ಹೇಗೆ ನೋಡಿದರೂ ಇದೊಂದು ವಿಶ್ವದಾಖಲೆಯೇ. ಬಹುಶಃ ಒಂದು ನಿರ್ದಿಷ್ಟ ವಿಷಯದ ಮೇಲೆ ಬರೋಬ್ಬರಿ ಎಂಟು ಕೋಟಿ ಸಹಿ ಸಂಗ್ರಹಿಸಿರುವುದು, ಅದೂ ಕೇವಲ ಮೂರು ತಿಂಗಳ ಅವಧಿಯಲ್ಲಿ ಇಡೀ ಭಾರತ ಪರ್ಯಟನೆ ಕೈಗೊಂಡು ಇಂಥ ಸಾಧನೆಯನ್ನು ಮಾಡಿದ್ದು ಭಾರತೀಯ ಸಂತಸಮೂಹಕ್ಕೆ ಮಾತ್ರವಲ್ಲ, ಪ್ರತೀ ಭಾರತೀಯನಿಗೂ ಹೆಮ್ಮೆಯ ಸಂಗತಿ.
ಅಬ್ಬಾ, ಆ ವ್ಯಕ್ತಿಯ…ಅಲ್ಲ ಶಕ್ತಿಯ ಕರ್ತೃತ್ವಪರತೆಯೇ !
ಹೌದು, ಶ್ರೀ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಇವತ್ತು ಕೇವಲ ಒಂದು ಪ್ರದೇಶಕ್ಕೆ, ಯಾವುದೇ ಒಂದು ಜನಾಂಗಕ್ಕೆ ಸೀಮಿತವಾಗುಳಿದಿಲ್ಲ. ಅಕ್ಷರಶಃ ಅವರಿಂದು ವಿಶ್ವ ಮಾನವ. ಇಡೀ ಮನುಕುಲಕ್ಕೆ ಸೇರಿದವರು. ದೇಸೀ ಗೋತಳಿಗಳ ಸಂರಕ್ಷಣೆಗೆ ತಮ್ಮ ಇಡೀ ಜೀವಿತಾವಧಿಯನ್ನೇ ಮುಡಿಪಾಗಿಟ್ಟ, ಅದಕ್ಕಾಗಿ ಅತ್ಯಲ್ಪ ಅವಧಿಯಲ್ಲಿ ಇಡೀ ವಿಶ್ವವೇ ಬೆರಗಾಗುವಂಥ ಆಂದೋಲನವನ್ನು ರೂಪಿಸಿದ, ಆ ಮೂಲಕ ಭಾವ ಜಾಗರಣದ ಹೊಂಗಿರಣ ಮೂಡುವಂತೆ ಮಾಡಿದ ಅವರಂಥ ಇನ್ನೊಬ್ಬ ಸಂತರನ್ನು ನಾನು ಕಂಡಿಲ್ಲ.
A little girl wanted to meet God. She knew it was a long trip, So she packed her suitcase with Twinkies and a six -pack of root beer and started her journey. When she had gone about three blocks, she… Continue Reading →
‘ಹರ ತನ್ನೊಳಿರ್ದುಂ ಗುರು ತೋರದೇ ತಿಳಿವುದೇ?’ ಎನ್ನುತ್ತಾನೆ ಸರ್ವಜ್ಞ.
ನಮ್ಮೊಳಗೇ ಇರುವ ಭಗವಂತನನ್ನು ಗುರು ತೋರಿಸಿಕೊಡದೇ ಇದ್ದರೆ ನಮಗದು ತಿಳಿಯುವುದಿಲ್ಲ.
