ಬಜಕ್ಕೂಡ್ಲು ಅಮೃತಧಾರಾ ಗೋಶಾಲೆಗೆ ಅಗತ್ಯವಿರುವ ಮೇವನ್ನು ಸಂಗ್ರಹಿಸಲು ಒಂದು ವಿಶಿಷ್ಟವಾದ ಯೋಜನೆಯನ್ನು ಕೈಗೊಂಡು ಯಶಸ್ವಿಯಾಗಿದೆ. ಬದಿಯಡ್ಕ ಪರಿಸರದ ಗುಡ್ಡಗಳಲ್ಲಿ ಯಥೇಚ್ಚವಾಗಿ ಉಚಿತವಾಗಿ ದೊರೆಯುವ ಮುಳಿಹುಲ್ಲನ್ನು ಕತ್ತರಿಸಿ ಲಾರಿಗಳ ಮೂಲಕ ಗೋಶಾಲೆಗೆ ಸಾಗಿಸಿದಲ್ಲಿ ಗೋಮಾತೆಗೆ ದೊಡ್ಡ ಪ್ರಮಾಣದಲ್ಲಿ ಗೋಗ್ರಾಸ ಲಭ್ಯವಾದೀತು ಎನ್ನುವುದೇ ಈ ಯೋಜನೆ.
ಮೊನ್ನೆ ಫೆಬ್ರವರಿ ೨೮ ರಂದು ಮುಳ್ಳೆರಿಯ ಮಂಡಲದ ಗೋಭಕ್ತ ಸೇವಾಬಿಂದುಗಳು ಒಂದುಗೂಡಿ ಇದನ್ನು ಸಾಕಾರಗೊಳಿಸಿದರು.
ಶ್ರಮದಾನದ ಕೆಲವು ಛಾಯಾಚಿತ್ರಗಳು
Facebook Comments Box
March 8, 2011 at 10:37 AM
ಗುರುಚರಣಗಳಿಗೆ ಅನಂತ ಪ್ರಣಾಮಗಳು.
ಮಾದರಿ ಗೋಸೆವೆಯೊಂದನ್ನು ನಮಗೆಲ್ಲ ತೋರಿಸಿಕೊಟ್ಟ ಮುಳ್ಳೆರಿಯ ಮಂಡಲದ ಗೋಭಕ್ತರಿಗೆ ಅನಂತಾಂತ ಧನ್ಯವಾದಗಳು.