ಶ್ರೀರಾಮಚಂದ್ರಾಪುರ ಮಠದ ಶ್ರೀಭಾರತೀಪ್ರಕಾಶನದ ಹೊಸ ಪುಷ್ಪಗಳ ಲೋಕಾರ್ಪಣೆಯು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಾಶ್ರಮದಲ್ಲಿ ದಿನಾಂಕ 05-01-2014ರಂದು ನಡೆಯಿತು.
ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿವ್ಯಸಾನ್ನಿಧ್ಯ ವಹಿಸಿ ಲೋಕಾರ್ಪಣೆಯನ್ನು ನಡೆಸಿಕೊಟ್ಟರು. ನಿವೃತ್ತ ಐ.ಜಿ.ಪಿ. ಹಾಗೂ ಪ್ರಸಕ್ತ ಲೋಕಾಯುಕ್ತ ನಿರ್ದೇಶಕ ಶ್ರೀ ಡಿ ಎನ್ ಮುನಿಕೃಷ್ಣ, ಐಪಿಎಸ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಲೋಕಾರ್ಪಣೆಗೊಂಡ ಪುಸ್ತಕಗಳು:
1. ಗುರುವಿನ ಗರಿಮೆ – ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಲೇಖನಗಳ ಸಂಕಲನ
2. ಸಂತರ ಸಂತ – ಮಹಾನಂದಿ ನಾಟಕ – ಲೇಖಕರು: ಡಾ. ಗಜಾನನ ಶರ್ಮರು
3. ಗೋ ಯಕ್ಷ ವೈಭವ – ಯ ಕ್ಷಗಾನ ಲೇಖಕರು: ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ
ಲೋಕಾರ್ಪಣೆಗೊಂಡ ಸಿ ಡಿ ಗಳು:
1. ಭಜಗೋವಿಂದಮ್ – ಹಾಡಿದವರು: ಚಂದ್ರಶೇಖರ ಕೆದಿಲಾಯ
2. ಗುಲ್ಬರ್ಗದಲ್ಲಿ ನಡೆದ ರಾಮಕಥೆ – ರಾಮ ಜನ್ಮ
3. ಕೈರಂಗಳದಲ್ಲಿ ನಡೆದ ರಾಮಕಥೆ – ಸುಂದರ ಕಾಂಡ
4. ಕಾಂಚನದಲ್ಲಿ ನಡೆದ ರಾಮಕಥೆ – ಸಮರ ಸನ್ನಾಹ
ಕಾರ್ಯಕ್ರಮದಲ್ಲಿ ಲೇಖಕರಾದ ಡಾ. ಗಜಾನನ ಶರ್ಮ, ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ, ಶ್ರೀಭಾರತೀಪ್ರಕಾಶನದ ವಿದ್ವಾನ್ ಜಗದೀಶ ಶರ್ಮ, ಹಾಗೂ ಶ್ರೀಮಠದ ಪದಾಧಿಕಾರಿಗಳು ಭಾಗವಹಿಸಿದ್ದರು.
January 6, 2014 at 4:29 PM
Hare Raama
I was there
January 6, 2014 at 8:28 PM
hareraama