ಹರೇ ರಾಮ.
ನಮ್ಮೆಲ್ಲರ ಉದ್ಧಾರಕ್ಕಾಗಿ ನಮ್ಮ ಪರಮಪೂಜ್ಯ ಶ್ರೀಗಳು ಪರಮಪವಿತ್ರವಾದ ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳಲು ಉದ್ಯುಕ್ತರಾಗಿರುವ ಸಂದರ್ಭವಿದು. ಅನಾರೋಗ್ಯದ ನಿಮಿತ್ತವಾಗಿ, ಗುರುಗಳ ಈ ಮಂಗಳಕರ ವ್ರತದಲ್ಲಿ ಅಶೋಕೆಗೆ ಬಂದು ದೈಹಿಕವಾಗಿ ಸೇವೆಮಾಡಿ ಕೃತಾರ್ಥಳಾಗುವ ಭಾಗ್ಯವಿಲ್ಲ. ಪರಮಗುರುವಿನ ಈ ವ್ರತದ ಯಶಸ್ಸಿಗೆ, ಶ್ರೀಗಳ ಶಿಷ್ಯಕೋಟಿಯ ಪರವಾಗಿ ನನ್ನೀ ಕೃತಜ್ಞತಾಪೂರ್ವಕವಾದ ಗಾನಹಾರೈಕೆ.
– ಶ್ರೀ ಗಣಪತಿ ಭಟ್ ಜಟ್ಟಿಮನೆ ನನ್ನ ಜೀವನದ ಪ್ರತಿ ಹೆಜ್ಜೆಯೂ ಗುರುಬಲ, ದೇವರ ಕೃಪೆಯಿಂದ ಸಾಗಿ ಬಂದಿದೆಯೇ ವಿನಃ ಸಂಸಾರದ ಆರ್ಥಿಕ ಬಲದಿಂದಲ್ಲ, ಸ್ನೇಹಿತರ ಸಲಹೆಗಳು ಬಂದಿದೆಯಾದರೂ ಅದನ್ನು ಕಾರ್ಯರೂಪಕ್ಕೆ ತರಲು ಗುರುಪ್ರೇರಣೆಯೆ ಸಹಕಾರಿಯಾಯ್ತು ಎಂಬುದು ಖಚಿತವಾಗಿದೆ. ಎಲ್.ಐ.ಸಿ. ಏಜೆನ್ಸಿಯನ್ನು ಪಡೆದುಕೊಂಡು ಸಮಾಜಸೇವೆ ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದೆ. ಈ ರೀತಿಯಲ್ಲಿ ಸಮಾಜ ಮುಖಿಯಾದ… Continue Reading →
ಡಾ. ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ. ನನಗೂ ಶ್ರೀರಾಮಚಂದ್ರಾಪುರಮಠಕ್ಕೂ ಸಂಪರ್ಕವಾಗಿದ್ದು ಹಿಂದಿನ ಗುರುಗಳ ಕಾಲದಲ್ಲಿ. ಹಿಂದಿನ ಗುರುಗಳನ್ನು ಒಂದೆರಡು ಬಾರಿ ದರ್ಶನ ಮಾಡುವಂತಹ ಅವಕಾಶ ನನಗೆ ಸಿಕ್ಕಿತ್ತು. ನನಗೆ ನೆನಪಿದ್ದ ಹಾಗೆ, ಒಂದು ಬಾರಿ ಕೊಲ್ಲೂರಿನಲ್ಲಿ ನಡೆದ ಚಂಡಿಕಾ ಹೋಮದ ಸಂದರ್ಭದಲ್ಲಿ, ಮತ್ತೊಂದೆರಡು ಬೇರೆ ಕಾರ್ಯಕ್ರಮಗಳಲ್ಲಿ ಕೂಡ ಭೇಟಿ ಮಾಡಿದ್ದೆ. ಅವರ ತೇಜಸ್ಸು… Continue Reading →
