ಹರೇ ರಾಮ..
ಭಾರತದ ಸಂಸ್ಕೃತಿಯನ್ನು ಜಗತ್ತಿಗೆ, ಅದರಲ್ಲೂ ಭಾರತೀಯರಿಗೆ ಸಾರಿ ಹೇಳಿದ ಆಚಾರ್ಯ ತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು.
ಅಲ್ಪಾವಧಿಯಲ್ಲಿಯೇ ದೇಶದ ಮೂಲೆ ಮೂಲೆಗಳಿಗೆ ಸಂಚರಿಸಿ “ಅದ್ವೈತ” ತತ್ವವನ್ನು ಪ್ರತಿಪಾದಿಸುತ್ತ ಜಗತ್ತಿಗೆ ಸಾರಿ, ಹಲವಾರು ಮತಗಳಿಂದ ದಾಳಿಗೊಳಗಾಗುತ್ತಿದ್ದ ಸನಾತನ ಹಿಂದೂ ಧರ್ಮವನ್ನು ಪುನರುತ್ಥಾನಗೊಳಿಸಿದರು. ಭಾರತದಲ್ಲಿ ಪುನಃಚೈತನ್ಯವನ್ನು ತುಂಬಿದರು.
ಸೂರ್ಯ, ಗಣಪತಿ, ದುರ್ಗಾ, ಶಿವ, ವಿಷ್ಣು – ಮತಗಳನ್ನು ಒಗ್ಗೂಡಿಸಿ ಪಂಚಾಯತನ ಪದ್ದತಿಯ ಪ್ರತಿಷ್ಠಾಪಕರಾದರು. ಭಗವದ್-ಗೀತೆ,ಉಪನಿಶತ್ ಹಾಗು ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದು ಅಂದಿನ ಜನರಿಗೆ ನಮ್ಮತನವನ್ನು ತಲುಪಿಸಿದರು.
ನಮ್ಮ ಗುರುಗಳನ್ನು ನೋಡುವಾಗ ಮತ್ತು ಅವರು ಮಾಡುತ್ತಿರುವ ಪ್ರತಿಯೊಂದು ಕಾರ್ಯದ ಅಭಿವೃದ್ಧಿಯ ಪಥವನ್ನು ಗಮನಿಸುವಾಗ ಇಂತಹ ಆದಿಶಂಕರರೇ ಪುನಃ ಅವತಾರವೆತ್ತಿ ಬಂದಂತೆ ನಮಗೆ ಅನಿಸುತ್ತಿದೆ. ಭಾರತದ ಉದ್ದಗಲಕ್ಕೆ ಪ್ರಯಾಣಿಸಿ ಭಾರತೀಯತೆಯನ್ನು ಸಾರಿದರು. ಗೋವಿನ ಮೂಲಕ ನಮ್ಮ ಅಭಿವೃದ್ಧಿಯನ್ನು ರೈತರಿಗೆ ಮನಗಾಣಿಸಲು, ಜನರಲ್ಲಿ ಪುನಃಶ್ಚೇತನವನ್ನು ತುಂಬಿದರು.
ನಮ್ಮ ಪ್ರಧಾನ ಮಠವಾದ “ಹೊಸನಗರ” ಎಂಬ ಊರನ್ನು ವಿಶ್ವ ಗೋ ಸಮ್ಮೇಳನದ ಮೂಲಕ ಭೂಪಟದಲ್ಲಿ ಗುರುತಿಸುವಂತೆ ಮಾಡಿದವರು..
ಸಂಸ್ಕಾರವೆಂಬುದು ಜನ್ಮದಾರಭ್ಯ ಬಂದಿರುವಂತಹುದು. ಧರ್ಮವೆಂಬುದು ಬೆಳವಣಿಗೆಯ ಹಂತದಲ್ಲಿ ಬಂದಿರುವುದು. ಸಂಸ್ಕಾರ – ಧರ್ಮ ಎರಡನ್ನೂ ಮಿಳಿತಗೊಳಿಸಿ ಬದುಕುವುದೇ ಸನಾತನತೆ. ಆ ಸನಾತನತೆಯ ಶ್ರೇಷ್ಟತೆಯನ್ನು ಅರಿಯಬೇಕಾದರೆ ನಮ್ಮತನದ ಬಗೆಗೆ ಹೆಮ್ಮೆಯಿರಬೇಕು. ನಮ್ಮ ಆಚಾರ ವಿಚಾರಗಳ ಬಗೆಗೆ ಗರ್ವವಿರಬೇಕು. ಭಾರತವು ನಮ್ಮದೆಂಬ ಅಭಿಮಾನವಿರಬೇಕು. ನಮ್ಮಲ್ಲಿ ಆ ಅಭಿಮಾನವೇ ಇಲ್ಲವೆಂದಾದಲ್ಲಿ?
