ಪರಮಪೂಜ್ಯ ಶ್ರೀ ಶ್ರೀರಾಘವೇಶ್ವರ ಸ್ವಾಮೀಜಿಗಳ ಕರುಣಾದೃಷ್ಟಿಗೆ ಈ ಆಸ್ಪತ್ರೆ ಇನ್ನೊಂದು ಉದಾಹರಣೆ. ಹಳ್ಳಿಯ ಬಡಜನರ ಆರೋಗ್ಯ ಸುಧಾರಣೆಗೆ ಈ ಹೊರರೋಗಿ ಜನರಲ್ ಔಷಧಾಲಯವನ್ನು ಮಹಾಸ್ವಾಮಿಗಳವರು ಮುಜುಂಗಾವಿನಲ್ಲಿ ದಯಪಾಲಿಸಿದರು. ಇಲ್ಲಿನ ವೈಶಿಷ್ಟ್ಯ ಕೇವಲ ೫ ರೂಪಾಯಿಗಳ ನೋಂದಾವಣಿ ಶುಲ್ಕ. ರೋಗಿಗಳಿಗೆ ನೀಡುವ ಈ ಕಾರ್ಡಿನಲ್ಲಿ ಮೂರು ತಿಂಗಳವರೆಗೆ ಉಚಿತ ಚಿಕಿತ್ಸಾ ಸೌಲಭ್ಯ.

ಈ ಆಸ್ಪತ್ರೆಯಲ್ಲಿ ಒಬ್ಬರು ಆಯುರ್ವೇದ ವೈದ್ಯರು ಮತ್ತು ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಔಷಧಿಗಳಲ್ಲಿ ಗೋ ಉತ್ಪನ್ನಗಳಿಗೆ ಆದ್ಯತೆ ಇದೆ. ಆಧುನಿಕ ಚಿಕಿತ್ಸಾ ಸೌಲಭ್ಯ ಇದೆ. ಈ ಆಸ್ಪತ್ರೆಗೆ ಶ್ರೀ ಗುರುಗಳ ಶಿಷ್ಯರು ಹಾಗೂ ಭಕ್ತರು ಪ್ರತೀ ತಿಂಗಳೂ ದೇಣಿಗೆಗಳನ್ನು ನೀಡುತ್ತಿರುವುದು ಸಂತೋಷದ ವಿಷಯವಾಗಿದೆ. ನಮ್ಮ ಮಠದ ಭಕ್ತರಾದ ತುಂಬಾ ಮಂದಿ ವೈದ್ಯರುಗಳು ಪ್ರತೀ ತಿಂಗಳು ಔಷಧಿ ದಾನ ಮಾಡುತ್ತಿದ್ದಾರೆ. ಈ ಸೌಲಭ್ಯಗಳನ್ನು ದಿನಕ್ಕೆ ೧೦೦ರವರೆಗೆ ಜನರು ಉಪಯೋಗ ಪಡುತ್ತಿದ್ದಾರೆ. ಉಳ್ಳವರಿಗಾಗಿ ರಿಯಾಯಿತಿ ದರದ ಚಿಕಿತ್ಸೆಗಳೂ ಲಭ್ಯ. ಈ ಸ್ವಾಸ್ಥ್ಯ ಮಂದಿರಕ್ಕೂ ತಜ್ಞ ವೈದ್ಯರುಗಳು ವಾರಕ್ಕೆ, ತಿಂಗಳಿಗೊಮ್ಮೆ ಸಂದರ್ಶನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಈ ಸೇವಾ ಸೌಲಭ್ಯ ಇಡೀ ಊರಿಗೇ ಒಂದು ಆದರ್ಶಪ್ರಾಯ ಸೇವೆಯೆಂದು ಗುರುತಿಸಲ್ಪಟ್ಟಿದೆ.

Facebook Comments Box