ಸಾವಿರ ವರ್ಷಗಳ ಹಿಂದಿನ ಈ ಮಾತಿನ ಅರ್ಥವ್ಯಾಪ್ತಿ ಹಿಂದೆಂದಿಗಿಂತ ಹೆಚ್ಚು ಇಂದು ವಿಸ್ತೃತ! ಅಂದಿನ ಜನಗಳಿಗಾದರೋ ಭಗವಂತನನ್ನು ತೋರಿಸಲು ಮಾರ್ಗದರ್ಶನ ಬೇಕಾಗಿತ್ತು. ಆದರೆ ಇಂದು, ಸ್ವಕೇಂದ್ರೀಕೃತ ಜೀವನಶೈಲಿಯ ಕಾರಣದಿಂದಾಗಿ, ಭಗವಂತನಿರಲಿ, ಕಣ್ಣೆದುರು ಕಾಣುವ ಯಾವ ಉದಾತ್ತವಾದುದನ್ನೂ ನಾವು ಗುರುತಿಸಲು ತಿಳಿದಿಲ್ಲ! ಮಹತ್ತಾದುದನ್ನು ಕಂಡು ಅದನ್ನು ಭಾವಿಸುವ, ಮಾನಿಸುವ ಸೂಕ್ಷ್ಮಪ್ರಜ್ಞೆಯೊಂದನ್ನು ನಾವು ಕಳೆದುಕೊಂಡುಬಿಟ್ಟಿದ್ದೇವೆ. ಮಹಾತ್ಮರು, ಅವರ ಮಹತ್ಕಾರ್ಯಗಳು ಅದೆಷ್ಟೋ ಬಾರಿ ನಮ್ಮ ಶುಷ್ಕಬುದ್ದಿಗೆ, ಕುತಾರ್ಕಿಕ ಮನಸ್ಸಿಗೆ, ದೋಷೈಕಗ್ರಾಹಿ ದೃಷ್ಟಿಗೆ ಹಿರಿದೆನಿಸದೇ ಅವುಗಳ ನೈಜ ಉಪಯೋಗಗಳನ್ನು ಪಡೆಯದಿರುವಂತಾಗಿದೆ. ಹೀಗಾಗಿ ಬೇಕು ಇದು ದೊಡ್ಡದೆಂದು ಸಮಾಜಕ್ಕೆ ತೋರಬಲ್ಲ ಮುಖಂಡರು. ಹಿರಿದಾದನ್ನು ಇನ್ನಷ್ಟು ಸ್ಪುಟವಾಗಿ ಕಾಣುವಂತೆ ಮಾಡುವ ದೃಷ್ಟಿಯೊಂದನ್ನು ಸಮಷ್ಟಿಗೆ ನೀಡುವ ’ಪ್ರಮುಖರು’.
ಶ್ರೀ ರಾಮನ ಅನುಪಮ ಉಪಾಸನೆಯ ಮತ್ತೊಂದು ಸಂಭ್ರಮದ ಮಹೋತ್ಸವದ ಸಡಗರಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ನೀಡಲಾಯಿತು..
ಈ ಬಾರಿ ಮಾ.೨೨ ರಿಂದ ಮಾ ೨೫ ರವರೆಗೆ ೪ ದಿನಗಳಕಾಲ ನಡೆಯಲಿರುವ ” ಶ್ರೀರಾಮೋತ್ಸವ ” ಆಚರಣೆಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಗಳವರು ಚಾಲನೆ ನೀಡಿದರು..
ಸಂಜೆ ೦೬.೩೦ ರಿಂದ ಡೊಳ್ಳು ಚಕ್ರವರ್ತಿ ತವಿಲ್ ಮಂತ್ರಾಲಯ ಆಸ್ಥಾನ ವಿದ್ವಾನ್ ಡಾ| ಎ. ಆರ್. ಮುನಿರತ್ನಂ ಮತ್ತು ಸಂಗಡಿಗರಿಂದ ಮಂಗಳವಾದ್ಯ ಕಛೇರಿ ನೆರವೇರಿತು..
