ಗುರುಪದ-1
“ನಾವು ಪುಣ್ಯವೆ೦ಬ ಹಣ ನೀಡಿ ಈ ದೇಹವೆ೦ಬ ನೌಕೆಯನ್ನು ಖರೀದಿಸಿದ್ದೇವೆ. ಈ ದೇಹ ಜೀರ್ಣವಾಗುವುದರೊಳಗೆ ಈ ಸ೦ಸಾರಸಾಗರವನ್ನು ದಾಟಬೇಕು. ಈ ದೇಹನೌಕೆ ಹೊರಗಿನ ವಿಷಯಗಳೆ೦ಬ ಮಾರುತಗಳ ಆಘಾತಕ್ಕೆ ಸಿಲುಕಿ ಹಾಳಾಗದ೦ತೆ ಕಾಪಿಟ್ಟುಕೊ೦ಡು ಗುರಿಯನ್ನು ತಲುಪಬೇಕು. ಈ ಮಾನವದೇಹವೆ೦ಬುದು ಭಗವ೦ತನನ್ನು ಭಾವಿಸಲು ಇರುವ ಬ್ರಹ್ಮನಿರ್ಮಿತ ಪುರವಾಗಿದೆ.”
Facebook Comments Box
October 6, 2011 at 6:53 AM
“ಈ ಮಾನವದೇಹವೆ೦ಬುದು ಭಗವ೦ತನನ್ನು ಭಾವಿಸಲು ಇರುವ ಬ್ರಹ್ಮನಿರ್ಮಿತ ಪುರವಾಗಿದೆ” – ಅದ್ಭುತ.
.
ಶ್ರೀ ಗುರುಭ್ಯೋ ನಮಃ
October 7, 2011 at 8:00 AM
“ಬ್ರಹ್ಮಾನುಭವ ದೇಹಕರುಣಾನುಭವಗಳಲಿ! “………..????
.
ಬ್ರಹ್ಮಾನುಸ೦ಧಾನ ಲೋಕಸ೦ಧಾನದಲಿ |
ಬ್ರಹ್ಮದರ್ಶನವೆಲ್ಲ ಜೀವರೂಪದಲಿ ||
ಬ್ರಹ್ಮಾನುಭವ ದೇಹಕರುಣಾನುಭವಗಳಲಿ! |
ಮರ್ಮವಿದು ಮುಕ್ತಿಗೆಲೋ – ಮ೦ಕುತಿಮ್ಮ ||
.
ಶ್ರೀ ಗುರುಭ್ಯೋ ನಮಃ
October 6, 2011 at 5:53 PM
ಹರೇ ರಾಮ..
October 6, 2011 at 9:49 PM
“ಸತ್ಸ೦ಗತ್ವೇ ನಿಸ್ಸ೦ಗತ್ವ೦
ನಿಸ್ಸ೦ಗತ್ವೇ ನಿರ್ಮೋಹತ್ವ೦ |
ನಿರ್ಮೊಹತ್ವೇ ನಿಶ್ಚಲ ತತ್ತ್ವ೦
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||
ಸತ್ ಸ೦ಗದಿ೦ದ ನಿಸ್ಸ೦ಗತ್ವ, ನಿಸ್ಸ೦ಗತ್ವದಿ೦ದ
ನಿರ್ಮೋಹತ್ವ, ನಿರ್ಮೊಹತ್ವದಿ೦ದ ನಿಶ್ಚಲತತ್ತ್ವ,
ನಿಶ್ಚಲ ತತ್ತ್ವದಿ೦ದ ಜೀವನ್ಮುಕ್ತಿ – ಪ್ರಾಪ್ತವಾಗುತ್ತವೆ. (ಭಜ ಗೋವಿ೦ದ೦ – ೧೦)”
.
ಕೃತಯುಗದ ಮೊದಲನೆ ದಿನದಿ೦ದ ಕೃತಕಯುಗದ ಕೊನೆಯ ದಿನದವರೆಗೂ ಸಲ್ಲುವ ಏಕ ಸತ್ಯ….
ಸೃಷ್ಟಿಯ ನಾ೦ದಿಯಿ೦ದ ಮ೦ಗಲದವರೆಗೂ ನಿಲ್ಲುವ ಏಕ ಉಪದೇಶ….
.
ಶ್ರೀ ಗುರುಭ್ಯೋ ನಮಃ
October 7, 2011 at 10:20 AM
ಹರೇ ರಾಮ
ಮೂರು ಗೆರೆಗಳ ಬರಹಲ್ಲಿ ಆದ್ಯಾತ್ಮದ ಸಾರವೆಲ್ಲವ ಶಿಷ್ಯಕೋಟಿಗೆ ತಿಳಿಸಿದ ಬರಹ ಇದು.
