ಶ್ರೀ ರಘೂತ್ತಮ ಮಠ ಕೆಕ್ಕಾರು : 09.08.2014, ಶನಿವಾರ

ಶ್ರೀ ಭಾರತೀ ಪ್ರಕಾಶನದವರು ಪ್ರಕಟಿಸಿದ ಮಹರ್ಷಿಭರದ್ವಾಜ ಕೃತಿಯನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು. ವಿದ್ವಾನ್ ಶ್ರೀಪಾದ ಭಟ್ ಮೂರೂರು ಲೇಖಕರ ನುಡಿಗಳನ್ನಾಡಿದರು. ಹೊಲನಗದ್ದೆಯ ಶ್ರೀಧರ ಸತ್ಯನಾರಾಯಣ ಹೆಗಡೆ ಪ್ರಾಯೋಜಕತ್ವ ವಹಿಸಿದ್ದರು. ಚಾತುರ್ಮಾಸ್ಯಕ್ಕಾಗಿ ಒಂದು ಲಾರಿ ತರಕಾರಿಯನ್ನು ನೀಡಿದ ಮಾಲೂರಿನ ಹನುಮಂತರಾಜು ಅಪ್ಪಿ ಶ್ರೀಗಳವರ ಪ್ರವಚನಮಾಲಿಕೆಯ ಭಜಗೋವಿಂದಂ ಸಿಡಿಯನ್ನು ಬಿಡುಗಡೆಗೊಳಿಸಿದರು. ಮಾಲೂರಿನ ಗೋ ಶಾಲಾ ಸಮಿತಿಯವರು ಶ್ರೀಗಳಿಂದ ಅನುಗ್ರಹ ಪಡೆದರು. ರವೀಂದ್ರ ಭಟ್ಟ ಸೂರಿ ಕೃತಿ ಹಾಗೂ ಲೇಖಕರನ್ನು ಪರಿಚಯಿಸಿ ನಿರೂಪಿಸಿದರು. ಬೆಂಗಳೂರು ಮಂಡಲದ ವರ್ತೂರು, ನಂದಿನಿ, ಸಂಜಯ ವಲಯಗಳು ಸರ್ವಸೇವೆ ನೆರವೇರಿಸಿದರು.

ಶ್ರೀ ಶ್ರೀಗಳ ಪ್ರವಚನ:

’ವಿಮಾನ ಶಾಸ್ತ್ರವನ್ನು ನಮಗೆ ನೀಡಿದ ಹಿರಿಮೆ ಭರದ್ವಾಜರದು.’

ವಿಮಾನ ಶಾಸ್ತ್ರ ಭಾರತೀಯರ ಸಂಶೋಧನೆ. ವಿಮಾನ ಶಾಸ್ತ್ರವನ್ನು ನಮಗೆ ನೀಡಿದ ಹಿರಿಮೆ ಭರದ್ವಾಜರದು. ಭರದ್ವಾಜರ ಕುರಿತು ಕೃತಿ ರಚಿಸಿದ ಮೂರೂರಿನ ವಿದ್ವಾನ್ ಶ್ರೀಪಾದ ಭಟ್ಟರು ಒಬ್ಬ ಸಾಧಕರು. ಸಿದ್ಧರೊಬ್ಬರ ಕೃತಿ ಸಾಧಕರಿಂದ ಹೊರಬಂದಿದೆ ಎಂದು ಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ನಿಮಿತ್ತ ನಡೆದ ಸಭೆಯನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ಶ್ರದ್ಧೆ, ನಂಬಿಕೆ ಮತ್ತು ವಿಶ್ವಾಸದಿಂದ ಮಾತ್ರ ಗುರುಕರುಣೆಗೆ ಪಾತ್ರರಾಗಲು ಸಾಧ್ಯ. ನಿಸ್ವಾರ್ಥ ಭಕ್ತಿಯಿಂದ ಗುರುಸೇವೆಮಾಡಿ ಸಂಪೂರ್ಣ ಶರಣಾದವರಿಗೆ ಗುರುಕೃಪೆ ಖಂಡಿತವಾಗಿ ಲಭ್ಯವಾಗುತ್ತದೆ. ಒಳಗಿನ ಕತ್ತಲೆ ಕಳೆಯಲು ಕೇವಲ ಶಬ್ದಜ್ಞಾನ ಸಾಲದು. ಅದಕ್ಕೆ ಶಾಸ್ತ್ರದೃಷ್ಟಿ, ಗುರುವಾಕ್ಯ, ಆತ್ಮನಿಶ್ಚಯ ಈ ಮೂರೂ ಅಗತ್ಯ ಎಂದು ನುಡಿದರು.

Facebook Comments Box