ಶ್ರೀ ರಾಮಾಶ್ರಮ, ಬೆಂಗಳೂರು 06-08-2015,ಗುರುವಾರ 

ಬೆಳಗ್ಗೆ:

ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.

~

ಪಾದುಕಾ ಪೂಜೆ:

ಗುರುಜನ (ಮುಕ್ರಿ) ಸಮಾಜ.
~
ಗುರುಭಿಕ್ಷಾ:
ಹೊಸನಗರ, ತೀರ್ತರಾಜಪುರ, ಶಿವಮೊಗ್ಗ
~
ಯಾಗಶಾಲೆ:
ಗಣಪತಿ ಹವನ

~
ಸಭಾವೇದಿಕೆ:
>ಹೊಸನಗರ,  ತೀರ್ಥರಾಜಪುರ , ಶಿವಮೊಗ್ಗ  ವಲಯಗಳ ಪ್ರಧಾನರಿಂದ ವರದಿ ವಾಚನ.

ಹೊಸನಗರ: ರಕ್ತ ಗುಂಪು ವರ್ಗೀಕರಣ ಶಿಬಿರ ನಡೆಸಲಾಗಿದೆ , ಉಚಿತ ಕಣ್ಣು ತಪಾಸಣಾ ಹಾಗೂ ಶಸ್ತ್ರ ಚಿಕಿ ತ್ಸಾ ಶಿಬಿರ ನಡೆಸಲಾಗಿದೆ. ೪೯ ಜನರಿಗೆ ಉಚಿತವಾಗಿ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ೨೧೬ ಜನರಿಗೆ ಅರ್ಧ ಬೆಲೆಯಲ್ಲಿ  ಕನ್ನಡಕ ಕೊಡಿಸಲಾಗಿದೆ.

ತೀರ್ಥರಾಜಪುರ: ಕಾರ್ಯಕರ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಶಿವಮೊಗ್ಗ: ಕೆಲವು ವರ್ಷಗಳ ಹಿಂದೆ ವಿದ್ಯಾನಿಧಿಯಿಂದ ಆರ್ಥಿಕ ಸಹಾಯ ಪಡೆದ ವಿದ್ಯಾರ್ಥಿ, ಅವನ ಮಾತಿನಂತೆ ಈಗ ಇನ್ನೊಬ್ಬ ಹುಡುಗನ ಓದಿಗೆ ನೆರವಾಗುತ್ತಿದ್ದಾನೆ

ಪ್ರಧಾನ ಮಠ: ವಾರಕ್ಕೆ ಒಂದು ದಿನ ಸಿದ್ದಾಪುರ-ಸಾಗರ ಮಂಡಲದ  ಗುರಿಕ್ಕಾರರು ಹೊಸನಗರದ ಪ್ರಧಾನ ಮಠದಲ್ಲಿ ಸೇವೆ ಸಲ್ಲಿಸುವ ಯೋಜನೆಯಾದ ‘ಅರ್ಘ್ಯ’ದ ಕುರಿತು ಮಾಹಿತಿ ನೀಡಲಾಯಿತು.

ಭಾರತಿ ಗುರುಕುಲ: ಶೇಕಡಾ ೧೦೦ ಫಲಿತಾಂಶ

ಅಮೃತಧಾರಾ ಗೋಶಾಲೆ: ಪ್ರತಿನಿತ್ಯ ೧ ಟನ್  ಎರೆಗೊಬ್ಬರ ಉತ್ಪಾದನೆ , ೧೩ ಗವ್ಯೋತ್ಪನ್ನಗಳ ತಯಾರಿಕೆ
>ಛಾತ್ರ ಪುರಸ್ಕಾರ: ಗೋವಿನ ಕೆಚ್ಚಲು ಬಾವು ಎಂಬ ರೋಗಕ್ಕೆ ಮನೆಮದ್ದಿನಿಂದ ಔಷಧಿ ಕಂಡುಹಿಡಿದ ಯುವ ಸಂಶೋಧಕ ಕುಮಾರ್ ವಿಷ್ಣು ಅವರಿಗೆ.

>ಲೋಕಾರ್ಪಣೆ: ಭಾರತಿ ಪ್ರಕಾಶನದಿಂದ,’ಸಾಯುಜ್ಯ’ ಎನ್ನುವ ವಿನೂತನ ಮಾದರಿಯ ಆಟಿಕೆಯನ್ನು ಸನ್ಮಾನಿತ ವಿಷ್ಣು ಅವರು ಲೋಕಾರ್ಪಣೆಗೊಳಿಸಿದರು.

> ಮೂರೂ ವಲಯದ ಮಾತೃ ವಿಭಾಗದವರು ದೀಪದ ಬತ್ತಿಯನ್ನು ಸಮರ್ಪಿಸಿದರು.

