ಶ್ರೀ ರಾಮಾಶ್ರಮ, ಬೆಂಗಳೂರು 24/08/2015, ಸೋಮವಾರ
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಕುಮಟಾ ಮಂಡಲದ ಮೂರೂರು, ಉಪ್ಪಿನಪೊಟ್ಟಣ, ವಾಲಗಳ್ಳಿ ವಲಯಗಳು
ಧರ್ಮಸಭೆ:
ಬೆಂಗಳೂರು: ಸೋಮವಾರ ಗಿರಿನಗರದ ರಾಮಾಶ್ರಮದಲ್ಲಿ ನಡೆಯುತ್ತಿರುವ ಶ್ರೀರಾಘವೇಶ್ವರಭಾರತೀಶ್ರೀಗಳ ಛಾತ್ರಚಾತುರ್ಮಾಸ್ಯದ ಇಪ್ಪತ್ತೈದನೇ ದಿನದ ಧರ್ಮಸಭೆಯಲ್ಲಿ ಶ್ರೀಭಾರತೀಪ್ರಕಾಶನದಿಂದ ಪ್ರಕಟವಾದ ‘ಮಹಾಭಾರತ ಉಪಕಥೆ-2’ ಪುಸ್ತಕದ ಲೋಕಾರ್ಪಣ ನಡೆಯಿತು.
ಸಂಸ್ಕøತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶುಭಲಕ್ಷ್ಮೀ ಯಾಜಿ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಕುಮಟಾ ಮಂಡಲಾಂತರ್ಗತ ಮೂರೂರು-ಕಲ್ಲಬ್ಬೆ, ಉಪ್ಪಿನಪಟ್ಟಣ, ವಾಲಗಳ್ಳಿ ವಲಯದವರಿಂದ ಸರ್ವಸೇವೆ ನಡೆಯಿತು.
ಶ್ರೀಮತಿ ವಸುಧಾ ಶರ್ಮಾ ತಂಡದವರಿಂದ ಶ್ರೀಶಂಕರಾಚಾರ್ಯ ಸ್ತೋತ್ರ ಸಮರ್ಪಣೆ ನಡೆಯಿತು. ಶ್ರೀಮಠದ ದಿಗ್ದರ್ಶಕ ಮಂಡಲದ ಸದಸ್ಯ ಜಿ.ಎಲ್ ಹೆಗಡೆ, ಮಹಾಮಂಡಲದ ಕಾರ್ಯದರ್ಶಿ ಪ್ರಮೋದ ಪಂಡಿತ್, ಸೇವಾ ಪ್ರಧಾನ ಮಹೇಶ ಚಟ್ನಳ್ಳಿ, ಛಾತ್ರಚಾತುರ್ಮಾಸ್ಯ ವಿವಿಧ ಸಮಿತಿ ಅಧ್ಯಕ್ಷ ಯು.ಎಸ್.ಜಿ ಭಟ್, ಶಂಕರನಾರಾಯಣ ಉಪಾಧ್ಯಾಯ, ಉಪಸ್ಥಿತರಿದ್ದರು. ಸ್ವಾತಿ ನಿರೂಪಿಸಿದರು.
~~~
ಆಗಸ್ಟ್ 25 ರ ಕಾರ್ಯಕ್ರಮಗಳು
ಛಾತ್ರಪುರಸ್ಕಾರ ಮೈತ್ರೇಯ ಹೆಗಡೆ ಇವರಿಗೆ
ಶ್ರೀಭಾರತೀಪ್ರಕಾಶನದಿಂದ ಪ್ರಕಟಗೊಂಡ ‘ಸುಗ್ರೀವ ಆಂಗ್ಲ ಪುಸ್ತಕ ಬಿಡುಗಡೆ
ಕುಮಟಾ ಮಂಡಲಾಂತರ್ಗತ ಧಾರೇಶ್ವರ, ಗುಡೇ ಅಂಗಡಿ, ಹೆಗಡೆ, ಮಿರ್ಜಾನ್ ವಲಯದವರಿಂದ ಸರ್ವಸೇವೆ
Audio:
Download: Link
Video:
Leave a Reply