ನಾಗರೀಕತೆ ಬೆಳೆದಂತೆ ಪ್ರಕೃತಿಯ ಮೇಲೆ ಮನುಷ್ಯನ ಸವಾರಿ ನಡೆಯುತ್ತಲೇ ಇದೆ..
ಪ್ರಕೃತಿಯೆಂದರೆ ನಮ್ಮ ತಾಯಿ.
ಜೀವಾಂಕುರವಾದ ಪ್ರಾರಂಭದಲ್ಲಿ ಅಮ್ಮನಿಂದ ‘ಉಸಿರು’ ಪಡೆವ ನಾವು, ಈ ಭುವಿಯ ಮಡಿಲಿಗೆ ಬಂದ ಬಳಿಕ ಅದಕ್ಕಾಗಿ ಆಶ್ರಯಿಸುವುದು ಪ್ರಕೃತಿಮಾತೆಯನ್ನು!
ಅದರ ಮಹತ್ವವನ್ನರಿಯದ ನಾವು ‘ಕೃತಕ’ದತ್ತ ಸಾಗುತ್ತಿದ್ದೇವೆ.
ಇದರಿಂದ ನಮಗಾಗುವ ನಷ್ಟ ಎಷ್ಟರಮಟ್ಟಿಗಿದೆ – ಎಂಬುವುದಕ್ಕೆ ಒಂದು ಪುಟ್ಟ ಉದಾಹರಣೆ ಗಮನಿಸೋಣ:
ಮನುಷ್ಯನೊಬ್ಬನಿಗೆ ಸುಮಾರು 550 ಲೀಟರುಗಳಷ್ಟು ಆಮ್ಲಜನಕದ ಅಗತ್ಯವಿದೆ ಎಂದು ವಿಜ್ಞಾನವು ಹೇಳುತ್ತದೆ.
ಅಂದರೆ ಈಗಿನ ಕೃತಕ ಆಮ್ಲಜನಕ ಸಿಲಿಂಡರುಗಳಲ್ಲಿ ಮೂರು ಸಿಲಿಂಡರುಗಳಷ್ಟು..
ಒಂದು ಸಿಲಿಂಡರಿನ ಬೆಲೆ 700 ರೂ.ಗಳೆಂದಾದರೆ ಒಬ್ಬ ವ್ಯಕ್ತಿ ಒಂದು ದಿನದಲ್ಲಿ 2100 ರೂ.ಗಳಷ್ಟು ಮೌಲ್ಯದ ಆಮ್ಲಜನಕ ಸೇವಿಸುತ್ತಾನೆ ಎಂದಾಯಿತು!
ಅಂದರೆ ಒಂದು ವರ್ಷಕ್ಕೆ 766500 ರೂ.ಗಳು!
ಹಾಗಿದ್ದಲ್ಲಿ ಆತನ ಇಡೀ ಜೀವಮಾನಕ್ಕೆ ಅಗತ್ಯವಾಗುವ ಆಮ್ಲಜನಕದ ಮೌಲ್ಯವೆಷ್ಟೆಂದು ಊಹಿಸಿ..!!
ಇಷ್ಟೊಂದು ಬೆಲೆಬಾಳುವ ಸಂಪತ್ತನ್ನು ಪ್ರಕೃತಿಮಾತೆ ಏನೇನೂ ಪ್ರತಿಫಲಾಪೇಕ್ಷೆಯಿಲ್ಲದೇ ಈಯುತ್ತಿದ್ದಾಳೆ.
ನಾವು ಮಾತ್ರ ಅವಿವೇಕಿಗಳಂತೆ ನಮ್ಮ ಇಹದಿರವಿನ ಇರುವಿಕೆಗೆ ಮೂಲಾಧಾರವಾದ ವೃಕ್ಷಸಂಪತ್ತನ್ನು ನಾಶಪಡಿಸುತ್ತಲೇ ಇದ್ದೇವೆ…
ಎಂಥ ನಷ್ಟ!
ಎಂಥ ನಷ್ಟವಿದು!
ನಮಗೆ ನಾವೇ ಮಾಡಿಕೊಳ್ಳುತ್ತಿರುವ ನಷ್ಟ!