>ಉಪಸ್ಥಿತರು: ನಿವೃತ್ತ ಡಿವೈಎಸ್‍ಪಿ ಎನ್.ಆರ್ ಮುಖ್ರಿ, ಖ್ಯಾತ ಕಿರುತೆರೆ ಕಲಾವಿದ ಮಧು ಹೆಗಡೆ, ವಿದ್ವಾನ್ ನಾರಾಯಣ ಭಟ್, ಸಮಾಜ ಸೇವಕ ಡಾ.ಕೆ.ಆರ್ ಮಲ್ಲನ್, ಕೆಎಸ್‍ಒಯು ನ ಹಿಂದಿನ ಕುಲಸಚಿವ ಡಾ.ರಾಧಾಕೃಷ್ಣ ಭಟ್, ಹವ್ಯಕ ಸಮಾಜದ ಮುಖಂಡ ಹರನಾಥರಾವ್, ಖ್ಯಾತ ಡಿಸೈನರ್ ರವೀಶ, ರಾಮಚಂದ್ರಾಪುರ ಮಂಡಲದ ಅಧ್ಯಕ್ಷ ಭಾಗಿ ಸತ್ಯನಾರಾಯಣ, ಕಾರ್ಯದರ್ಶಿ ಸುಬ್ರಹ್ಮಣ್ಯ ಕಾನಗೋಡು, ಶ್ರೀಮಠದ ಸಿಇಒ ಕೆ.ಜಿ ಭಟ್, ಕೋಶಾಧ್ಯಕ್ಷ ಜೆಡ್ಡು ರಾಮಚಂದ್ರ ಭಟ್, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ ಉಪಸ್ಥಿತರಿದ್ದರು. ಕಾರ್ತಿಕ್ ಭಟ್ ನಿರೂಪಿಸಿದರು.

~

ಭಜನೆ:

ಸಾಮೂಹಿಕ ಹನುಮಾನ್ ಚಾಲೀಸ್ ,

~

ಗಾಯನ:

ನರಹರ ದೀಕ್ಷಿತ್

~

ಧರ್ಮಸಭೆ:

ಕಾರ್ಯಕರ್ತ ಹುಟ್ಟಿಕೊಳ್ಳುವುದು ಎರಡು ಸಂದರ್ಭಗಳಲ್ಲಿ, ಒಂದು ಸಂಕಟ ಅಥವಾ ಸಮಸ್ಯೆ ಆದಾಗ. ಹಾಗೂ ಇನ್ನೊಂದು ಯಾವುದೋ ಒಂದು ಮಹತ್ಕಾರ್ಯ ಮಾಡು ವಾಗ. ಹಾಗಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಟ್ಟಲ್ಲಿ ಖಂಡಿತ ಕಾರ್ಯಕತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಲ್ಳುತ್ತಾರೆ. ಅಂದರೆ ವ್ಯಕ್ತಿಯಲ್ಲಿನ ಭಾವನೆಯನ್ನು  ಜಾಗೃಉತಗೊಳಿಸಬೇಕು.

ಪ್ರಧಾನ ಮಠ ಇನ್ನೂ ಎತ್ತರಕ್ಕೆ ಬೆಳೆಯಲಿ, ಎಷ್ಟೊ ಒಳ್ಳೆಯ ಕೆಲಸಗಳು ಆಗಿವೆ. ಇನ್ನು ಬಹಳ ಕೆಲಸಗಳು ಆಗಲಿಕ್ಕಿವೆ.ಗೋಲೋಕ ಇದು ಒಂದು ರೀತಿಯಲ್ಲಿ ಶ್ರೀ  ಮಠದ ತ್ರಿವಿಕ್ರಮ ಹೆಜ್ಜೆ. ಅದನ್ನು ಬೆಳೆಸೋಣ ಸಾಯುಜ್ಯ ಎನ್ನುವ ಮಕ್ಕಳ ಆಟಿಕೆ ಬಿಡುಗಡೆ ಆಗಿದೆ. ಸಾಯುಜ್ಯ ಎನ್ನುವುದು ಬಹು ದೊಡ್ಡ ಅರ್ಥವುಳ್ಳ ಪದ, ಅದನ್ನು ಮಕ್ಕಳ ಹಂತಕ್ಕೆ ಇಳಿಸಲಾಗಿದೆ. ಸಾಯುಜ್ಯ ಪಡೆಯುವ ಗುಣಗಳು ಮಕ್ಕಳಾಗಿದ್ದಾಗಲೇ ಮೈಗೂಡಬೇಕು. ಇದಕ್ಕೆ ಧ್ರುವ, ಪ್ರಹ್ಲಾದ ಉತ್ತಮ ಉದಾಹರಣೆ ಎಂದ ಅವರು, ಶ್ರೀಭಾರತೀ ಪ್ರಕಾಶನ ಮಕ್ಕಳಿಗೆ ಆಟಿಕೆಯ ಮೂಲಕ, ಅಧ್ಯಾತ್ಮದ ಹಾಗೂ ಸಂಸ್ಕøತಿಯನ್ನು ತಿಳಿಸಿಕೊಡುವ ಕೆಲಸ ಮಾಡುತ್ತಿದೆ

English Summary:
Paramapoojya guruji said Volunteers gets involved oly if situation is created. Usually either during difficulty or while achieving huge target volunteers get themselves involved.
He also expressed his happiness over the growth of Pradhana Matha hosanagara, and said may it achieve more heights.
He felt Shri Bharati Prakashana did commendable job in bring the concept “Saaayujya” to the level that even a child can understand.
Today Gurujana(Mukri) samaja people and Hosanagara, Teertharajapura and Shimogga valayas involved in Seve
Young scientist who founded medicine for (ಗೋವಿನ ಕೆಚ್ಚ್ಹಲು ಬಾವು ರೋಗ) was felicitated as Chatra Puraskara and himself launched the “Saayujya” a play item by Bharati Prakashana.
Audio Link:

Download :  Link

Youtube channel Link:  Link

“Saayujya” a unique of its kind game, launched by Bharati Prakashana

Seve from Gurujana(Mukhri) samaja

Seve from Gurujana(Mukhri) samaja

Kumar Vishnu E S

Kumar Vishnu E S

Huge gathering

Huge gathering

Paramapoojya Sri Sri

Paramapoojya Sri Sri

Facebook Comments Box