ಇತ್ತ…
ಕಡಲ ಒಡಲಲ್ಲಿ ಬಾಯ್ದೆರೆದು ಕಾಯುವುದು ಕಪ್ಪೆ ಚಿಪ್ಪು ಸ್ವಾತಿ ಮಳೆ ಹನಿಯನ್ನು…
ಅತ್ತ…
ಮೋಡದ ಮಡಿಲಿನಿಂದ ಧರೆಗೆ ಧುಮ್ಮಿಕ್ಕುವ ಸ್ವಾತಿ ಮಳೆ ಹನಿ ಹುಡುಕಿಯೇ ಹುಡುಕುವುದು ತನಗಾಗಿ ಮಿಡುಕುವ ಕಪ್ಪೆಚಿಪ್ಪನ್ನು …
ಸ್ವಾತಿಯದಲ್ಲದೆ ಬೇರಾವ ಮಳೆಹನಿ ಕಪ್ಪೆ ಚಿಪ್ಪಿನೊಳ ಹೊಕ್ಕರೂ ಅದು ಕೇವಲ ನೀರು… ನೀರು…
ಸ್ವಾತಿ ಮಳೆಹನಿಯೇ ಆದರೂ ಕಪ್ಪೆ ಚಿಪ್ಪೊಳಗಲ್ಲದೆ ಬೇರೆಲ್ಲಿ ಬಿದ್ದರೂ ಅದು ಕೇವಲ ನೀರು … ನೀರು…
ಕಪ್ಪೆಚಿಪ್ಪಿನ ಹೃದಯಗರ್ಭದೊಳಸೇರಬೇಕು ಸ್ವಾತಿಯ ಜಲಬಿಂದು..
ಅದು ಮುತ್ತಿನ ಅವತಾರ…
ಸ್ವಾತಿ ಮಳೆ ಹನಿಗೆ ಆಗುವುದು ಮುತ್ತಾಗಿ ಪುನರ್ಜನ್ಮ…
ಕಪ್ಪೆ ಚಿಪ್ಪಿನೊಳ ಚೈತನ್ಯದ ಸಂಚಾರ…
ಇದನ್ನು ಹೋಲುವ ಅಪೂರ್ವ ಸಮಾಗಮವೊಂದರ ಫಲವಾಗಿಯೇ ರಾಮಾಯಣವೆಂಬ ಮುತ್ತು ಹುಟ್ಟಿತು…!!
ಕಪ್ಪೆಚಿಪ್ಪಿನ ತೆರದಿ ತೆರೆದ ಮನ ಹೊತ್ತ ವಾಲ್ಮೀಕಿ ಧರೆಯಲ್ಲಿ ಧೀರ್ಘ ಪ್ರತೀಕ್ಷೆಯಲ್ಲಿ ಇರುವಾಗ…
ಸ್ವಾತಿಯ ಸಲಿಲಧಾರೆಯಂತೆ ಮೋಡದ ನಾಡಿನಿಂದ ಇಳಿದು ಬಂದರು ನಾರದರು..!
ಮೊಟ್ಟಮೊದಲಬಾರಿಗೆ ಗಟ್ಟಿ ಗಟ್ಟಿ ಅಕ್ಕಿಯಿಂದ ಮೃದು – ಮೃದುವಾದ, ಮಧುರ – ಮಧುರವಾದ, ರುಚಿ – ರುಚಿಯಾದ ಅನ್ನವನ್ನು ಸಿದ್ಧಪಡಿಸಬಹುದೆಂಬುದನ್ನು ಯಾರು ಕಂಡುಹಿಡಿದರು..?
ಮನವನ್ನು ಮನಗಳೊಂದಿಗೆ ಬೆರೆಸಲು ನೆರವೀಯುವ ಅಕ್ಷರಗಳನ್ನು ಮೊಟ್ಟಮೊದಲು ಕಂಡುಹಿಡಿದವರಾರು..?
