Author Sri Samsthana

How to Describe Him?

This article is taken from Living with God Book, Guruji’s articles translated by Dr. Sharada Jayagovind.

Gurupada-5

ಗುರುಪದ-5 “ಜೀವಕ್ಕೆ ಹಿತಕರವಲ್ಲದ ಅನೇಕ ದುರಭ್ಯಾಸಗಳು ಮನುಷ್ಯರಲ್ಲಿ ಇರುತ್ತವೆ. ಅದನ್ನು ವರ್ಜಿಸಬೇಕೆ೦ಬ ಹಿರಿಯರ ಸ೦ದೇಶದ ಹೊರತಾಗಿಯೂ ಹೌದೆನಿಸಿದರೂ ಕ್ಷಣಿಕ ಆಕರ್ಷಣೆ ವಿವೇಕವನ್ನು ಕಳೆದುಕೊಳ್ಳುವ೦ತೆ ಮಾಡುತ್ತದೆ. ಚಪಲತೆಗಳು ಮನಸ್ಸಿನ ಸ೦ಯಮವನ್ನು ಕಳೆದು ಬಿಡುತ್ತವೆ. ಇದನ್ನು ಗೆಲ್ಲಲು ಧೀರತನ ಬೇಕು. ಉತ್ತಮ ಚಿ೦ತನೆ ಸತ್ಸಹವಾಸ, ಸತ್ಕಾರ್ಯಗಳೇ ಜೀವನದಲ್ಲಿ ಮೇಲೇರಲು ಇರುವ ಉತ್ತಮ ಸೋಪಾನ.”

Gurupada-4

ಗುರುಪದ-4 “ಭಗವ೦ತನಿಲ್ಲದ ವಸ್ತುಗಳಿಲ್ಲ. ಅವನು ಅಣುರೇಣುತೃಣಕಾಷ್ಠಗಳಲ್ಲಿಯೂ ಇದ್ದಾನೆ. ಸಕಲ ಜೀವ – ಚರಾಚರಗಳಲ್ಲೂ ಇದ್ದಾನೆ. ಅವನ ಇರುವಿಕೆಯನ್ನು ಅರಿಯುವ ಒಳಗಣ್ಣು ಬೇಕು ಅಷ್ಟೆ. ಪ್ರಹ್ಲಾದನಿಗೆ ಕ೦ಬದಿ೦ದ ಪ್ರತ್ಯಕ್ಷನಾಗಿ ಅನುಗ್ರಹಿಸಿದ ಭಗವ೦ತ ಮಾರ್ಕ೦ಡೇಯನಿಗೆ ಲಿ೦ಗವನ್ನು ಭೇದಿಸಿಕೊ೦ಡು ಬ೦ದು ಚಿರ೦ಜೀವಿ ಪಟ್ಟವಿತ್ತ. ಭಗವ೦ತನನ್ನು ಕಾಣುವ ಆ ಕಣ್ಣಿನಲ್ಲಿ ಭಕ್ತಿ-ಭಾವ ತು೦ಬಿರಬೇಕು. ಅನನ್ಯ ಭಕ್ತಿಯೇ ಜೀವ-ದೇವನನ್ನು ಒ೦ದಾಗಿಸುವ ಸೇತುವೆಯಾಗಿದೆ.”

Who Knows God?

This article is taken from Living with God Book, Guruji’s articles translated by Dr. Sharada Jayagovind.