ನಮ್ಮ ಆಧ್ಯಾತ್ಮಿಕ, ಧಾರ್ಮಿಕ, ರಾಜಕೀಯ ನಾಯಕರು ನಮ್ಮನ್ನು ಮತ್ತೊಮ್ಮೆ ಪುಟಿದೇಳಿಸುವ ಕಾರ್ಯ ಮಾಡಬೇಕು.
ಅಂತಹ ಅದಮ್ಯ ಕಾರ್ಯವನ್ನು ನಮ್ಮ ಶ್ರೀಗಳು ಮಾಡುತ್ತಿದ್ದಾರೆ.
ಧರ್ಮರಕ್ಷಣೆಗಾಗಿ ಆತ್ಮಲಿಂಗ ಇರುವಂತಹ ಗೋಕರ್ಣದ ಪುನರುತ್ಥಾನ ಕಾರ್ಯವನ್ನು ಮಾಡುತ್ತಿದ್ದಾರೆ.
ನಮ್ಮ ಮುಂದಿನ ಎಷ್ಟೋ ಸಹಸ್ರ ತಲೆಮಾರುಗಳ ಕಾಲ ನೆನಪಿಟ್ಟುಕೊಳ್ಳಬಹುದಾದ ಕಾರ್ಯವಿದು. ಧರ್ಮಕ್ಷೇತ್ರವೊಂದರಲ್ಲಿ ಧರ್ಮದ ನೆಲೆ-ಸ್ಥಾಪನೆಗಾಗಿ ನಮ್ಮ ಗುರುಗಳು ಪಡುತ್ತಿರುವ ಶ್ರಮ ಬೆಳಗಲಿ. ನಮಗೆಲ್ಲ ದಾರಿದೀಪವಾಗಲಿ.
ಸಂತವಾಣಿಯಂತೆ,
ಗಂಗೆಯಿದ್ದರೆ ತುಂಗೆಯಿದ್ದರೆ ಗಿರಿಹಿಮಾಲಯವಿದ್ದರೆ…
ಏನುಸಾರ್ಥಕ ಮನೆಯ ಮಕ್ಕಳು ಮಲಗಿ ನಿದ್ರಿಸುತಿದ್ದರೆ!!
– ಇಂತಹ ಜಡ ಯುವಜನತೆಯನ್ನು ಎಬ್ಬಿಸಲು ಗುರುಗಳು ಸತತ ಶ್ರಮವನ್ನು ವಹಿಸುತ್ತಿದ್ದಾರೆ.
ಗೋವುಗಳಿಂದಾಗಿ ಗೋಕರ್ಣ ಇನ್ನೂ ಸಮೃದ್ಧವಾಗಬೇಕು, ಆ ಮೂಲಕ ಸಾಮಾಜಿಕ, ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕೆಂಬುದು ನಮ್ಮ ಗುರುಗಳ ಆಶಯ…
ನಾವು ಗೋವುಗಳನ್ನು ಸಾಕುತ್ತೇವೆ ಎಂಬುದು ಸುಳ್ಳು. ಗೋವುಗಳು ನಮ್ಮನ್ನು ಸಾಕುತ್ತವೆ ಎಂಬ ಸತ್ಯವನ್ನು ಸಮಾಜಕ್ಕೆ ತೋರಿಸಿ ಕೊಟ್ಟವರು….
ಗೋವು ನೀಡುವ ಮೂತ್ರ, ಗೋಮಯ ಸಂಗ್ರಹ ದಿಂದ ಗೋವು ಉದ್ಯಮ ಬೆಳೆದು ಬಡವರು ಹಾಗೂ ರೈತರಿಗೆ ಉದ್ಯೋಗಾವಕಾಶ ನೀಡುವುದಕ್ಕಾಗಿ ಪಣ ತೊಟ್ಟವರು..ಗುರುಗಳು ತೋರಿಸಿದ ಈ ಜ್ಯೋತಿಯ ಬೆಳಕಲ್ಲಿ ನಾವು ಮುನ್ನಡೆಯೋಣವೇ??