॥ಹರೇ ರಾಮ॥ ಗೋವಿನೊಳಗೆ ಗೋವಾಗಿ, ಗೋವೇ ತಾನಾಗಿ, ಮೂಕಪ್ರಾಣಿಯ ವೇದನೆ, ಪ್ರೀತಿ, ವಾತ್ಸಲ್ಯ, ಕೃತಜ್ಞತೆಗಳನ್ನು ಜಗತ್ತಿಗೇ ತಿಳಿಸಿದವರು ನಮ್ಮೆಲ್ಲರ ಗುರುಗಳು ರಾಘವೇಶ್ವರ ಶ್ರೀಗಳು. ನಮ್ಮ ಗುರುಗಳು ಎಂದು ಹೇಳಲು ಅದೆಷ್ಟು ಸಂತೋಷ!, ಅದೆಷ್ಟು ಸಮಾಧಾನ!, ಅದೆಷ್ಟು ಹೆಮ್ಮೆ!, ಗುರುಗಳೆ… ಎಂದು ಹೇಳುತ್ತಿದ್ದರೆ ಅದೆಷ್ಟು ನೆಮ್ಮದಿ!. ನಮಗೆ ಗುರುಗಳು ’ಗುರು’ವೂ ಹೌದು, ’ತಾಯಿ’ಯೂ ಹೌದು. ಸದಾ ನಗುತ್ತಾ,… Continue Reading →
||Hare Rama|| When in life you don’t know where to go, how to go, what to do or even why to move ahead, that is the time when you see light. That is the hope to lead life fruitfully again…. Continue Reading →
|| ಶ್ರೀ ಗುರುರಾಘವೇಶ್ವರಾಯ ನಮಃ || ಶ್ರೀಗುರುಗಳ ಅಂತರ್ಜಾಲ ತಾಣದಲ್ಲಿ ಬರೆಯಲು ನಮಗೆ ಅವಕಾಶ ಕರುಣಿಸಿದ ಶ್ರೀಗುರುಚರಣಗಳಿಗೆ ಕೋಟಿ ಕೋಟಿ ನಮನಗಳು. ನಾವು ಮೊದಲಿನಿಂದಲೂ ಶ್ರೀಗುರು ಪರಂಪರೆಯನ್ನು ಮತ್ತು ಶ್ರೀಮಠದ ಕಾರ್ಯಕ್ರಮಗಳನ್ನು ನಂಬಿಕೊಂಡು ನಡೆದುಕೊಂಡು ಬಂದಿರುವ ಕುಟುಂಬದವರು. ಶ್ರೀಸವಾರಿ ಊರಿಗೆ ಚಿತ್ತೈಸಿದಾಗಲೆಲ್ಲಾ ನಮ್ಮ ಹೆತ್ತವರು ಗುರುದರ್ಶನ ಪಡೆಯುತ್ತಿದ್ದರು. ನಮ್ಮಮ್ಮ ಯಾವಾಗಲೂ ಗುರುಪೂಜೆ ಮತ್ತು ಗೋಪೂಜೆ ಹಾಗೂ… Continue Reading →
ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಪದ್ಮಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು. ಭಾರತ ಸಮೃದ್ಧ ಹಾಗೂ ಸಂಪನ್ನ ರಾಷ್ಟ್ರ. ನಮ್ಮ ಭಾರತವು ವಿಶ್ವದ ಹೃದಯ ಭಾಗದಲ್ಲಿದೆ. ಮಾನವ ಶರೀರದ ಪ್ರತಿಯೊಂದು ಅವಯವಕ್ಕೂ ಶಕ್ತಿ, ತೇಜಸ್ಸು, ಮತ್ತು ರಕ್ತ ಸಂಚಾರವು ಹೃದಯದಿಂದಲೇ ವಿನಿಯೋಗವಾಗುವಂತೆ ಪ್ರಪಂಚದ ಪ್ರತಿಯೊಂದು ಪ್ರದೇಶಕ್ಕೂ ಭಾರತ ದೇಶದಿಂದಲೇ ಧಾರ್ಮಿಕತೆ, ಜ್ಞಾನ, ಸಂಸ್ಕೃತಿ ಮುಂತಾದವುಗಳು ಪ್ರಸಾರವಾಗುತ್ತಿದೆ…. Continue Reading →
