ಕನಸೆಲ್ಲ ನನಸಾಗುವಂತಿದ್ದರೆ….???
ಕಲ್ಪನೆಯೆಲ್ಲ ವಾಸ್ತವವಾಗುವಂತಿದ್ದರೆ..?
ಒಳಗಣ್ಣಿಗೆ ಕಂಡದ್ದು ಹೊರಗಣ್ಣಿಗೂ ಕಾಣುವಂತಿದ್ದರೆ..?
‘ ಅಂದರ್ ರಾಮಾ ಬಾಹರ್ ರಾಮಾ…’
ಕಣ್ಮುಚ್ಚಿದಾಗ ಕಂಡ ಅನಂತ ಸುಂದರಮೂರ್ತಿಯೊಂದು ಕಣ್ಣೆದುರು ಬರುವಂತಿದ್ದರೆ…?
ಹುತ್ತಗಟ್ಟಿದ ಚಿತ್ತದಲ್ಲಿ ಚೈತನ್ಯಮೂರ್ತಿಯನ್ನು ಕಂಡ ಮುನಿಯ ಮನದಲ್ಲಿ ಹುಟ್ಟಿಕೊಂಡ ಪ್ರಶ್ನೆಯಿದು:
ಈ ಕಾಲದಲ್ಲಿ…ಈ ದೇಶದಲ್ಲಿ ಅಂಥವನೊಬ್ಬನಿರಲು ಸಾಧ್ಯವೇ..?
ದೋಷಗಳ್ಯಾವುವೂ ಇಲ್ಲ…!!
ಗುಣಗಳ್ಯಾವುವೂ ಇಲ್ಲದಿಲ್ಲ…!
ಇಂಥಾ ವ್ಯಕ್ತಿತ್ವವೊಂದನ್ನು ನಾವು ಬದುಕಿರುವ ಭೂಮಿಯಲ್ಲಿ ನಾವು ಬದುಕಿರುವಾಗಲೇ ಕಾಣಲು ಸಾಧ್ಯವೇ..?
ಹಗಲ ಮೊದಲು ರಾತ್ರಿಯಿರುವಂತೆ……!
ಹಸಿವು ತೃಪ್ತಿಗೆ ಪೀಠಿಕೆಯಾಗಿರುವಂತೆ….!
ಮುಕ್ತಿಯ ಮೊದಲು ಬಂಧನವಿರುವಂತೆ..!!
ಉತ್ತರವೊಂದು ಉದಯಿಸಬೇಕಾದರೆ ಪೂರ್ವದಲ್ಲಿ ಪ್ರಶ್ನೆಯೊಂದು ಪ್ರಾದುರ್ಭವಿಸಲೇಬೇಕಲ್ಲವೇ..?
ಲೋಕೋತ್ತರವಾದ ರಾಮಾಯಣ…!!!
ಆ ಪ್ರಶ್ನೆಯಲ್ಲಿ ಅದೆಂಥ ಸೆಳೆತವಿತ್ತೋ..?
ಅದಾವ ಮಿಡಿತವಿತ್ತೋ..?
ಅದೇನು ತುಡಿತವಿತ್ತೋ..?
ಉತ್ತರಿಸಲು ದೇವಲೋಕವೇ ಧರೆಗಿಳಿಯಿತು..!!!
ನರನ ಪ್ರಶ್ನೆ ನಾರಾಯಣನನ್ನೇ ಮುಟ್ಟಿರಬೇಕು…!
‘ ನಾರಾಯಣ ನಾರಾಯಣ ‘ ನಾಮೋಚ್ಚಾರದೊಡನೆ ನಾರದರು ನಾಕದಿಂದಿಳಿದು ಬಂದರು ವಾಲ್ಮೀಕಿಯೆಡೆಗೆ..!
ವಾಲ್ಮೀಕಿಯ ಮೂಲಕ ಭುವಿ ಕೇಳಿದ ಪ್ರಶ್ನೆಗೆ ನಾರದರ ಮೂಲಕ ದಿವಿಯ ಉತ್ತರ..
ಅದುವೇ ರಾಮಾಯಣ..!
ರಾಮಾಯಣವೆಂದರೆ ದಿವಿಭುವಿಗಳ ಸಂಗಮದ ಕಥೆ…
ದಿವಿಯಿಂದ ಭುವಿಗಿಳಿದು ಬಂದವನು ಶ್ರೀರಾಮ…!
ದೇವಲೋಕದಿಂದ ದೇವದೂತ ತಂದಿತ್ತ ದಿವ್ಯಪಾಯಸದಿಂದಲಲ್ಲವೇ ಶ್ರೀರಾಮನ ಆವಿರ್ಭಾವ…!
ಭುವಿಯಿಂದ ಮೇಲೆದ್ದು ಬಂದವಳು ಸೀತೆ..!
ಸಂಸ್ಕೃತದಲ್ಲಿ ಸೀತೆಯೆಂದರೆ ನೇಗಿಲ ರೇಖೆ..!
ಯಜ್ಞಸಮಯದಲ್ಲಿ ಭೂಮಿಯನ್ನುಳುವಾಗ ಜನಕನಿಗೆ ನೇಗಿಲರೇಖೆಯಲ್ಲಲ್ಲವೇ ಆಕೆ ಲಭಿಸಿದ್ದು…!!