ಶ್ರೀ ಗುರುಗಳ ಮಾರ್ಗದರ್ಶನದಲ್ಲಿ ಮುನ್ನಡೆದು ಸುಂದರ ಸಮಾಜವನ್ನು ಕಟ್ಟೋಣ
ಹರೇ ರಾಮ..
—
ಗಣೇಶ ಭಟ್ ಮಾಡಾವು
9448254469
pgbhat26@gmail.com
ವ್ಯಕ್ತಿಪರಿಚಯ:
ಪಿ.ಗಣೇಶ ಭಟ್, ಮಾಡಾವು.
ಚಿ| ಗಣೇಶ ಭಟ್ಟರು ಪುತ್ತೂರು ತಾಲೂಕಿನ ಮಾಡಾವಿನವರು. ಮಾಡಾವಿನ ಪ್ರಸಿದ್ಧ ಜ್ಯೋತಿಷಿ ಶ್ರೀಯುತ ಶ್ರೀ ವೆಂಕಟರಮಣ ಭಟ್ಟರ ಸುಪುತ್ರರಾದ ಇವರು ಬಾಲ್ಯದಿಂದಲೇ ವೇದಾಧ್ಯಯನದಲ್ಲಿ ತಮ್ಮನ್ನು
ತೊಡಗಿಸಿಕೊಂಡಿದ್ದಾರೆ. ಕೃಷ್ಣ ಯಜುರ್ವೇದ ಅಧ್ಯಯನದ ನಂತರ ಪ್ರಯೋಗ ಶಾಸ್ತ್ರ, ಜ್ಯೋತಿಷ್ಯ ಇತ್ಯಾದಿ ವಿಚಾರಗಳಲ್ಲಿ ಅಧ್ಯಯನವನ್ನು ಮುಂದುವರಿಸಿದರು. ಸ್ನಾತಕೋತ್ತರ ಪದವಿಯನ್ನು ಸಾಮಾಜಿಕ ವಿಜ್ಞಾನ ವಿಶಯದಲ್ಲಿ ಪಡೆದ ಇವರು ಆಧುನಿಕ ಇಂಟರ್ನೆಟ್ ಬ್ಲಾಗ್ ಯುಗದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕೈಲಾಸ ಯಾತ್ರೆಯ ಮನೋಹರ ಅನುಭವಗಳನ್ನು ತಮ್ಮ ಬ್ಲಾಗ್ ನಲ್ಲಿ (http://aaptamitra.blogspot.com) ವಿವರಿಸುತ್ತಾರೆ. ಶ್ರೀಯುತರು ಶ್ರೀಮಠದ ಅನೇಕ ಕಾರ್ಯಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಗಣೇಶ ಭಟ್ಟರ ಮುಂದಿನ ಬಾಳು ಸುಖಮಯವಾಗಿರಲೆಂದು, ಶ್ರೀಗುರುಗಳ, ಶ್ರೀರಾಮನ ಅನುಗ್ರಹವಿರಲೆಂದು ಹಾರಯಿಕೆ.
~
ಸಂಪಾದಕ ಬಳಗಮಿಂಚಂಚ: Editor@HareRaama.in
July 13, 2010 at 5:19 PM
ಶ್ರೀಗಳ೦ತವರ ಕೆಲವರಿ೦ದ ಭಾರತ ಮತ್ತೆ ಮತ್ತೆ ಕ೦ಗೊಳಿಸುತ್ತದೆ, ಅವರು ನೀರೆರುವುದರಿ೦ದ ಮತ್ತೆ ಮತ್ತೆ ಫಲ ಕಾಣಿಸುತ್ತದೆ. ವ್ಯಕ್ತಿ ನಿರ್ಮಾಣದಿ೦ದ ಆಗುವಷ್ಟು ಪರಿಣಾಮ ಬೇರೆ ಯಾವುದೆ ಕಾರ್ಯದಿ೦ದ ಆಗದು. ಭಾರತ ರತ್ನಗಳು ಪ್ರಜ್ವಲಿಸಲಿ.