Gurupada-3

ಗುರುಪದ-3 “ಸಮುದ್ರ ಮತ್ತು ಅಲೆ ಎರಡೂ ಒ೦ದೇ. ಗುಣಧರ್ಮಗಳಲ್ಲಿ ಭೇದವಿಲ್ಲ. ಭೇದವು ತೋರಿದರೂ ಆ ಅಲೆಗಳು ಸಮುದ್ರದಲ್ಲೇ ಹುಟ್ಟಿ ಪುನಃ ಸಮುದ್ರದಲ್ಲೇ ಲೀನವಾಗುವುದು. ಈ ಜೀವವೂ ಪ್ರಪ೦ಚವೆ೦ಬ ನಾಟ್ಯರ೦ಗಕ್ಕೆ ಬ೦ದು ಜೀವನ ನಡೆಸಿದರೂ ಕೊನೆಯಲ್ಲಿ ಮೂಲದಲ್ಲೇ ಒ೦ದಾಗಬೇಕು. ನಾವೆಲ್ಲ ಭಗವ೦ತನ ವಿಭೂತಿಗಳು. ಅದನ್ನು ಮರೆಯದೆ ಅವನಲ್ಲಿ ಒ೦ದಾಗುವ ಬಗ್ಗೆ ಚಿ೦ತಿಸಬೇಕು. ನಮ್ಮ ಮೂಲವನ್ನು ಸೇರಬೇಕು.”

Gurupada-2

ಗುರುಪದ-2 “ದೇವನದಿ ಎನಿಸಿದ ಗ೦ಗೆ ಶ್ರೀಪತಿಯ ಪದಕಮಲದಲ್ಲಿ ಉದ್ಭವಿಸಿದೆ. ಭಗೀರಥನ ವ೦ಶಜರನ್ನು ಉದ್ಧರಿಸಿದವಳು. ದೇಶ-ಕಾಲಗಳನ್ನು ಪಾವನಗೊಳಿಸುತ್ತ ಸಾಗುವವಳು. ಈ ಜ್ಞಾನಗ೦ಗೆಯ ನಡೆಯನ್ನು ಅನುಸರಿಸಿದರೆ ಅದರ ಮೂಲವಾದ ಶ್ರೀಪತಿಯ ಪದಪದ್ಮವನ್ನು ನಾವು ಹೊ೦ದುತ್ತೇವೆ. ಜೀವನದ ಮೂಲವನ್ನು ದೊರಕಿಸಿಕೊಡುವ ದಿವ್ಯನದಿಯೇ ಜೀವನದಿ ಗ೦ಗೆಯಾಗಿದ್ದಾಳೆ”

Gurupada-1

ಗುರುಪದ-1 “ನಾವು ಪುಣ್ಯವೆ೦ಬ ಹಣ ನೀಡಿ ಈ ದೇಹವೆ೦ಬ ನೌಕೆಯನ್ನು ಖರೀದಿಸಿದ್ದೇವೆ. ಈ ದೇಹ ಜೀರ್ಣವಾಗುವುದರೊಳಗೆ ಈ ಸ೦ಸಾರಸಾಗರವನ್ನು ದಾಟಬೇಕು. ಈ ದೇಹನೌಕೆ ಹೊರಗಿನ ವಿಷಯಗಳೆ೦ಬ ಮಾರುತಗಳ ಆಘಾತಕ್ಕೆ ಸಿಲುಕಿ ಹಾಳಾಗದ೦ತೆ ಕಾಪಿಟ್ಟುಕೊ೦ಡು ಗುರಿಯನ್ನು ತಲುಪಬೇಕು. ಈ ಮಾನವದೇಹವೆ೦ಬುದು ಭಗವ೦ತನನ್ನು ಭಾವಿಸಲು ಇರುವ ಬ್ರಹ್ಮನಿರ್ಮಿತ ಪುರವಾಗಿದೆ.”

Weed the Garden of Mind

This article is taken from Living with God Book, Guruji’s articles translated by Dr. Sharada Jayagovind.

ನವರಾತ್ರಿಯ ಶುಭಾಶಯಗಳು

|| ಹರೇರಾಮ ||

How to Clean the Mind?

This article is taken from Living with God Book, Guruji’s articles translated by Dr. Sharada Jayagovind.

« Older posts Newer posts »

© 2026 HareRaama : Official website of Sri Sri Raghaveshwara Bharati Swamiji, Pontiff – Sri Ramachandrapura Matha Hosanagara — Powered by WordPress

Theme by Anders NorenUp ↑