(ಸಂಪಾದಿತ)
September 14, 2011 at 1:09 PM
ಹರೇ ರಾಮ।
ವೃಕ್ಷ ಕಡಿದು ವಕ್ಷ ಕ್ಕೆ ನೋವು ಕೊಡುವ ವಿಚಾರ ಅತ್ಯಂತ ಪ್ರಸ್ತುತ.
September 14, 2011 at 9:06 PM
How ungreatful?????!!!!
September 15, 2011 at 10:12 AM
…
September 15, 2011 at 10:16 AM
ಮರ ಬೆಳೆಸೋಣ, ಪ್ರಕೃತಿ ಉಳಿಸೋಣ …
September 15, 2011 at 10:22 AM
ಹರೇ ರಾಮ, ಅಲ್ಪ ಸುಖಕ್ಕಾಗಿ ಮನುಷ್ಯ ವಿವೇಚನೆಯಿಲ್ಲದ ಕೆಲಸ ಮಾಡುತ್ತಲೇ ಇದ್ದರೂ ತಾನೇ ಬುದ್ಧಿಜೀವಿ ಎಂದು ಬೇರೆ ತಿಳಿದಿದ್ದಾನೆ . ಇದರ ಅರಿವಾಗುವುದು ಹೇಗೆ/ಯಾವಾಗ?
September 15, 2011 at 3:56 PM
ಹರೇರಾಮ। ನಿಜ . ಕಾಡೇ ನಾಡಿನ ಸಂಪತ್ತು. ಹಸಿರೇ ಉಸಿರು .ಇದನ್ನರಿಯದ ಮಾನವನ ಅಂತ್ಯ ಖಂಡಿತ.
September 15, 2011 at 9:11 PM
ಮನುಜನಿಗೆ ಬೇಕು ಆಮ್ಲಜನಕ.. ದುರಂತವೆಂದರೆ, ಮನುಜನಾಗುತ್ತಿದ್ದಾನೆ ವಿಷಜನಕ 🙁
ಬೇಕಿರುವುದು ಬೇಡವಾಗಿದೆ, ಬೇಡವಾದದ್ದೇ ಬೇಕಾಗಿದೆ.
September 17, 2011 at 10:20 AM
ಹರೇರಾಮ್,
ಪ್ರಕ್ರತಿ ಯಿತ್ತ ನೀರು, ಗಾಳಿ, ಬೆಳಕು,ಬೆ೦ಕಿ, ಜಾಗ ಗಳಿಗೆ ನಾವು ಬಾಡಿಗೆ/ಕ್ರಯ
ಕೊಡಬೇಕೆ೦ದರೆ ಅದು ಯಾವ ಜನ್ಮದಲ್ಲಾದರೂ ಸಾದ್ಯವೇ?
ಅದನ್ನು, ಉಳಿಸಿ,ಬಳಸಿ,ಬೆಳೆಸುವುದರಿ೦ದ ಮಾತ್ರವೇ ಸ್ವ್ಲಲ್ಪವಾದರೂ
ಸಾಲ ದ ಬಡ್ಡಿ ತೀರಿಸಬಹುದೇನೋ?
September 20, 2011 at 9:02 AM
ಕಳೆದ ಆದಿತ್ಯವಾರದ (18.09.2011) ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ ಬಂದ ಸುದ್ದಿಯೊಂದಿದೆ…
ನಮ್ಮ ಮಠದ ಆಶ್ರಯದಲ್ಲಿ ನೆಡಿಸಲ್ಪಟ್ಟ ಗಿಡಗಳ ಬಗ್ಗೆ..
ಇಲ್ಲಿ ನೋಡಿ, ಚಿನ್ಮಯಿ ಎಂಬ 3ನೆಯ ತರಗತಿಯ ಹುಡುಗಿ ಬರೆದದ್ದು..
http://74.127.61.106/epaper/Display.aspx?Pg=H&Edn=MN&DispDate=9/18/2011
ಹರೇ ರಾಮ..
September 26, 2011 at 9:56 AM
ಹರೇರಾಮ್,
ಕ್ಷಮೆಯಿರಲಿ ಗುರುದೇವಾ