July 13, 2010 at 5:23 PM
—————————————————
“ಸಂತವಾಣಿಯಂತೆ,
ಗಂಗೆಯುದ್ದರೆ ತುಂಗೆಯಿದ್ದರೆ ಗಿರಿಹಿಮಾಲಯವಿದ್ದರೆ…
ಏನುಸಾರ್ಥಕ ಮನೆಯ ಮಕ್ಕಳು ಮಲಗಿ ನಿದ್ರಿಸುತಿದ್ದರೆ!!
– ಇಂತಹ ಜಡ ಯುವಜನತೆಯನ್ನು ಎಬ್ಬಿಸಲು ಗುರುಗಳು ಸತತ ಶ್ರಮವನ್ನು ವಹಿಸುತ್ತಿದ್ದಾರೆ”
—————————————————
July 13, 2010 at 5:26 PM
ಸಮ್ಮುಖ ಸ೦ತಸ ತ೦ದಿದೆ. ಕಿಚ್ಚನ್ನು ಹಚ್ಚಲಿ, ಹೆಮ್ಮರವಾಗಿ ಬೆಳೆಯಲಿ – ಗಾಳಿಮಳೆಗೆ ಬೀಳದೆ, ಗ೦ಧಗಾಳಿ ಸದಾ ಹೊಮ್ಮಿಸುತ್ತಿರಲಿ.
July 13, 2010 at 6:26 PM
ಉತ್ತಮ ಬರಹ. ಆಪ್ತಮಿತ್ರವೂ ಬಹಳಷ್ಟು ಆತ್ಮೀಯವಾಗಿದೆ. ಗುರು ತೋರಿದ ದಾರಿಯಲ್ಲಿ ನಡೆದು ಸನ್ಮಾರ್ಗಿಗಳಾಗೋಣ…
July 14, 2010 at 2:17 PM
ಚೆನ್ನಾಗಿದೆ ಉತ್ತಮ ಬರಹ.- ಅಭಿನಂದನೆಗಳು
July 14, 2010 at 5:17 PM
ಧರ್ಮ, ಸಂಸ್ಕಾರಗಳ ಅಗತ್ಯತೆಯ ಕುರಿತಾಗಿ ಪ್ರಸ್ತಾಪಿಸುತ್ತಾ ಶ್ರೀಗಳ ಕಾರ್ಯಗಳೆಡೆಗೆ ಹೊಸನೋಟವೊಂದನ್ನು ನೀಡಿದ್ದೀರಿ.
ಉತ್ತಮ ಲೇಖನಕ್ಕಾಗಿ ಧನ್ಯವಾದಗಳು…
July 15, 2010 at 9:39 AM
ತುಂಬಾ ಚೆನ್ನಾಗಿ ಬರೆದಿದ್ದೀರ
July 15, 2010 at 11:24 AM
ಹಲವಾರು ವಿಷಯ – ವಿಚಾರಗಳನ್ನು ಪೋಣಿಸಿದ ಪರಿ ಸೊಗಸಾಗಿದೆ. ಲೇಖನ ಗ೦ಭೀರವಾಗಿದೆ.
ಮೊಹನ ಭಾಸ್ಕರ ಹೆಗಡೆ
July 15, 2010 at 12:53 PM
ಲೇಖನ ಚನ್ನಾಗಿದೆ.
ಹೀಗೋಂದು ಮಾತಿದೆ “ತಮಗೋಸ್ಕರ ಯಾರು ಬದುಕುತ್ತಾರೋ ಅವರನ್ನು ಈ ಸಮಾಜ ಎಂದೂ ನೆನಪಿಟ್ಟುಕೊಳ್ಳುವುದಿಲ್ಲ, ಇತರರಿಗೋಸ್ಕರ ಯಾರು ಬದುಕುತ್ತಾರೋ ಅವರನ್ನು ಈ ಸಮಾಜ ಎಂದೂ ಮರೆಯುವುದಿಲ್ಲ”
ಈ ರೀತಿ ಸಮಾಜ, ಧರ್ಮ, ಸಂಸ್ಕೃತಿಗಳ ಬಗ್ಗೆ ಅಪಾರ ಕಾಳಜಿ ಇರುವುದರಿಂದಲೇ ಶ್ರೀಗಳ ಬಗ್ಗೆ ದೇಶದೆಲ್ಲೆಡೆ ಅಪಾರ ಶ್ರದ್ಧೆ, ಗೌರವಗಳಿವೆ.