ಓ ಮನಸ್ಸೇ, ನೀನ್ಯಾಕೆ ಗುಣಾತ್ಮಕವಾಗಿ ಯೋಚಿಸಲಾರೆ ? ಬೆಳಕಿದ್ದೂ ಕಾಣಲಾರೆನೆಂದಾದರೆ, ಅದು ಬೆಳಕಿನ ತಪ್ಪಲ್ಲ, ಕಾಣುವ ಕಣ್ಣಿನದು ತಾನೇ ? ಮೇಲೆ ಹೇಳಿದೆ – “ಹರೇರಾಮ” ನಿಜ ಹೇಳು, ಕೆಲವು ವರ್ಷಗಳ ಹಿಂದಕ್ಕೆ ಪಯಣಿಸು, ಸಿಂಹಾವಲೋಕಿಸು. ಹೊಸತನ್ನು ಮಾಡುವ, ಪರರನ್ನು ಸಂಧಿಸುವ ಕ್ಷಣಗಳಲ್ಲಿ ಈ ಮಾತು ನೆನಪಾಗುತ್ತಿತ್ತೇ? “ನಿಜ” ಚೇತನ, ಪರಮಾತ್ಮನನ್ನೇ ನೀನು ಮರೆತಿದ್ದೆ. ಈಗ… Continue Reading →
ಪರಮಪೂಜ್ಯ ಸದ್ಗುರುವಿನ ಪಾದಾರವಿಂದಗಳಿಗೆ ಶಿರಸಾ ನಮಿಸಿ, ಗೋಮಾತೆಗೂ ವಂದಿಸುವೆ. “ಪ್ರತಿಯೊಂದು ವ್ಯಕ್ತಿಯಲ್ಲಿನ ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಆತ್ಮೋದ್ಧಾರದ ಹೆದ್ದಾರಿಯಲ್ಲಿ ನಮ್ಮನ್ನೆಲ್ಲ ಮುನ್ನಡೆಸುತ್ತಾ ಬಂದಿರುವ ನಮ್ಮೆಲ್ಲರ ಶ್ರೇಷ್ಠ ಗುರು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಕಮಲಗಳಿಗೆ ಅನಂತ ಕೋಟಿ ಪ್ರಣಾಮಗಳು. ಹದಿನೇಳು ವರ್ಷದ ಹಿಂದೆ ಶ್ರೀಗಳು ನಮ್ಮ ಗುರುಪೀಠಕ್ಕೆ ಆಯ್ಕೆಯಾಗಿ ಬೆಂಗಳೂರಿನ ಶ್ರೀ ಬಿ. ಕೃಷ್ಣ ಭಟ್ಟರ ಮನೆಯಲ್ಲಿ… Continue Reading →
ಪ್ರಥಮ ದರ್ಶನ : ಸುಮಾರು ಹದಿನೇಳು ವರ್ಷಗಳ ಹಿಂದೆ ೨೦.೦೪.೧೯೯೪ರ ಅಪರಾಹ್ನ; ನಾವು ಹಲವು ಸಮಾನ ಮನಸ್ಕರು ಸೇರಿ ಉಕ್ಕಿನಡ್ಕದ ಪರಿಸರದಲ್ಲಿ ಶ್ರಮದಾನ ಮಾಡುತ್ತಿದ್ದ ಸಂದರ್ಭ ಅದಾಗಿತ್ತು. ಆ ನಡುವೆ ಅದೇನೋ ಒಮ್ಮೆಲೆ ಸಂಚಲನವೊದು ಘಟಿಸಿದ ಅನುಭವ. ನಮ್ಮ ಪೀಠದ ಉತ್ತರಾಧಿಕಾರಿ ‘ಶಿಷ್ಯ’ರಾಗಿ ಆಯ್ಕೆಯಾದ ಶ್ರೀ ಶ್ರೀಗಳು ತಮ್ಮ ಪೂರ್ವಾಶ್ರಮದ ಆಪ್ತೇಷ್ಟರ ಕೊನೆಯ ಭೇಟಿಗಾಗಿ ಹೊರಟವರು… Continue Reading →