ಅವರೀರ್ವರ ಸಮಾಗಮದ ಕಥೆಯೇ ರಾಮಾಯಣ…!!!
ಆದುದರಿಂದಲೇ ಇರಬೇಕು ವಾಲ್ಮೀಕಿ – ನಾರದರ ರೂಪದಲ್ಲಿ ದೇವಲೋಕ-ಭೂಲೋಕಗಳು ಸಂಗಮಿಸಿದಾಗ ರಾಮಾಯಣದ ಅವತಾರವಾಯಿತು…
ರಾಮಬಾಣ ;
ಕೌಸಲ್ಯಾ-ದಶರಥರ ಸಂಬಂಧದಲ್ಲಿ ಜಗತ್ತಿಗೆ ಶ್ರೀರಾಮ ಲಭಿಸಿದಂತೆ…
ವಾಲ್ಮೀಕಿ-ನಾರದರ ಸಂವಾದದಲ್ಲಿ ಜೀವಲೋಕಕ್ಕೆ ಶ್ರೀರಾಮಾಯಣದ ಅಲಭ್ಯಲಾಭವಾಯಿತು…!
Facebook Comments Box
March 11, 2010 at 9:50 AM
ಹರೇ ರಾಮ..
March 11, 2010 at 12:21 PM
ನರ ರಾಮ+ರಾಮಾಯಣ ಮೂಲಕ ನಾರಾಯಣ ಆಗಬಹುದೆ?
ಅನ೦ತ ಕೋಟಿ ಬ್ರಹ್ಮಾ೦ಡ ನಾಯಕನ ಸ೦ಗಮದ ಕಾವ್ಯ ಭೂಮಿಯಲ್ಲಿ ಸೀತೆಯೊ೦ದಿಗೆ..
March 11, 2010 at 1:44 PM
ಕನಸೆಲ್ಲ ನನಸಾಗುವಂತಿದ್ದರೆ….???
ಕಲ್ಪನೆಯೆಲ್ಲ ವಾಸ್ತವವಾಗುವಂತಿದ್ದರೆ..?
ರಾಮಾಯಾಣಾ ಕಥೆಯಾಗದೆ…
ವಾಸ್ತವವೇ ಆಗಿರುತ್ತಿತ್ತು ಅಲ್ಲವೇ..??!!!
March 11, 2010 at 2:22 PM
ಶ್ರೀರಾಮಾಯಣವೆಂಬುದು ಕಪೋಲಕಲ್ಪಿತಕಥೆಯಲ್ಲ . . . ಅದು ‘ ದರ್ಶನ ‘
ವಾಲ್ಮೀಕಿ ಒಳಗಣ್ಣಾರೆ ಕಂಡ ಸತ್ಯ . . . ಅದೇ ವಾಸ್ತವ . . . ಭ್ರಮೆಯಲ್ಲಿರುವುದು ನಾವೇ . . . !
March 11, 2010 at 2:01 PM
ನರ + ನಾರಾಯಣ = ‘ ಶ್ರೀರಾಮ ‘
March 11, 2010 at 3:07 PM
ಭ್ರಮಧೀನರಾಗಿರುವ ನಮಗೆ ರಾಮಾಯಣವೆಂದರೆ ಕೇವಲ ಪುಣ್ಯ ಕಥೆ ಅಲ್ಲಾ, ಅದುವೇ ವಾಸ್ತವ ಎಂಬ ಭಾವ ಹೊಂದಲು ಸಾಧ್ಯ ಎನ್ನುವಿರಾ ಗುರುದೇವಾ…???!!!! ತಮ್ಮನುಗ್ರಹದಿಂದ ಹಾಗೊಂದುವೇಳೆ ಆ ಭಾವದೊಳಗೆ ಲೀನವಾಗಲು ಸಾಧ್ಯವಾದರೆ!!!!!????
ಕನಸು ನನಸಾಗುವುದು ಎಂದರೆ ಅದೇ ಅಲ್ಲವೇ??!!!
ಹರೇ ರಾಮಾ….
March 13, 2010 at 3:50 PM
munde…Ramayana kathe kelalu thudithavide..gurudevaa,,neevenu valmeeki gintha channagi kavya rachisutheeri,,dhanyavaada,,
March 15, 2010 at 11:05 PM
ತುಡಿತವೆಂತಹುದೋ ಕಾಣೆ,
ಬಡಿತವಿಹುದೆದೆಯಲ್ಲಿ,
ರಾಮ ಬರುವನೆಂದು,
ಶ್ರೀರಾಮ ಬರುವನೆಂದು.
ಹರುಷುದಿಂ ಬರಮಾಡಿ,
ಪುರುಷ ರಾಮನ ಕಥೆಯ,
ಮನದೊಳಗೆ, ತನುವೊಳಗೆ,
ಗುರುವ ದಯೆಯೊಳಗೆ.
ಶ್ರೀ ಗುರುಬ್ಯೋನಮಃ||
March 16, 2010 at 1:31 PM
ಅದ್ಭುತ
March 28, 2010 at 8:55 AM
hareraama,athyadbhutha.jai shriraam