ಶ್ರೀಗಳ ಮಾರ್ಗದರ್ಶನಕ್ಕಾಗಿ ಸಮಾಜದ ಜನರು ಎದುರುನೋಡುತ್ತಿದ್ದಾರೆ. ಗುರುಗಳ ಕಳಕಳಿಗೆ ತಕ್ಕಂತೆ ಸಮಾಜದ ಪ್ರತಿಯೋಬ್ಬನೂ ಸಮಾಜಮುಖಿಯಾದ ಕೆಲಸಗಳನ್ನು ಮಾಡಿದರೆ, ಆ ದಿಕ್ಕಿನತ್ತ ಕಾರ್ಯಪ್ರವರ್ತರಾದರೆ, ಗುರುಗಳು ಪಡುತ್ತಿರುವ ಶ್ರಮಕ್ಕೆ ಸಾರ್ಥಕತೆ ಲಭಿಸಿದಂತಾಗುತ್ತದೆ.
July 15, 2010 at 1:15 PM
ಅದ್ಭುತ
July 15, 2010 at 2:52 PM
ಆಶ್ಚರ್ಯಗೊಳಿಸುತಿತ್ತು, ನಾವು ಲೈಬ್ರರಿಗೆ ಹೋಗುತಿದ್ದಾಗ, ಕಥೆ ಕಾದ೦ಬರಿ ಬಿಟ್ಟರೆ, ಮಹಾನ್ ಸಾಧಕರ – ಸಮಾಜ ಸುಧಾರಕರ ಪುಸ್ತಕಗಳಷ್ಟೆ ದೊರುಯುತಿತ್ತು. ಯಾವ ಶ್ರೀಮ೦ತರ, ಅವರ ಹಣ ಆಸ್ತಿ ವಿವರಗಳ ಪುಸ್ತಕಗಳು ಒ೦ರೂ ಇರಲಿಲ್ಲ. ಜಗತ್ತು ಪೂರ್ಣ ಕೆಟ್ಟಿಲ್ಲ, ಪೂರ್ಣ ಕೆಡುವುದೂ ಇಲ್ಲ. ಹೊರಗೆ ವರ್ಣ ವರ್ಣದ ಸುಖದ ಸುಪತ್ತಿಗೆಯ ಲೋಕವೇ ಇದ್ದರು, ಒಳಗೆ/ಕೊನೆಗೆ ಎಲ್ಲರೂ ಬಯಸುವುದು ಚಿರಶಾ೦ತಿಯನ್ನೆ ನೆಮ್ಮದಿಯನ್ನೆ ನಿಶ್ಯಬ್ದದೊಳಿರುವ ಶಾ೦ತಸದ್ದನ್ನೆ?
July 15, 2010 at 9:15 PM
ನಮ್ಮ ದೇಶದ ಮಣ್ಣಿನ ಗುಣವೇ ಅಂತಹದ್ದು. ಜಗತ್ತಿಗೆ ಈ ದೇಶ ಸರ್ವ ಜನಾಂಗಕ್ಕೂ ಮೇಲ್ಪಂಕ್ತಿಯಾಗುವಂತಹ ಸಂತ, ಮಹಾಂತರನ್ನೇ ಪರಿಚಯಿಸುತ್ತಾ ಬಂದಿದೆ. ಅದೇ ಪರಂಪರೆ ಮುಂದುವರಿಯುತ್ತಿದೆ ಎಂಬುದರ ಅರಿವು ಶ್ರೀಗಳು ತೋರಿಸುತ್ತಿರುವ ಮಾರ್ಗ ಮತ್ತು ಬೇರೆ ಬೇರೆ ಆಯಾಮಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ಪಷ್ಟವಾಗಿ ಕಾಣುತ್ತದೆ.
ಈ ನೆಲದ ಮೇಲೆ ಅನೇಕ ದುಷ್ಟ ಶಕ್ತಿಗಳ ಆಕ್ರಮಣಗಳಾಗಿವೆ. ಅವುಗಳೆಲ್ಲವನ್ನೂ ಎದುರಿಸಿ ಈ ನಾಡು ತಲೆ ಎತ್ತಿ ನಿಂತಿರುವುದು ಶ್ರೀಗಳಂತಹ ಸಮಾಜಮುಖಿಯಾಗಿ ಚಿಂತನೆ ಮಾಡುವ ವ್ಯಕ್ತಿಗಳಿದ್ದ ಕಾರಣದಿಂದಾಗಿಯೇ.
