ನಿನ್ನೆ ಕೆಕ್ಕಾರಿನ ರಘೂತ್ತಮ ಮಠದಲ್ಲಿ ಇನ್ನೊಮ್ಮೆ ಚಾತುರ್ಮಾಸದ ಕಳೆ. ಗುರುವಿನ ಭರವಸೆಯ ನುಡಿಗಳಿಗಾಗಿ ನಗುಮೊಗದ ದರುಶನಕಾಗಿ ಪ್ರಭು ಶ್ರೀರಾಮನಿಗಾಗಿ.. ಮಾಸದ್ವಯಗಳಿಂದ ಪ್ರತೀಕ್ಷೆಯಲ್ಲಿದ್ದ ಶಿಷ್ಯ ಭಕ್ತರ ಭಾವಗಳಿಗೊಂದು ಸ್ಪಂದನ ದೊರೆಯಿತು..ಸದಾ ಗುರು ಚರಣಗಳಿಗರ್ಪಿತವಾದ ಸುಮನಗಳ ಸಮ್ಮಿಳನವಾಯಿತು.. ಅಷ್ಟಕ್ಕೂ ಕೆಕ್ಕಾರಿನಲ್ಲಿ ಯಾವುದೇ ವಿಶೇಷ ಕಾರ್ಯಕ್ರಮವಿರಲಿಲ್ಲ..ಎಂದಿನಂತೆ ಗುರುಗಳ ಆಶೀರ್ವಚನ ಮಂತ್ರಾಕ್ಷತೆಯ ಕಾರ್ಯಕ್ರಮವಿದ್ದಿದ್ದು..ಗುರುಗಳು ಬರುತ್ತಾರೆಂಬ ಆಮಂತ್ರಣವನ್ನು ಯಾರಿಗೂ ನೀಡಿರಲಿಲ್ಲ… ಆದರೆ ಗುರುವಿನ… Continue Reading →
ಮನದ ಮಲಿನವ ತೊಳೆವ, ಭವದ ಬಾಧೆ ಕಳೆವ,ಭಾವಭರಿತ ಮನದಲಿ ರಾಮನ ಕಾಂಬ..ಕಂಡು ಪೂಜಿಪ.. ಸುಯೋಗವಿನ್ನೊಮ್ಮೆ.. ಹೌದು ಬಂಧುಗಳೇ.. ಮಂಗಳವಾರ ದಿನಾಂಕ 23-12-2014 ರಂದು ರಾತ್ರಿ 8.೦೦ ರಿಂದ 9.೦೦ ಗಂಟೆಯವರೆಗೆ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಭಾವಪೂಜೆಯ ಭಾಗ್ಯವನ್ನು ಇನ್ನೊಮ್ಮೆ ಕರುಣಿಸಿರುವರು ನಮ್ಮ ಪ್ರೀತಿಯ ಪೂಜ್ಯರು.. ಎಷ್ಟು ಭಾವಿಸಿದರೂ ಕಡಿಮೆಯೇ.. ಬನ್ನಿ ಭಾವಜಲವನ್ನು ಇನ್ನಷ್ಟು ತುಂಬಿಸಿಕೊಳ್ಳೋಣ… ಯಾರೂ ಅವಕಾಶವಂಚಿತರಲ್ಲ…. Continue Reading →
ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ” ಸಂಜಯನಗರ: 21.12.2014 ದಿನಾಂಕ 21.12.2014 ನೇ ಭಾನುವಾರ ಸಂಜಯನಗರದ ಶಾಸ್ತ್ರೀ ಮೆಮೋರಿಯಲ್ ಹಾಲ್ ನಲ್ಲಿ ಸಂಜಯ ವಲಯ – ಶ್ರೀರಾಮಚಂದ್ರಾಪುರಮಠದ ಮಹಾಮಂಡಲದ-ಸಂಜಯ ವಲಯದ “ವಲಯೋತ್ಸವ” ವೈಭವಯುತವಾಗಿ ನಡೆಯಿತು. ಮಧ್ಯಾ:ನ್ನ 1:00 ಘಂಟೆಗೆ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ದಿವ್ಯ ಸಾನ್ನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಶ್ರೀ ಗಳು ಆಶೀರ್ವಚನದಲ್ಲಿ ಮಾತನಾಡಿ, “ಹಿಂದೆಯೂ ನಾವು ಇಲ್ಲಿ ಬಂದಿದ್ದೇವೆ. ಇಂದಿನ ಈ ಸನ್ನಿವೇಶದಲ್ಲಿ ನಿಮ್ಮ ಯಾರ ಮುಖದಲ್ಲಿಯೂ… Continue Reading →
ಬ್ರಹ್ಮೈಕ್ಯಶ್ರೀಮಜ್ಜಗದ್ಗುರುಶಂಕರಾಚಾರ್ಯಶ್ರೀಶ್ರೀರಾಘವೇಂದ್ರಭಾರತೀಮಹಾಸ್ವಾಮಿಗಳವರ ಆರಾಧನಾ ಮಹೋತ್ಸವದ ಸ್ಮರಣಾರ್ಥ ದಿವ್ಯ ಜೀವನ ಲೇಖನಾಮೃತ – ವಿದ್ವಾನ್ ಜಗದೀಶ ಶರ್ಮಾ ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಹಾಸಂಸ್ಥಾನದ 35ನೆಯ ಪೀಠಾಧಿಪತಿಗಳು. ಪರಮಪೂಜ್ಯ ಶ್ರೀಶ್ರೀಗಳವರ ಪೂರ್ವಾಶ್ರಮದ ತಂದೆ ಶ್ರೀಗಣೇಶ ಭಟ್ಟರು. ತಾಯಿ ಶ್ರೀಮತಿ ಮೂಕಾಂಬಿಕಾ ಅಮ್ಮನವರು. ಪೂರ್ವಾಶ್ರಮದ ಊರು ಶಿವಮೊಗ್ಗ ಜಿಲ್ಲೆಯ, ಸಾಗರ ತಾಲೂಕಿನ, ಮಾಗಲು ಎಂಬ ಮಲೆನಾಡಮಡಿಲ ಪುಟ್ಟ ಗ್ರಾಮ. ಅವರದ್ದು ಸಂಪ್ರದಾಯಸ್ಥ… Continue Reading →