October 7, 2011 at 5:12 PM
ಗುರುವಿನ ದೃಷ್ಟಿಯೇ ಹಾಗೆ, ಗುರುವಿನ ಸೃಷ್ಟಿಯೇ ಹಾಗೆ,
ಪಾವನ ಗಂಗೆಯ ಕಡೆಗೆ ಈ ಸಂಸಾರ ನೌಕೆಯ ಸಾಗಿಸುವ.
ಇರವ ತಿಳಿಹೇಳಿ, ಗುರಿಯ ತೋರಿಸುವ.
ಗುರುಪದವ ಕರುಣಿಸಿದ, ಗುರುಪಾದ-ತಲಕೆ,
ನನ್ನ ಹೃತ್ಪೂರ್ವಕ ನಮನಗಳು.
ಇದು ಪ್ರಾರಂಬ ಮಾತ್ರ,
ಇನ್ನೂ ಬರಲಿ, ಈ ಆದ್ಯಾತ್ಮ ಸಾರ.
October 7, 2011 at 6:12 PM
Gurupadada modala hejjege pranamagalu,
Gurupaada Pavana Gangeyagi sadaa haridubarali, Olagina kole ella tholedu Udharisali,
Hareraama
October 7, 2011 at 11:25 PM
॥ಹರೇ ರಾಮ॥
ಬ್ರಹ್ಮ ನಿರ್ಮಿತ ಈ ಪುರದ ಒಳ ಹೊರ ಸರ್ವತ್ರ ಇರುವ ಆ ಬ್ರಹ್ಮ ಮಾಯೆಯ ಆಶ್ರಯದಲ್ಲಿ ತನ್ನನ್ನು ತಾನೇ ಬಚ್ಹಿಟ್ಟುಕೊಳುತ್ತ ಜಗವ ನಡೆಸುವ…
ಪೂರ್ವಾಜಿತ ಪಾಪ – ಪುಣ್ಯ ವನ್ನೇ ಮೂಲ ಭಂಡವಾಳ ತೊಡಗಿಸಿ ಖರೀಸಿದ ಈ ಶರೀರದ ಮಾಧ್ಯ ದಿಂದ ಜಗದ ವ್ಯವಹಾರ ನಡೆಸುತ್ತಾ ಸಂಪಾದಿಸಿದ ಲಾಭ (ಪುಣ್ಯ) ಯಾ ನಷ್ಟ (ಪಾಪ) ಕ್ಕ ನುಗುಣ ವಾದ ಬುತ್ತಿಯೊಡನೆ ಮುಂದಿನ ಪ್ರಯಾಣದ ತಯಾರಿ ನಡೆಸುವ ನಾವು ಶ್ರೀ ಗುರುಅನುಗ್ರಹ ದಿಂದ ಆ ಮಾಯೆಯನ್ನು ಪಕ್ಕಕ್ಕೆ ಸರಿಸಿ ( ಸೇವಾರ್ಥ / ಅನಾಸಕ್ತ ವ್ಯಾಪಾರ ದಿಂದ) ಅದರ ಹಿಂದಿರುವ ಸ್ವರೂಪವನ್ನು ಕಾಣಲು ಶಕ್ತ ರಾದraದೇ ಈ ವ್ಯಾಪಾರದಲ್ಲಿ ಪಡೆವ ಅತ್ಯಂತ ಲಾಭದಯಕ ನಿವೃತ್ತಿ…ಅದೇ ನಮ್ಮೀ ಜೀವದ ಗುರಿ
ಅಲ್ಲವೇ ಗುರುದೇವ ?
October 11, 2011 at 10:34 AM
ಹರೇರಾಮ್,
ಈ ದೇಹವೆ೦ಬುದೇ ದೊಡ್ಡ ಬ೦ಡವಾಳ
ದೇವರ ಸೇರುವುದೆ ದೊಡ್ಡ ಜೀವಾಳ
ಗುರು ಎ೦ಬುದೋ೦ದು ದೋಡ್ಡ ಗಾಳ
ಹಿಡಿಯಲು ಹರಿಯೆ೦ಬ ಮಸ್ಯ ತಿಮಿ೦ಗಲ
February 1, 2013 at 3:03 PM
ಅದ್ಭುತ. ಶ್ರೀಚರಣಗಳಿಗೆ ಶಿರಸಾ ನಮನಗಳು.