ಹಾಗೆ ನೋಡಿದರೆ ಆಂಗ್ಲರು ನಮ್ಮ ನೆಲದಲ್ಲಿ ಸ್ವಾರ್ಥದ ವಿಷ ಬೀಜವನ್ನು ಬಿತ್ತಿ ಸ್ವಲ್ಪ ಮಟ್ಟಿಗೆ ಯಶಸ್ಸನ್ನು ಕಂಡರೂ ಅದು ಬಹುಕಾಲ ಉಳಿಯಲಿಲ್ಲ. ಏಕೆಂದರೆ ನಮ್ಮ ನಾಡಿನಲ್ಲಿ ಶ್ರೀಗಳ ಹಾಗೆ ಅನೇಕ ಹಿರಿಯರ ಪರಿಶ್ರಮ, ಸಮಾಜದ ಬಗೆಗಿನ ತುಡಿತ, ಕಳಕಳಿ ಇವುಗಳು ಕಣ್ಣಿಗೆ ಕಾಣದ ಶಕ್ತಿಯ ರೂಪದಲ್ಲಿ ನಿರಂತರ ಈ ನಾಡಿನಲ್ಲಿ, ಸಮಾಜದಲ್ಲಿ ಆಶೀರ್ವಾದದ ರೂಪದಲ್ಲಿ ಇರುವುದರಿಂದಲೇ ನಮ್ಮ ಧರ್ಮ, ಸಂಸ್ಕೃತಿಗಳು ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಸಾಗುತ್ತಿರುತ್ತವೆ.
July 16, 2010 at 7:13 PM
ಹರೇ ರಾಮ.
ನೂರಕ್ಕೆ ನೂರು ಸತ್ಯದ ಮಾತು.
July 15, 2010 at 2:48 PM
ಭಾರತವನ್ನು ಕಟ್ಟಿದ ಇಬ್ಬರು ಶಂಕರರನ್ನು ಬಳಸಿದ ಉತ್ತಮ ಬರಹ.
ಅಂದಿನ ಶಂಕರಾಚಾರ್ಯರು ಸರಳ ಶ್ಲೋಕಗಳ ಮೂಲಕ ಸಾಮಾನ್ಯ ಜನರನ್ನು ತಲುಪಿದರು..
ಇಂದಿನ ಶಂಕರರು ಸರಳ ಮಾತುಗಳ ಮೂಲಕ ಜನರ ಹೃದಯ ತಟ್ಟಿದರು..
ಹರೇರಾಮ.
July 17, 2010 at 1:00 PM
ಐತಿಹಾಸಿಕ ಹಿನ್ನೆಲೆಯೊಂದಿಗೆ ಶ್ರೀಗುರುಗಳ ಸದಾಶಯಗಳನ್ನು ಸಹಪಾಠಿಗಳಿಗೆ ತಲಪಿಸುವ ಸತ್ಪ್ರಯತ್ನ – ಚಿಕ್ಕದಾಗಿ ಚೊಕ್ಕದ್ದಾಗಿದೆ.
ಆದಿಶಂಕರರು ಪ್ರೌಢ ಕೃತಿಗಳಲ್ಲದೆ ನೂರಾರು ಸುಂದರ ಜನಪ್ರಿಯ ಸ್ತೋತ್ರಗಳನ್ನೂ ರಚಿಸಿ ಜನಮಾನಸದಲ್ಲಿ ಇಂದಿಗೂ ಅಚ್ಚಳಿಯದೆ ಉಳಿದಿದ್ದು ಅತ್ಯುತ್ತಮ ಕವಿಗಳೂ ಆಗಿದ್ದರೆಂಬುದು ಗಮನಿಸಬೇಕಾದಸಂಗತಿಯೇ…
July 22, 2010 at 11:47 PM
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
August 10, 2010 at 9:37 AM
ಪ್ರತಿಕ್ರಿಯೆ ನೀಡಿ ಲೇಖನಕ್ಕೆ ಪುಷ್ಟಿ ನೀಡಿದ ಎಲ್ಲರಿಗೂ ಅಭಿನಂದನೆಗಳು.ಹರೇ ರಾಮ.
October 9, 2010 at 9:10 PM
🙂