೆಳಕನ್ನು ಕಾಣಬಹುದು, ಬೆಳಕಲ್ಲಿ ಕತ್ತಲನ್ನು ಹುಡಕ ಹೊರಟವರಿಗೆ?
ಭಗವಂತ ಅವರಿಗೆ ಸದ್ಬುದ್ಧಿಯನ್ನು ಕೊಡಲಿ.
ಹರೇರಾಮ.
October 28, 2014 at 11:34 AM
Hare raama
Minuku Hula (Jugnu)Tannalle Belakideyandu Helidare, Suryana Belakannu noduva bhagya adakkilla. Suryana Prakarateyalli adu mayavadeetu
Nammelara Manadalada matannu akshara roopadalli bimbisiddeeri
Dhanyavaadagalu