ಮಾಣಿ, 31-ಡಿಸೆಂಬರ್-2014: ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಅನುಗ್ರಹಿಸಲ್ಪಡುವ ಅತ್ಯಪೂರ್ವ ಕಾರ್ಯಕ್ರಮ “ಭಾವಪೂಜೆ”ಯು ಇಂದು ಸಹಸ್ರಾರು ಶಿಷ್ಯರ ಆಗಮಿಸುವಿಕೆಯಿಂದ ಅಭೂತಪೂರ್ವ ಯಶಸ್ಸು ಕಂಡಿದೆ. ಶ್ರೀ ರಾಮಚಂದ್ರಾಪುರ ಮಠ ಪೆರಾಜೆ – ಮಾಣಿಯ ಜನಭವನದ ಆವರಣದಲ್ಲಿ ತುಂಬಿ ತುಳುಕಿದ ಶಿಷ್ಯಸ್ತೋಮದ ಹೃನ್ಮನವು ಆನಂದದಿಂದ ತುಂಬಿ ತುಳುಕಿದ್ದು ಎದ್ದು ಕಾಣುತ್ತಿತ್ತು.
ಸಂಗೀತದ ಮಾಧುರ್ಯ, ಗುರುವಾಣಿಯ ಗಾಂಭೀರ್ಯ ಎರಡೂ ಮೇಳೈಸಿದ ಕಾರ್ಯಕ್ರಮದಲ್ಲಿ ರಾಮ-ಹನುಮರು ಭಾವಪೂರ್ವಕ ಪೂಜೆಯನ್ನು ಸ್ವೀಕರಿಸಿದರು.
ಸುಮಾರು ಐದು ಸಾವಿರಕ್ಕೂ ಮಿಕ್ಕಿದ ಶಿಷ್ಯಸ್ತೋಮವು ಸೇರಿತ್ತು. https://hareraama.in/ ಹರೇರಾಮ ವೆಬ್-ಸೈಟ್ ನಲ್ಲಿ ನೇರಪ್ರಸಾರದ ವ್ಯವಸ್ಥೆಯಿತ್ತು, ನೂರಾರು ಕುಟುಂಬವು ಅಂತರ್ಜಾಲದಲ್ಲೇ ನೇರಪ್ರಸಾರದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸಿ ಆನಂದಿಸಿತು.
- ದೀಪ ಪ್ರಜ್ವಾಲನ
- ನೆರೆದ ಶಿಷ್ಯಸ್ತೋಮ
January 1, 2015 at 11:36 AM
ಹರೇರಾಮ
ಶ್ರೀಗುರುಗಳ ಸಮ್ಮುಖದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಶಿಷ್ಯರಿಂದ ನಿಶ್ಯಭ್ಧವಾಗಿ ಅರ್ಪಣಾ ಭಾವದಿಂದ ಶ್ರೀರಾಮಚಂದ್ರನಿಗೆ ಭಾವಪೂಜೆ ನಡೆಯಿತು. ಭಾಗವಹಿಸಿದ ನಾವು ಧನ್ಯ.
January 1, 2015 at 1:22 PM
harerama…..
January 1, 2015 at 9:48 PM
ಹರೇರಾಮ, ಅಂತರ್ಜಾಲದಲ್ಲಿ ವೀಕ್ಷಿಸಿ ಸಂತೋಷಪಟ್ಟವಳಲ್ಲಿ ನಾನೂ ಒಬ್ಬಳು.
January 1, 2015 at 10:57 PM
I had attended the function. Two eyes were not enough to see.
hare rama