ಬೆಣ್ಣೆ- ಬೆಣ್ಣೆಯಂತಹ ಹತ್ತಿಯಿಂದ ಎಳೆ – ಎಳೆಯಾಗಿ ನೂಲೆಳೆದು ಹಾಗೊಂದು – ಹೀಗೊಂದು ನೇಯ್ದು, ಮೈಮರೆಸುವ – ಮೈಮೆರೆಸುವ ಉಡುಗೆ ತೊಡುಗೆಗಳನ್ನು ನಿರ್ಮಿಸಬಹುದೆಂಬುದು ಯಾರ ಅನ್ವೇಷಣೆ..?
ಬಾಯಾರಿದರೆ ಬಾವಿಗಿಳಿಯಬೇಕಾಗಿಲ್ಲ…!
ಕೊಡದ ಕೊರಳಿಗೆ ಕುಣಿಕೆ ತೊಡಿಸಿ ಬಾವಿಗಿಳಿಸಿದರೆ ಅದರೊಳಗೆ ಕುಳಿತು ನೀರೇ ಮೇಲೇರಿ ನಮ್ಮೆಡೆಗೆ ಬರಬಹುದೆಂಬುದನ್ನು ಕಂಡುಹಿಡಿದವನ ಹೆಸರೇನು..?
ಅಕ್ಕಿಯೊಳಗನ್ನವನು ಮೊದಲಾರು ಕಂಡವನು..?|
ಅಕ್ಕರದ ಬರಹಕ್ಕೆ ಮೊದಲಿಗನದಾರು..? ||
ಲೆಕ್ಕವಿರಿಸಿಲ್ಲ ಜಗ ತನ್ನಾದಿಬಂಧುಗಳ.. |
ಸಿಕ್ಕುವುದೆ ನಿನಗೆ ಜಸ – ಮಂಕುತಿಮ್ಮ…||
ಬದುಕಿನ ಭವನದ ಮೂಲಾಧಾರಶಿಲೆಗಳನ್ನಿಟ್ಟವರ ಗುರುತೇ ಇಲ್ಲ…!
ಆದರೆ ಹೆಸರಿಗಾಗಿ ಓಟ ಮಾತ್ರ ನಿಂತಿಲ್ಲ..!
ಹೆಸರಿಗಾಗಿ ಉಸಿರುಗಟ್ಟಿ ಓಡುವವರೇ…….!!!!
ಈ ಬ್ರಹ್ಮಾಂಡದಲ್ಲಿ ಅದೆಲ್ಲಿ ಕೆತ್ತಿದರೂ ಶಾಶ್ವತವಾಗಿ ಉಳಿಯದು ನಿಮ್ಮ ಹೆಸರು..!!
ಜಗತ್ತಿನ ಅತಿದೊಡ್ಡ ರಥದ ವೀಕ್ಷಣೆ ಹಾಗೂ ಶಿಲ್ಪಪೂಜಾ ಕಾರ್ಯಕ್ರಮದಲ್ಲಿ ಶ್ರೀಗಳವರು ದಿವ್ಯಸಾನಿಧ್ಯವಿತ್ತು ರಾಜಶೇಕರ್ ಹೆಬ್ಬಾರ್ ಮತ್ತು ಕುಟುಂಬದವರಿಗೆ ಆಶೀರ್ವದಿಸಿದರು.. ಈ ಬ್ರಹಧೃಥವನ್ನು ಬಾದಾಮಿ ತಾಲೂಕಿನ ಶಿವಯೋಗ ಮಂದಿರದ ಶತಮಾನೋತ್ಸವಕ್ಕೆ ಶ್ರೀ ಡಿಸೈನ್ ನ ರಾಜಶೇಖರ ಹೆಬ್ಬಾರ್ ರವರು ಕೇವಲ ಐದುತಿಂಗಳಿನಲ್ಲಿ ಸುಮಾರು ೪೫೦೦೦ ಕಿ.ಗ್ರಾಂ ತೂಕವಿರುವ ಜಗತ್ತಿನ ಅತೀ ಎತ್ತರದ (೬೫ ಅಡಿ) ಏಕಾಹ ರಥವನ್ನು… Continue Reading →