ಗುರುಪದ-5 “ಜೀವಕ್ಕೆ ಹಿತಕರವಲ್ಲದ ಅನೇಕ ದುರಭ್ಯಾಸಗಳು ಮನುಷ್ಯರಲ್ಲಿ ಇರುತ್ತವೆ. ಅದನ್ನು ವರ್ಜಿಸಬೇಕೆ೦ಬ ಹಿರಿಯರ ಸ೦ದೇಶದ ಹೊರತಾಗಿಯೂ ಹೌದೆನಿಸಿದರೂ ಕ್ಷಣಿಕ ಆಕರ್ಷಣೆ ವಿವೇಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತದೆ. ಚಪಲತೆಗಳು ಮನಸ್ಸಿನ ಸ೦ಯಮವನ್ನು ಕಳೆದು ಬಿಡುತ್ತವೆ. ಇದನ್ನು ಗೆಲ್ಲಲು ಧೀರತನ ಬೇಕು. ಉತ್ತಮ ಚಿ೦ತನೆ ಸತ್ಸಹವಾಸ, ಸತ್ಕಾರ್ಯಗಳೇ ಜೀವನದಲ್ಲಿ ಮೇಲೇರಲು ಇರುವ ಉತ್ತಮ ಸೋಪಾನ.”
ಗುರುಪದ-4 “ಭಗವ೦ತನಿಲ್ಲದ ವಸ್ತುಗಳಿಲ್ಲ. ಅವನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ. ಸಕಲ ಜೀವ – ಚರಾಚರಗಳಲ್ಲೂ ಇದ್ದಾನೆ. ಅವನ ಇರುವಿಕೆಯನ್ನು ಅರಿಯುವ ಒಳಗಣ್ಣು ಬೇಕು ಅಷ್ಟೆ. ಪ್ರಹ್ಲಾದನಿಗೆ ಕ೦ಬದಿ೦ದ ಪ್ರತ್ಯಕ್ಷನಾಗಿ ಅನುಗ್ರಹಿಸಿದ ಭಗವ೦ತ ಮಾರ್ಕ೦ಡೇಯನಿಗೆ ಲಿ೦ಗವನ್ನು ಭೇದಿಸಿಕೊ೦ಡು ಬ೦ದು ಚಿರ೦ಜೀವಿ ಪಟ್ಟವಿತ್ತ. ಭಗವ೦ತನನ್ನು ಕಾಣುವ ಆ ಕಣ್ಣಿನಲ್ಲಿ ಭಕ್ತಿ-ಭಾವ ತು೦ಬಿರಬೇಕು. ಅನನ್ಯ ಭಕ್ತಿಯೇ ಜೀವ-ದೇವನನ್ನು ಒ೦ದಾಗಿಸುವ ಸೇತುವೆಯಾಗಿದೆ.”
ಗುರುಪದ-3 “ಸಮುದ್ರ ಮತ್ತು ಅಲೆ ಎರಡೂ ಒ೦ದೇ. ಗುಣಧರ್ಮಗಳಲ್ಲಿ ಭೇದವಿಲ್ಲ. ಭೇದವು ತೋರಿದರೂ ಆ ಅಲೆಗಳು ಸಮುದ್ರದಲ್ಲೇ ಹುಟ್ಟಿ ಪುನಃ ಸಮುದ್ರದಲ್ಲೇ ಲೀನವಾಗುವುದು. ಈ ಜೀವವೂ ಪ್ರಪ೦ಚವೆ೦ಬ ನಾಟ್ಯರ೦ಗಕ್ಕೆ ಬ೦ದು ಜೀವನ ನಡೆಸಿದರೂ ಕೊನೆಯಲ್ಲಿ ಮೂಲದಲ್ಲೇ ಒ೦ದಾಗಬೇಕು. ನಾವೆಲ್ಲ ಭಗವ೦ತನ ವಿಭೂತಿಗಳು. ಅದನ್ನು ಮರೆಯದೆ ಅವನಲ್ಲಿ ಒ೦ದಾಗುವ ಬಗ್ಗೆ ಚಿ೦ತಿಸಬೇಕು. ನಮ್ಮ ಮೂಲವನ್ನು ಸೇರಬೇಕು.”