ಓರ್ವ ಸೂರ್ಯನಿಂದ ಸಾಸಿರ ಸಾಸಿರ ಕಿರಣಗಳು ಹೊರಸೂಸುವಂತೆ ಪರಮದೇವನೋರ್ವನಿಂದ ಮೂವತ್ತಮೂರು ಕೋಟಿ ದೇವತೆಗಳು, ಸಂಖ್ಯೆಗೆ ಸಿಗದಷ್ಟು ಜೀವಗಳು ವಿಕಸಿತಗೊಂಡಿವೆ. ಲೋಕವೆಲ್ಲವೂ ಅವನ ಮನೆ; ಲೋಗರೆಲ್ಲರೂ ಅವನ ಮಕ್ಕಳು. ಮಹಾಯಾಗವೆಂದರೆ ಅಲ್ಲಿ ದೇವರೆಲ್ಲರಿಗೂ, ಜೀವರೆಲ್ಲರಿಗೂ ಆಹ್ವಾನವಿದೆ. ಏಕೆಂದರೆ ಅವರು ತೃಪ್ತರಾದರೆ ಅವನು ತೃಪ್ತನಾಗುವನು; ಜೀವರುಗಳು, ದೇವರುಗಳು ತೃಪ್ತರಾದರೆ ದೇವರದೇವನು ತೃಪ್ತನಾಗುವನು. ದೇವರುಗಳಿಗೆ ಯಾಗಮಧ್ಯದಲ್ಲಿ ಹವಿರ್ಭಾಗಕ್ಕಾಗಿ ಆಹ್ವಾನ, ಜೀವರುಗಳಿಗೆ… Continue Reading →
1. ರಾಮನು ಸೀತೆಯ ಚಾರಿತ್ರ್ಯವನ್ನು ಶಂಕಿಸಿದ್ದನೇ? 2. ನಮ್ಮ ಪೂರ್ವಜರು ಗ್ರಹಣವನ್ನು “ಸೂರ್ಯ-ಚಂದ್ರರನ್ನು ರಾಹುವೆಂಬ ಹಾವು ನುಂಗುವುದು” ಎಂದು ತಪ್ಪು ತಿಳಿದಿದ್ದರೇ? ಮೇಲಿನ ಎರಡೂ ಪ್ರಶ್ನೆಗಳ ಉತ್ತರವು ಮಹಾಕವಿ ಕಾಳಿದಾಸನ ರಘುವಂಶ ಮಹಾಕಾವ್ಯದ ಒಂದೇ ಶ್ಲೋಕದಲ್ಲಿದೆ. ಸಂದರ್ಭ: ಸೀತೆಯ ಚಾರಿತ್ರ್ಯದ ಕುರಿತು ಜನರು ಅಯೋಧ್ಯೆಯ ಬೀದಿ-ಬೀದಿಗಳಲ್ಲಿ ಆಡಿಕೊಳ್ಳುತ್ತಿದ್ದಾರೆ ಎಂಬ ಅಪ್ರಿಯ ವಾರ್ತೆಯು ಚಾರನ ಮೂಲಕ ರಾಮನಿಗೆ… Continue Reading →
ನೀಲ ಕೇಶರಾಶಿಯ ನಡುವೆ ಎಲ್ಲಿಯೋ ಮರೆಯಾಗಿ ಮಲಗಿರುವ ಒಂದೇ ಒಂದು ಬೆಳ್ಳಿ ಕೂದಲಿನೆಳೆಯು ದರ್ಪಣದ ಮುಂದೆ ನಿಂತಾಗ ಎದ್ದು ಬಂದಂತೆ, ನಡುನೆತ್ತಿಯನೇರಿ ನೇಸರನೆಸೆಯುವ ಬೆಳಕಿನ ಬಳ್ಳಿಗಳ ಕ್ಷಣ ಮಸುಕಾಗಿಸುವ ಕಿರು-ಕರಿಮೋಡದಂತೆ, ಅಂಗದಿಂದ ಅಯೋಧ್ಯೆಗೆ ಹೊರಟು ನಿಂತ ದಶರಥನಂತರಂಗದಾಳದಲ್ಲಿ ಕಾರ್ಯಸಿದ್ಧಿಯ ಮಹಾನಂದದ ಮಧ್ಯೆಯೂ ಕ್ಷಣ ಹಣಿಕಿತು ಪ್ರಿಯವಿರಹದ ವಿಷಾದದೆಳೆಯೊಂದು. ಬಹುದಿನಗಳ ಬಳಿಕ, ಕೆಲದಿನಗಳಷ್ಟೇ ಲಭಿಸಿದ ಅಂತರಂಗಸಖನಾದ ಅಂಗರಾಜನ… Continue Reading →
ಅಮೃತ ಬರುವವರೆಗೆ ಮಥನ ಅನಿವಾರ್ಯ; ಮಥನದ ಕೊನೆಯಲ್ಲಿ ಅಮೃತ ಬರುವುದೂ ಅವಶ್ಯಂಭಾವೀ*! ಮಕ್ಕಳಿಲ್ಲದ ತನಗೆ ಮಕ್ಕಳನ್ನು ಕರುಣಿಸಬಲ್ಲ ಕರುಣಾಳು ಕಣ್ಮುಂದೆಯೇ ಇದ್ದರೂ… ಆ ಕಾರ್ಯಕ್ಕೆ ಮುನಿಯನ್ನು ಒಡಂಬಡಿಸಬಲ್ಲ ರೋಮಪಾದನು ತನಗೆ ಪ್ರಾಣಮಿತ್ರನೇ ಆಗಿದ್ದರೂ… ಕೇಳಬೇಕಾದುದನ್ನು ಕೇಳಲಾರದೆ ತಳಮಳಿಸುತ್ತಿದ್ದ ದಶರಥನಿಗೆ ಕೊನೆಗೂ ಕೇಳಲೇಬೇಕಾದ ಹೊತ್ತು ಬಂದಿತ್ತು. ಅಂಗರಾಜನನ್ನು ಬೀಳ್ಕೊಟ್ಟು ಅಯೋಧ್ಯೆಗೆ ಹೊರಡಲೇಬೇಕಾದ ಸನ್ನಿವೇಶ ಕಣ್ಮುಂದಿತ್ತು. ಕೊನೆಗೂ ಮಥನವು… Continue Reading →
ಪತಿಯು ಇನ್ನೊಂದು ಮದುವೆಯಾಗುವೆನೆಂದರೆ ಅದಕ್ಕೆ ಧರ್ಮಪತ್ನಿಯ ಪ್ರತಿಕ್ರಿಯೆ ಹೇಗಿದ್ದೀತು? ಶಿಷ್ಯನು ಬೇರೋರ್ವ ಗುರುಗಳನ್ನು ಆಶ್ರಯಿಸುವೆನೆಂದರೆ ಅದಕ್ಕೆ ಬಹ್ವಂಶ ಕುಲಗುರುಗಳ ಪ್ರತಿಕ್ರಿಯೆಯೂ ಹಾಗೆಯೇ ಇದ್ದೀತು! ಆದರೆ ವಸಿಷ್ಠರು ಎಲ್ಲರಂತಲ್ಲವಲ್ಲವೇ! ಮನುಷ್ಯರಲ್ಲಿಯೇ ಗುರುವು ಶ್ರೇಷ್ಠ; ಗುರುಗಳಲ್ಲಿ ವಸಿಷ್ಠರು ಸರ್ವಶ್ರೇಷ್ಠ! ಮಾನವತೆಯ ಮಹಾಮೇರು ಅವರು; ನಿಜವಾದ ಗುರು ಅವರು. ಕೋ ಗುರುಃ? ಯಾರು ನಿಜವಾದ ಗುರು? =ಅಧಿಗತತತ್ತ್ವಃ! ತತ್ತ್ವವನ್ನು- ತಥ್ಯವನ್ನು ಚೆನ್ನಾಗಿ… Continue Reading →