ಶ್ರೀ ರಾಮಾಶ್ರಮ, ಬೆಂಗಳೂರು 19-08-2015, ಬುಧವಾರ
~
ಬೆಳಗ್ಗೆ:
ಶ್ರೀಕರಾರ್ಚಿತ ಶ್ರೀದೇವರುಗಳ ಪೂಜೆಯ ಸಂಪನ್ನವಾಯಿತು.
~
ಭಜನೆ:
ಸಾಮೂಹಿಕ ಕುಂಕುಮಾರ್ಚನೆ ಹಾಗೂ ಹನುಮಾನ ಚಾಲೀಸ್ ಪಠಣ.
~
ಸರ್ವಸೇವೆ:
ಚಿಂಚನೂರು ಮಹಾಬಲೇಶ್ವರ ಭಟ್.
ಧರ್ಮ ಸಭೆ:
ಇಂದಿನಾಶೀರ್ವಚನ..
ಪ್ರಭುವಿನ ಚರಣಕ್ಕೆ ನಮನ
ಪ್ರತಿಯೊಬ್ಬ ಯಶಸ್ವೀ ನಾಯಕನ ಹಿಂದೆ ನಿಷ್ಠಸೇವಕರಿರುತ್ತಾರೆ
ಗುರುವು, ಪೀಠದ ಮೇಲಿದ್ದರೆ, ಪೀಠವಾಗಿ ಶಿಷ್ಯರಿರುತ್ತಾರೆ
ಒಳಗಿಂದ ಬರುವ ಅನುಭವ ಅರಳಿದ ಹೂವಿನಂತೆ, ಪುಸ್ತಕದಿಂದ ಬರುವ ಅರಿವು ಹೊರಗಿನ ಆಭರಣದಂತೆ…
ಎಲ್ಲರಿಗೂ ಶುಭವಾಗಲಿ..
~
ಶ್ರೀಭಾರತೀ ಪ್ರಕಾಶನದದಿಂದ ಪ್ರಕಟವಾದ ಡಾ.ಗಜಾನನ ಶರ್ಮಾ ಬರೆದಿರುವ £ ‘ಪುಸ್ತಕ ಪಾಂಡಿತ್ಯ’ ಪುಸ್ತಕ ಬಿಡುಗಡೆಯಾಯಿತು. ಸಂಗೀತದಲ್ಲಿ ಮಹತ್ತರ ಸಾಧನೆ ಮಾಡಿದ ಕಾರ್ಕಳದ ಆತ್ರೇಯೀ ಕೃಷ್ಣಾ ಇವರಿಗೆ ಛಾತ್ರಪುರಸ್ಕಾರ ನೀಡಲಾಯಿತು. ಆಯುರ್ವೇದ ತಜ್ಞ ಡಾ.ಗಿರಿಧರ ಖಜೆ, ಮಾತೃ ಪ್ರಧಾನೆ ಈಶ್ವರೀ ಬೇರ್ಕಡವು ಮತ್ತಿತರರಿದ್ದರು. ಪೂರ್ಣತ್ರಯೀ ರಾವ್ ನಿರೂಪಿಸಿದರು
Leave a Reply