ಗುರುಪದ-2
“ದೇವನದಿ ಎನಿಸಿದ ಗ೦ಗೆ ಶ್ರೀಪತಿಯ ಪದಕಮಲದಲ್ಲಿ ಉದ್ಭವಿಸಿದೆ. ಭಗೀರಥನ ವ೦ಶಜರನ್ನು ಉದ್ಧರಿಸಿದವಳು. ದೇಶ-ಕಾಲಗಳನ್ನು ಪಾವನಗೊಳಿಸುತ್ತ ಸಾಗುವವಳು. ಈ ಜ್ಞಾನಗ೦ಗೆಯ ನಡೆಯನ್ನು ಅನುಸರಿಸಿದರೆ ಅದರ ಮೂಲವಾದ ಶ್ರೀಪತಿಯ ಪದಪದ್ಮವನ್ನು ನಾವು ಹೊ೦ದುತ್ತೇವೆ. ಜೀವನದ ಮೂಲವನ್ನು ದೊರಕಿಸಿಕೊಡುವ ದಿವ್ಯನದಿಯೇ ಜೀವನದಿ ಗ೦ಗೆಯಾಗಿದ್ದಾಳೆ”
Facebook Comments Box
October 9, 2011 at 5:57 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು…
ಗುರುಗಳ ಪದಕಮಲದಲ್ಲಿರುವ ನಾವೆಲ್ಲ ಗಂಗೆಯಂತಾಗಲು ಪ್ರಯತ್ನಿಸೋಣವೇ?
October 9, 2011 at 10:59 AM
ಗ೦ಗೆ ಎ೦ದೊಡನೆ ನೆನಪಿಗೆ ಬರುವುದು ಹನುಮಾನ್ ಘಾಟ್, ಕಾಶಿ.
ಕೇವಲ ಮೂರು ಮುಳುಗಲ್ಲಿ, ಕೆಲವು ಕ್ಷಣ Salokya, Samipya, Sarupya, Sarsti, Sayujya ಎಲ್ಲವೂ ದೊರಕಿದ೦ತಹ ಅನುಭವ.
ಅಲ್ಲೇ ಮೆಟ್ಟಿಲ ಮೇಲೆ ಇದ್ದ ಶಿವ ಲಿ೦ಗಕ್ಕೆ ಅಲ್ಲಿ೦ದಲ್ಲೆ ಗ೦ಗೆಯನ್ನು ತೆಗೆದು ಅಲ್ಲಿಯೇ ಅಭಿಷೇಕ ಮಾಡಿದ್ದು ಸ್ಮೃತಿಪಟಲದಲ್ಲಿ ಪಟ ಅನ೦ತ ಜನುಮಕ್ಕೆ..
.
ಶ್ರೀ ಗುರುಭ್ಯೋ ನಮಃ
October 9, 2011 at 12:15 PM
ಗಂಗೆ…
ಒಮ್ಮೆ ನೋಡಿದ್ದೆ..
ಸುಲಭದಲ್ಲ್ಲಿ ಅರ್ಥವಾಗುವಂಥದ್ದಲ್ಲ ಗುರುಪದ..:)
October 10, 2011 at 7:32 PM
ಜೀವನದಿ, ದಿವ್ಯನದಿ,
ಪರಮ ಪಾವನ ಗಂಗೆ-
ಹರಿಯ-ಗೊಡು ಶ್ರೀ ಗುರುವೆ
ನಮ್ಮ ಎದೆಯೊಳಗೆ!
ಜೀವನದಿ ನಗೆ-ನಗದಿ
ಪರಮ ಗುರು ಎನಗೆ
ಹರಿಯ-ಕೊಡು ಶ್ರೀ ಗುರುವೆ
ನಮ್ಮ ಎದೆಯೊಳಗೆ!!
October 11, 2011 at 10:41 AM
ಗುರುವೇ ನದಿ ಯೆ೦ಗೆ
ಪಾವನ ಗ೦ಗೆಯ೦ಗೆ
ಹರಿಯವರೆಗೆ ಹರಿಯುವ
ಗುರಿಯ ವರೆಗೆ ಪೊರೆಯುವ
ಹರಿಯ ಕೊಡು ಶ್ರಿಗುರುವೆ
ನಮ್ಮ ಎದೆಯೊಳಗೆ
ಹರಿಯಗೊಡದಿರು ಮನವ ಈ
ಈ ಮಾಯೆ ಯೊಳಗೆ
October 16, 2011 at 4:59 PM
ಹರೇ ರಾಮ